ಬೆಂಗಳೂರು: ಜೋರ್ಡಾನ್ನ ಅಮಾನ್ನಲ್ಲಿ ಇದೇ 21ರಿಂದ ನಡೆಯಲಿರುವ ಎಎಫ್ಸಿ ಕಪ್ ಗುಂಪು ಹಂತದ ಟೂರ್ನಿಯಲ್ಲಿ ಡೋಪಿಂಗ್ ಅಧಿಕಾರಿಯಾಗಿ ಕ್ರೀಡಾವೈದ್ಯ, ಧಾರವಾಡದ ಕಿರಣ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ. ಸೋಮವಾರ ಅವರು ಕರ್ತವ್ಯಕ್ಕೆ ಹಾಜರಾಗುವರು.
ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ತಾಂತ್ರಿಕ ಅಧಿಕಾರಿಗಳ ಪೈಕಿ ಭಾರತದ ಏಕೈಕ ವ್ಯಕ್ತಿ ಕಿರಣ ಕುಲಕರ್ಣಿ. ಜೋರ್ಡಾನ್ನಿಂದ ಇಬ್ಬರು, ಇರಾನ್, ಶ್ರೀಲಂಕಾ, ಕತಾರ್ ಮತ್ತು ಫಿಲಿಪ್ಪೀನ್ಸ್ನಿಂದ ತಲಾ ಒಬ್ಬರು ನೇಮಕವಾಗಿದ್ದಾರೆ.