ಪಂದ್ಯ ಗೆದ್ದಾಗ ಭಾರತದ ಧ್ವಜ ಹಿಡಿಯುವುದೇ ಅತ್ಯಂತ ಸಂತಸದ ಕ್ಷಣ. ಪ್ರೋತ್ಸಾಹ ಸಿಕ್ಕರೆ ನಾವು ಇನ್ನಷ್ಟು ಸಾಧನೆ ಮಾಡಲು ಅನುಕೂಲವಾಗಲಿದೆ. ನಮಗೆ ಆಡಲು ಕ್ರೀಡಾಂಗಣಗಳು ಇಲ್ಲ. ಕ್ರೀಡಾ ಪ್ರಶಸ್ತಿ ನೀಡುವಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ. ನಾಲ್ಕು ಬಾರಿ ವಿಶ್ವಕಪ್ ಗೆದ್ದರೂ ಸರ್ಕಾರದಿಂದ ಉದ್ಯೋಗ ನೀಡುವ ಮಾತಿಲ್ಲ. ಇನ್ನಷ್ಟು ಪ್ರಾಯೋಜಕತ್ವ, ನಗದು ಬಹುಮಾನಗಳ ಕೊಡುಗೆ ಬೇಕು‘ ಎಂದು ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ ಅಜಯ್ ಕುಮಾರ್ ರೆಡ್ಡಿ ನುಡಿದರು.