ಈ ವಿಷಯವನ್ನು ಟ್ವೀಟ್ ಮಾಡಿರುವ ಸಚಿನ್, ‘ಇಂತಹ ಒಳ್ಳೆಯ ವ್ಯಕ್ತಿಗಳು ಇರುವುದರಿಂದಲೇ ಜಗತ್ತು ಸುಂದರವಾಗಿದೆ. ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತೆಯೊಬ್ಬರು ರಸ್ತೆ ಅಪಘಾತಕ್ಕೊಳಗಾದರು. ಆಗ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಕಾನ್ಸ್ಟೇಬಲ್ ತೀವ್ರವಾಗಿ ಗಾಯಗೊಂಡಿದ್ದ ಸ್ನೇಹಿತೆಯನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದರು. ತಾವೇ ಆಸ್ಪತ್ರೆಗೂ ತೆರಳಿ, ಆಕೆಗೆ ಸಕಾಲಕ್ಕೆ ಚಿಕಿತ್ಸೆ ಸಿಗುವಂತೆ ನೋಡಿಕೊಂಡರು. ಆಕೆಯ ಬೆನ್ನುಹುರಿಗೆ ಬಲವಾದ ಏಟು ಬಿದ್ದಿತ್ತು. ಆದರೆ, ಸಕಾಲಿಕ ಚಿಕಿತ್ಸೆಯಿಂದ ಜೀವ ಉಳಿಯಿತು. ಅದಕ್ಕೆ ಕಾರಣವಾದವರು ಪೊಲೀಸ್ ಕಾನ್ಸ್ಟೇಬಲ್’ ಎಂದಿದ್ದಾರೆ.