ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ‘ಮೈದಾನದಲ್ಲಿ ಯಾವಾಗಲೂ ಲವಲವಿಕೆಯಿಂದ ಇರಬೇಕು. ನಾಯಕನಾಗಿದ್ದರೂ ಅಷ್ಟೇ, ಇಲ್ಲದಿದ್ದರೂ ಅಷ್ಟೇ. ಮುಖ ಗಂಟು ಹಾಕಿಕೊಂಡು ಇರುವುದಕ್ಕೆ ನನ್ನಿಂದ ಆಗುವುದಿಲ್ಲ. ದೇವರು ಸುಂದರ ಬದುಕು ಕೊಟ್ಟಿದ್ದಾನೆ. ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶವೂ ಸಿಕ್ಕಿದೆ. ಹೀಗಿರುವಾಗ ಜಗತ್ತೇ ತಲೆ ಮೇಲೆ ಬಿದ್ದಂತೆ ಏಕಿರಬೇಕು’ ಎಂದರು.