ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಮಹಿಳಾ ತಂಡಕ್ಕೆ ವೇದಾ ನಾಯಕಿ

ಬಿಸಿಸಿಐ ಸೀನಿಯರ್ ಮಹಿಳೆಯರ ಟಿ20 ಟ್ರೋಫಿ ಕ್ರಿಕೆಟ್ ಟೂರ್ನಿ
Last Updated 5 ಏಪ್ರಿಲ್ 2022, 16:26 IST
ಅಕ್ಷರ ಗಾತ್ರ

ಬೆಂಗಳೂರು: ಅನುಭವಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರನ್ನು ಬಿಸಿಸಿಐ ಸೀನಿಯರ್ ಮಹಿಳಾ ಟಿ20 ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡಕ್ಕೆ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ.

ಏಪ್ರಿಲ್ 18ರಿಂದ ರಾಜ್‌ಕೋಟ್‌ನಲ್ಲಿ ಟೂರ್ನಿ ನಡೆಯಲಿದೆ. ಕರ್ನಾಟಕ ತಂಡವನ್ನು ಕೆಎಸ್‌ಸಿಎ ಮಂಗಳವಾರ ಪ್ರಕಟಿಸಿದೆ. ಈ ಬಳಗಕ್ಕೆ ದಿವ್ಯಾ ಜ್ಞಾನಾನಂದ ಉಪನಾಯಕಿಯಾಗಿದ್ದಾರೆ.

ತಂಡ: ವೇದಾ ಕೃಷ್ಣಮೂರ್ತಿ (ನಾಯಕಿ), ದಿವ್ಯಾ ಜ್ಞಾನಾನಂದ (ಉಪನಾಯಕಿ), ಶುಭಾ ಸತೀಶ್, ರಕ್ಷಿತಾ ಕೃಷ್ಣಪ್ಪ,ಪಿ. ಸಲೋನಿ (ಮೂವರು ಮೈಸೂರು), ಪ್ರತ್ಯುಷಾ ಚೆಲ್ಲೂರ್, ಮೋನಿಕಾ ಪಟೇಲ್, ಆಕಾಂಕ್ಷಾ ಕೊಹ್ಲಿ, ರಾಮೇಶ್ವರಿ ಗಾಯಕವಾಡ, ಸಹನಾ ಪವಾರ್, ಸಂಜನಾ ಬತ್ನಿ (ವಿಕೆಟ್‌ಕೀಪರ್), ವಿ. ಚಂದು, ವೃಂದಾ ದಿನೇಶ್, ನಿಕಿ ಪ್ರಸಾದ್, ಅದಿತಿ ರಾಜೇಶ್ (ಶಿವಮೊಗ್ಗ), ಪ್ರತ್ಯೂಷಾ ಕುಮಾರ್ (ವಿಕೆಟ್‌ಕೀಪರ್), ಶಿಶಿರಾ ಗೌಡ (ಚಿಕ್ಕಮಗಳೂರು), ಶ್ರೇಯಾಂಕಾ ಪಾಟೀಲ, ಚಾಂದಸಿ ಕೃಷ್ಣಮೂರ್ತಿ, ರೋಷಿನಿ ಕಿರಣ್, ಮಮತಾ ಮಾಬೆನ್ (ಕೋಚ್), ರಚೆಲ್ ವಿನೋದ್ ಶೆಟ್ಟಿ (ಸಹಾಯಕ ಕೋಚ್/ಮ್ಯಾನೇಜರ್), ಎನ್. ಸಿಂಧು (ಫಿಸಿಯೊ), ಬಿ. ಹಿತೈಷಿ (ಸ್ಟ್ರೇಂಥ್ –ಕಂಡಿಷನಿಂಗ್ ಕೋಚ್), ಮಾಲಾ ರಂಗಸ್ವಾಮಿ (ವಿಡಿಯೊ ಅನಾಲಿಸ್ಟ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT