ಭಾರತ ತಂಡದ ಆಡಳಿತಾತ್ಮಕ ಮ್ಯಾನೇಜರ್ ಆಗಿದ್ದ ಸುನೀಲ್ ಸುಬ್ರಮಣಿಯಂ ಅವರನ್ನು ನಿರೀಕ್ಷೆಯಂತೆ ಬದಲಿಸಲಾಗಿದ್ದು, ಗಿರೀಶ್ ಡೊಂಗ್ರೆ ಅವರಿಗೆ ಆ ಸ್ಥಾನ ನೀಡಲಾಗಿದೆ. ಇತ್ತೀಚೆಗೆ ವೆಸ್ಟ್ ಇಂಡೀಸ್ನಲ್ಲಿ ಭಾರತ ರಾಜತಾಂತ್ರಿಕ ಅಧಿಕಾರಿಗಳ ಎದುರು ಸುನೀಲ್ ಅನುಚಿತವಾಗಿ ನಡೆದುಕೊಂಡಿದ್ದ ಪ್ರಕರಣದಿಂದಾಗಿ ಅವರನ್ನು ಬದಲಾಯಿಸುವುದು ಖಚಿತ ಎಂದು ಕೇಳಿಬಂದಿತ್ತು.