ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಒಡಿಶಾ ಫೀ್ಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯ ತಂಡದ ಆರಂಭಿಕ ಜೋಡಿ ಆರ್. ಸಮರ್ಥ್ (60; 83ಎಸೆತ, 4ಬೌಂ) ಮತ್ತು ದೇವದತ್ತ (152; 140ಎ, 14ಬೌಂ, 5ಸಿ) ಮೊದಲ ವಿಕೆಟ್ ಜೊತೆಯಾಟದಲ್ಲಿ 140 ರನ್ಗಳನ್ನು ಸೇರಿಸಿದರು. ಈ ಅಡಿಪಾಯದ ಮೇಲೆ ತಂಡವು 50 ಓವರ್ಗಳಲ್ಲಿ 5 ವಿಕೆಟ್ಗಳಿಗೆ 329 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಒಡಿಶಾ ತಂಡವು 44 ಓವರ್ಗಳಲ್ಲಿ 228 ರನ್ ಗಳಿಸಲಷ್ಟೇ ಶಕ್ತವಾಯಿತು. ಶುಭ್ರಾಂಶು ಸೆನಾಪತಿ (78; 92ಎ, 3ಬೌಂ, 2ಸಿ) ಮತ್ತು ಅಂಕಿತ್ ಯಾದವ್ (56; 63ಎ) ಅವರ ಅರ್ಧಶತಕಗಳು ತಂಡದ ಜಯಕ್ಕೆ ಸಾಕಾಗಲಿಲ್ಲ.