<p><strong>ನವದೆಹಲಿ (ಪಿಟಿಐ):</strong> ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಸೆಮಿಫೈನಲ್ ಕನಸು ಬಹುತೇಕ ಕಮರಿಹೋಗಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮಣಿದ ತಂಡಕ್ಕೆ ಎರಡನೇ ಪಂದ್ಯದಲ್ಲೂ ಚೇತರಿಸಿಕೊಳ್ಳಲು ಆಗಲಿಲ್ಲ.</p>.<p>ನ್ಯೂಜಿಲೆಂಡ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ತಂಡ ಎಂಟು ವಿಕೆಟ್ಗಳಿಂದ ಸೋತ ನಂತರ ತಂಡದ ಈ ಸ್ಥಿತಿಗೆ ಕಾರಣದ ಹುಡುಕಾಟ ಆರಂಭವಾಗಿದೆ. ಸತತವಾಗಿ ಬಯೊಬಬಲ್ನಲ್ಲಿದ್ದು ಮಾನಸಿಕವಾಗಿ ಬಳಲಿರುವ ಆಟಗಾರರು, ತಂಡದ ಆಯ್ಕೆಯಲ್ಲಿ ಆಗಿರುವ ಲೋಪ ಮತ್ತು ನಾಯಕನ ವೈಫಲ್ಯವೇ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.</p>.<p>ಈ ವರ್ಷ ತಂಡದ ವೈಫಲ್ಯಕ್ಕೆ ನಿಖರ ಕಾರಣವೇನೆಂದು ಹೇಳಲಾಗದು. ಆದರೆ ಟ್ವೆಂಟಿ–20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಶಹೀನ್ ಶಾ ಅಫ್ರಿದಿ ಅವರ ಮೊದಲ ಎರಡು ಓವರ್ಗಳು ಭಾರತ ತಂಡದ ಹಾದಿಯನ್ನೇ ಬದಲಿಸಿದ್ದವು. ಆ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ತಂಡಕ್ಕೆ ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲೂ ಲಯ ಕಂಡುಕೊಳ್ಳಲು ಆಗಲಿಲ್ಲ. ಈ ಪಂದ್ಯದ ನಂತರ ‘ತಂಡದಲ್ಲಿ ಧೈರ್ಯ ಇಲ್ಲ’ ಎಂದು ನಾಯಕ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ.</p>.<p>‘ಭಾರತದ ಸೋಲು ನನಗೂ ಆಘಾತ ತಂದಿದೆ. ತಂಡ ಸೋತಿದ್ದಕ್ಕಲ್ಲ, ಸೋತ ರೀತಿಗೆ ಅಚ್ಚರಿಯಾಗಿದೆ. ನೆರವು ಸಿಬ್ಬಂದಿಯ ಸಲಹೆಗಳನ್ನು ಸರಿಯಾಗಿ ಜಾರಿಗೆ ತರಲು ಆಟಗಾರರು ವಿಫಲರಾಗುತ್ತಿದ್ದಾರೆ’ ಎಂದು ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ವಿ.ವಿ.ಎಸ್ ಲಕ್ಷ್ಮಣ್ ಹೇಳಿದ್ದರು.</p>.<p>ಟ್ವೆಂಟಿ–20 ತಂಡದನಾಯಕತ್ವದ ಕೊನೆಯ ಹಂತದಲ್ಲಿರುವ ವಿರಾಟ್ ಕೊಹ್ಲಿ ಅವರಿಗೆ ಐಸಿಸಿಯ ಪ್ರಮುಖ ಟೂರ್ನಿಗಳಲ್ಲಿ ತಮ್ಮ ಸಾಮರ್ಥ್ಯ ತೋರಲು ಆಗಲಿಲ್ಲ. ಐಪಿಎಲ್ನಲ್ಲಿ ಕೂಡ ತಾವು ಮುನ್ನಡೆಸುವ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡಲು ಆಗಲಿಲ್ಲ. ದ್ವಿಪಕ್ಷೀಯ ಸರಣಿಗಳಲ್ಲಿ ಮಾತ್ರ ಯಶಸ್ಸು ಗಳಿಸುತ್ತಿದ್ದಾರೆ.</p>.<p>ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ 11ರ ಆಯ್ಕೆಯಲ್ಲೂ ತಂಡ ಎಡವುತ್ತಿದೆ. ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬದಲಿಗೆ ಇಶಾನ್ ಕಿಶನ್ ಅವರನ್ನು ಇನಿಂಗ್ಸ್ ಆರಂಭಿಸಲು ಕಳುಹಿಸಿದ್ದಕ್ಕೆ ಟೀಕೆಗಳು ಎದ್ದಿವೆ.</p>.<p>ಮಾಜಿ ಆಟಗಾರ ಮತ್ತು ವೀಕ್ಷಕ ವಿವರಣೆಕಾರ ಸುನಿಲ್ ಗಾವಸ್ಕರ್ ಅವರೇ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಅವರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿರುವುದು ಕೂಡ ಟೀಕೆಗೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಸೆಮಿಫೈನಲ್ ಕನಸು ಬಹುತೇಕ ಕಮರಿಹೋಗಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮಣಿದ ತಂಡಕ್ಕೆ ಎರಡನೇ ಪಂದ್ಯದಲ್ಲೂ ಚೇತರಿಸಿಕೊಳ್ಳಲು ಆಗಲಿಲ್ಲ.</p>.<p>ನ್ಯೂಜಿಲೆಂಡ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ತಂಡ ಎಂಟು ವಿಕೆಟ್ಗಳಿಂದ ಸೋತ ನಂತರ ತಂಡದ ಈ ಸ್ಥಿತಿಗೆ ಕಾರಣದ ಹುಡುಕಾಟ ಆರಂಭವಾಗಿದೆ. ಸತತವಾಗಿ ಬಯೊಬಬಲ್ನಲ್ಲಿದ್ದು ಮಾನಸಿಕವಾಗಿ ಬಳಲಿರುವ ಆಟಗಾರರು, ತಂಡದ ಆಯ್ಕೆಯಲ್ಲಿ ಆಗಿರುವ ಲೋಪ ಮತ್ತು ನಾಯಕನ ವೈಫಲ್ಯವೇ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.</p>.<p>ಈ ವರ್ಷ ತಂಡದ ವೈಫಲ್ಯಕ್ಕೆ ನಿಖರ ಕಾರಣವೇನೆಂದು ಹೇಳಲಾಗದು. ಆದರೆ ಟ್ವೆಂಟಿ–20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಶಹೀನ್ ಶಾ ಅಫ್ರಿದಿ ಅವರ ಮೊದಲ ಎರಡು ಓವರ್ಗಳು ಭಾರತ ತಂಡದ ಹಾದಿಯನ್ನೇ ಬದಲಿಸಿದ್ದವು. ಆ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ತಂಡಕ್ಕೆ ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲೂ ಲಯ ಕಂಡುಕೊಳ್ಳಲು ಆಗಲಿಲ್ಲ. ಈ ಪಂದ್ಯದ ನಂತರ ‘ತಂಡದಲ್ಲಿ ಧೈರ್ಯ ಇಲ್ಲ’ ಎಂದು ನಾಯಕ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ.</p>.<p>‘ಭಾರತದ ಸೋಲು ನನಗೂ ಆಘಾತ ತಂದಿದೆ. ತಂಡ ಸೋತಿದ್ದಕ್ಕಲ್ಲ, ಸೋತ ರೀತಿಗೆ ಅಚ್ಚರಿಯಾಗಿದೆ. ನೆರವು ಸಿಬ್ಬಂದಿಯ ಸಲಹೆಗಳನ್ನು ಸರಿಯಾಗಿ ಜಾರಿಗೆ ತರಲು ಆಟಗಾರರು ವಿಫಲರಾಗುತ್ತಿದ್ದಾರೆ’ ಎಂದು ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ವಿ.ವಿ.ಎಸ್ ಲಕ್ಷ್ಮಣ್ ಹೇಳಿದ್ದರು.</p>.<p>ಟ್ವೆಂಟಿ–20 ತಂಡದನಾಯಕತ್ವದ ಕೊನೆಯ ಹಂತದಲ್ಲಿರುವ ವಿರಾಟ್ ಕೊಹ್ಲಿ ಅವರಿಗೆ ಐಸಿಸಿಯ ಪ್ರಮುಖ ಟೂರ್ನಿಗಳಲ್ಲಿ ತಮ್ಮ ಸಾಮರ್ಥ್ಯ ತೋರಲು ಆಗಲಿಲ್ಲ. ಐಪಿಎಲ್ನಲ್ಲಿ ಕೂಡ ತಾವು ಮುನ್ನಡೆಸುವ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡಲು ಆಗಲಿಲ್ಲ. ದ್ವಿಪಕ್ಷೀಯ ಸರಣಿಗಳಲ್ಲಿ ಮಾತ್ರ ಯಶಸ್ಸು ಗಳಿಸುತ್ತಿದ್ದಾರೆ.</p>.<p>ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ 11ರ ಆಯ್ಕೆಯಲ್ಲೂ ತಂಡ ಎಡವುತ್ತಿದೆ. ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬದಲಿಗೆ ಇಶಾನ್ ಕಿಶನ್ ಅವರನ್ನು ಇನಿಂಗ್ಸ್ ಆರಂಭಿಸಲು ಕಳುಹಿಸಿದ್ದಕ್ಕೆ ಟೀಕೆಗಳು ಎದ್ದಿವೆ.</p>.<p>ಮಾಜಿ ಆಟಗಾರ ಮತ್ತು ವೀಕ್ಷಕ ವಿವರಣೆಕಾರ ಸುನಿಲ್ ಗಾವಸ್ಕರ್ ಅವರೇ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಅವರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿರುವುದು ಕೂಡ ಟೀಕೆಗೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>