‘ಕೊರೊನಾ ಉಪಟಳವನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ‘ಲಾಕ್ಡೌನ್’ ಆದೇಶ ಹೊರಡಿಸಿವೆ. ಇದರಿಂದ ವಲಸಿಗರು ಹಾಗೂ ಕೂಲಿ ಕಾರ್ಮಿಕರಿಗೆ ತುಂಬಾ ತೊಂದರೆಯಾಗಿದೆ. ಸಿಕ್ಕಿಂ ರಾಜ್ಯದ ಗಡಿಯಲ್ಲಿ ಭಾನುವಾರ ಸಾವಿರಾರು ಮಂದಿ ಜಮಾಯಿಸಿದ್ದನ್ನು ಗಮನಿಸಿದ್ದೇನೆ. ಗಂಗ್ಟಕ್ನಲ್ಲಿ ನಿರ್ಮಾಣ ಹಂತದ ಕಟ್ಟಡ ಇದೆ. ಅದರಲ್ಲಿ 100 ಮಂದಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತೇನೆ. ನಿರಾಶ್ರಿತರು ಇದರ ಪ್ರಯೋಜನ ಪಡೆದುಕೊಳ್ಳಲಿ. ಅವರಿಗೆ ಅಗತ್ಯ ದಿನಸಿಯನ್ನೂ ಒದಗಿಸುತ್ತೇನೆ’ ಎಂದು ಭುಟಿಯಾ ಸೋಮವಾರ ಹೇಳಿದ್ದಾರೆ.