<p><strong>ನವದೆಹಲಿ:</strong> ಕೋವಿಡ್–19 ಸಾಂಕ್ರಾಮಿಕ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಭಾರತವು ಎರಡು ವಿಭಿನ್ನ ತಂಡಗಳನ್ನು ಭಿನ್ನ ತಾಣಗಳಲ್ಲಿ ಕಣಕ್ಕಿಳಿಸುವುದು ಮುಂದುವರಿಯಬಹುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಖಜಾಂಚಿ ಅರುಣ್ ಧುಮಾಲ್ ಬುಧವಾರ ಅಭಿಪ್ರಾಯಪಟ್ಟಿದ್ದಾರೆ.</p>.<p>ಇದರಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ಗೆಹೆಚ್ಚು ಅವಕಾಶ ನೀಡಿದಂತಾಗುತ್ತದೆ ಮತ್ತು ಬಯೋ-ಬಬಲ್ ಆಯಾಸದಿಂದ ಎಲ್ಲ ಮಾದರಿಯ ಆಟಗಾರರಿಗೆ ಸ್ವಲ್ಪ ಬಿಡುವು ಸಿಗುತ್ತದೆ ಎಂದು ಅವರು ಹೇಳಿದ್ದಾರೆ.</p>.<p>ವಿರಾಟ್-ಕೊಹ್ಲಿ ನೇತೃತ್ವದ ಪ್ರಮುಖ ತಂಡವು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗಾಗಿ ಸದ್ಯ ಇಂಗ್ಲೆಂಡ್ನಲ್ಲಿದೆ. ಶಿಖರ್ ಧವನ್ ನಾಯಕತ್ವದ ಇನ್ನೊಂದು ತಂಡವು ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ಸೀಮಿತ ಓವರ್ಗಳ ಸರಣಿಗಾಗಿ ಆ ದೇಶಕ್ಕೆ ತೆರಳಲಿದೆ. ಭಾರತದ ಕ್ರಿಕೆಟ್ನಲ್ಲಿ ಇದೊಂದು ಅಪರೂಪದ ನಿದರ್ಶನವಾಗಿದೆ.</p>.<p>ಆಟಗಾರರಿಗೆ ಬಬಲ್ ಜೀವನದಿಂದ ಸ್ವಲ್ಪ ವಿರಾಮ ನೀಡುವ ಅಗತ್ಯತೆಯ ಬಗ್ಗೆ ಕೊಹ್ಲಿ ಈಗಾಗಲೇ ಮಾತನಾಡಿದ್ದಾರೆ.</p>.<p>‘ಮುಖ್ಯ ತಂಡದ ಆಟಗಾರರು ಬೇರೆಡೆ ಆಡುತ್ತಿರುವಾಗ ಅಥವಾ ವಿರಾಮ ಅಗತ್ಯವಿದ್ದಾಗ ಭಾರತದ ಯುವ ತಂಡವು ಮತ್ತೊಂದು ಸೀಮಿತ ಓವರ್ಗಳ ಟೂರ್ನಿಯಲ್ಲಿ ಆಡುವ ಸಾಧ್ಯತೆ ಖಂಡಿತ ಇದೆ‘ ಎಂದು ಧುಮಾಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<p>‘ಎರಡು ತಂಡಗಳಾಗಿ ಆಡುವ ಈ ಪ್ರಕ್ರಿಯೆಯು ಭಾರತದ ಕಿರಿಯರ ಪಡೆಯು ಬಲಿಷ್ಠವಾಗಿರುವುದನ್ನು ಸೂಚಿಸುತ್ತದೆ ಮತ್ತು ಹೆಚ್ಚಿನ ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸುವ ಮೂಲಕ ಕೋವಿಡ್ನಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಇತರ ಕ್ರಿಕೆಟ್ ಮಂಡಳಿಗಳಿಗೆ ಸಹಾಯ ಮಾಡಲು ನಮಗೆ ಅವಕಾಶವಾಗುತ್ತದೆ‘ ಎಂದು ಅವರು ಪ್ರತಿಪಾದಿಸಿದ್ದಾರೆ.</p>.<p>‘ದೇಶದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಎಲ್ಲ ಅಗತ್ಯ ಕ್ರಮಗಳನ್ನು ಬಿಸಿಸಿಐ ತೆಗೆದುಕೊಳ್ಳುತ್ತಿದೆ‘ ಎಂದು ಇದೇ ವೇಳೆ ಧುಮಾಲ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೋವಿಡ್–19 ಸಾಂಕ್ರಾಮಿಕ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಭಾರತವು ಎರಡು ವಿಭಿನ್ನ ತಂಡಗಳನ್ನು ಭಿನ್ನ ತಾಣಗಳಲ್ಲಿ ಕಣಕ್ಕಿಳಿಸುವುದು ಮುಂದುವರಿಯಬಹುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಖಜಾಂಚಿ ಅರುಣ್ ಧುಮಾಲ್ ಬುಧವಾರ ಅಭಿಪ್ರಾಯಪಟ್ಟಿದ್ದಾರೆ.</p>.<p>ಇದರಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ಗೆಹೆಚ್ಚು ಅವಕಾಶ ನೀಡಿದಂತಾಗುತ್ತದೆ ಮತ್ತು ಬಯೋ-ಬಬಲ್ ಆಯಾಸದಿಂದ ಎಲ್ಲ ಮಾದರಿಯ ಆಟಗಾರರಿಗೆ ಸ್ವಲ್ಪ ಬಿಡುವು ಸಿಗುತ್ತದೆ ಎಂದು ಅವರು ಹೇಳಿದ್ದಾರೆ.</p>.<p>ವಿರಾಟ್-ಕೊಹ್ಲಿ ನೇತೃತ್ವದ ಪ್ರಮುಖ ತಂಡವು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗಾಗಿ ಸದ್ಯ ಇಂಗ್ಲೆಂಡ್ನಲ್ಲಿದೆ. ಶಿಖರ್ ಧವನ್ ನಾಯಕತ್ವದ ಇನ್ನೊಂದು ತಂಡವು ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ಸೀಮಿತ ಓವರ್ಗಳ ಸರಣಿಗಾಗಿ ಆ ದೇಶಕ್ಕೆ ತೆರಳಲಿದೆ. ಭಾರತದ ಕ್ರಿಕೆಟ್ನಲ್ಲಿ ಇದೊಂದು ಅಪರೂಪದ ನಿದರ್ಶನವಾಗಿದೆ.</p>.<p>ಆಟಗಾರರಿಗೆ ಬಬಲ್ ಜೀವನದಿಂದ ಸ್ವಲ್ಪ ವಿರಾಮ ನೀಡುವ ಅಗತ್ಯತೆಯ ಬಗ್ಗೆ ಕೊಹ್ಲಿ ಈಗಾಗಲೇ ಮಾತನಾಡಿದ್ದಾರೆ.</p>.<p>‘ಮುಖ್ಯ ತಂಡದ ಆಟಗಾರರು ಬೇರೆಡೆ ಆಡುತ್ತಿರುವಾಗ ಅಥವಾ ವಿರಾಮ ಅಗತ್ಯವಿದ್ದಾಗ ಭಾರತದ ಯುವ ತಂಡವು ಮತ್ತೊಂದು ಸೀಮಿತ ಓವರ್ಗಳ ಟೂರ್ನಿಯಲ್ಲಿ ಆಡುವ ಸಾಧ್ಯತೆ ಖಂಡಿತ ಇದೆ‘ ಎಂದು ಧುಮಾಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<p>‘ಎರಡು ತಂಡಗಳಾಗಿ ಆಡುವ ಈ ಪ್ರಕ್ರಿಯೆಯು ಭಾರತದ ಕಿರಿಯರ ಪಡೆಯು ಬಲಿಷ್ಠವಾಗಿರುವುದನ್ನು ಸೂಚಿಸುತ್ತದೆ ಮತ್ತು ಹೆಚ್ಚಿನ ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸುವ ಮೂಲಕ ಕೋವಿಡ್ನಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಇತರ ಕ್ರಿಕೆಟ್ ಮಂಡಳಿಗಳಿಗೆ ಸಹಾಯ ಮಾಡಲು ನಮಗೆ ಅವಕಾಶವಾಗುತ್ತದೆ‘ ಎಂದು ಅವರು ಪ್ರತಿಪಾದಿಸಿದ್ದಾರೆ.</p>.<p>‘ದೇಶದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಎಲ್ಲ ಅಗತ್ಯ ಕ್ರಮಗಳನ್ನು ಬಿಸಿಸಿಐ ತೆಗೆದುಕೊಳ್ಳುತ್ತಿದೆ‘ ಎಂದು ಇದೇ ವೇಳೆ ಧುಮಾಲ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>