‘ಸತತವಾಗಿ ಟೂರ್ನಿಗಳನ್ನು ನಡೆಸಿದರೆ ಆಟಗಾರರಿಗೂ ವಿಶ್ರಾಂತಿ ಸಿಗುವುದಿಲ್ಲ. ಏಕದಿನ, ಟ್ವೆಂಟಿ–20 ಮತ್ತು ಟೆಸ್ಟ್ ಮಾದರಿಗಳಿಗೆ ಹೊಂದಿಕೊಳ್ಳುವುದಕ್ಕೂ ಕಷ್ಟವಾಗುತ್ತದೆ. ವಿಜಯ್ ಹಜಾರೆ ಮತ್ತು ದುಲೀಪ್ ಟ್ರೋಫಿ ರದ್ದು ಮಾಡಿದರೆ ಎರಡು ತಿಂಗಳು ಸಮಯ ಉಳಿಯಲಿದೆ. ಆ ಅವಧಿಯನ್ನು ಆಟಗಾರರ ವಿಶ್ರಾಂತಿಗೆ ಮೀಸಲಿಟ್ಟರೆ ಎಲ್ಲರಿಗೂ ಅನುಕೂಲವಾಗಲಿದೆ’ ಎಂದೂ 42 ವರ್ಷ ವಯಸ್ಸಿನ ಆಟಗಾರ ನುಡಿದಿದ್ದಾರೆ.