‘ಉಮರ್ ಮೂರ್ಛೆರೋಗದಿಂದ ಬಳಲುತ್ತಿರುವುದನ್ನು ವೈದ್ಯಕೀಯ ವರದಿಗಳು ಖಚಿತಪಡಿಸಿದ್ದವು. ವೆಸ್ಟ್ ಇಂಡೀಸ್ ಪ್ರವಾಸದಿಂದ ಆತನನ್ನು ವಾಪಸ್ ಕರೆಸಲಾಗಿತ್ತು. ಇದೊಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ವಿಶ್ರಾಂತಿ ಹಾಗೂ ಚಿಕಿತ್ಸೆ ಪಡೆದುಕೊ ಎಂದು ಆತನಿಗೆ ಸೂಚಿಸಿದ್ದೆ. ಆದರೆ ಇದನ್ನು ಆತ ಸ್ವೀಕರಿಸಲಿಲ್ಲ. ಆತನ ಮನಸ್ಸು ಎಲ್ಲೋ ಇತ್ತು’ ಎಂದು ಸೇಥಿ, ಟಿವಿ ಚಾನೆಲ್ವೊಂದಕ್ಕೆ ತಿಳಿಸಿದ್ದಾರೆ.