<p><strong>ಹಾಂಗ್ಕಾಂಗ್</strong>: ಹಾಂಗ್ಕಾಂಗ್ ಎದುರು ಕೊನೆಗಳಿಗೆಯ ‘ಪೆನಾಲ್ಟಿ’ಯಿಂದ ಆಘಾತಕಾರಿ ಸೋಲನುಭವಿಸಿದ ನಂತರ ಭಾರತದ ಡ್ರೆಸಿಂಗ್ ರೂಮ್ನಲ್ಲಿ ಸ್ಮಶಾನಮೌನ ನೆಲಸಿತ್ತು ಎಂದು ತಂಡದ ಹೆಡ್ ಕೋಚ್ ಮನೊಲೊ ಮಾರ್ಕ್ವೆಝ್ ಹೇಳಿದ್ದಾರೆ.</p>.<p>ಆದರೆ, ಈ ಹಿನ್ನಡೆ ಹೊರತಾಗಿಯೂ ತಂಡ 2027ರ ಎಎಫ್ಸಿ ಏಷ್ಯನ್ ಕಪ್ಗೆ ಅರ್ಹತೆ ಪಡೆಯುವ ಆಶಾವಾದ ಹೊಂದಿದ್ದಾರೆ.</p>.<p>ಹಾಂಗ್ಕಾಂಗ್ ‘ಇಂಜುರಿ ಅವಧಿ’ಯಲ್ಲಿ ಈ ಪೆನಾಲ್ಟಿಯಲ್ಲಿ ಗೋಲು ಗಳಿಸಿದ್ದು, ಭಾರತ ತಂಡದ ತೇರ್ಗಡೆ ಅವಕಾಶ ಈಗ ಕಠಿಣವಾಗಿದೆ. ‘ನಮಗೆ ಬೇಸರವಾಗಿದೆ. ಆದರೆ ನಮಗೆ ಅರ್ಹತೆ ಪಡೆಯುವ ಅವಕಾಶ ಈಗಲೂ ಇದೆ’ ಎಂದು ಅವರು ಪಂದ್ಯಾನಂತರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಫಿಫಾ ರ್ಯಾಂಕಿಂಗ್ನಲ್ಲಿ ಭಾರತ, ಹಾಂಗ್ಕಾಂಗ್ಗಿಂತ 26 ಸ್ಥಾನಗಳಷ್ಟು ಮೇಲಿದೆ. ಆದರೆ ಪಂದ್ಯದ ಪ್ರಮುಖ ಘಟ್ಟಗಳಲ್ಲಿ ಅವಕಾಶಗಳನ್ನು ಪರಿವರ್ತಿಸುವಲ್ಲಿ ಎಡವಿತು. 35ನೇ ನಿಮಿಷ ಆಶಿಕ್ ಕುರುಣಿಯನ್ ಗೋಲು ಗಳಿಸುವ ಸುವರ್ಣಾವಕಾಶ ವ್ಯರ್ಥಪಡಿಸಿದ್ದರು.</p>.<p>‘ಸಿ’ ಗುಂಪಿನಲ್ಲಿರುವ ಭಾರತ ಎರಡು ಪಂದ್ಯಗಳಿಂದ ಕೇವಲ ಒಂದು ಪಾಯಿಂಟ್ ಪಡೆದಿದೆ. ಗುಂಪಿನ ವಿಜೇತ ತಂಡ ಮಾತ್ರ 2027ರ ಎಎಫ್ಸಿ ಏಷ್ಯನ್ ಕಪ್ ಆಡುವ ಅರ್ಹತೆ ಪಡೆಯುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಂಗ್ಕಾಂಗ್</strong>: ಹಾಂಗ್ಕಾಂಗ್ ಎದುರು ಕೊನೆಗಳಿಗೆಯ ‘ಪೆನಾಲ್ಟಿ’ಯಿಂದ ಆಘಾತಕಾರಿ ಸೋಲನುಭವಿಸಿದ ನಂತರ ಭಾರತದ ಡ್ರೆಸಿಂಗ್ ರೂಮ್ನಲ್ಲಿ ಸ್ಮಶಾನಮೌನ ನೆಲಸಿತ್ತು ಎಂದು ತಂಡದ ಹೆಡ್ ಕೋಚ್ ಮನೊಲೊ ಮಾರ್ಕ್ವೆಝ್ ಹೇಳಿದ್ದಾರೆ.</p>.<p>ಆದರೆ, ಈ ಹಿನ್ನಡೆ ಹೊರತಾಗಿಯೂ ತಂಡ 2027ರ ಎಎಫ್ಸಿ ಏಷ್ಯನ್ ಕಪ್ಗೆ ಅರ್ಹತೆ ಪಡೆಯುವ ಆಶಾವಾದ ಹೊಂದಿದ್ದಾರೆ.</p>.<p>ಹಾಂಗ್ಕಾಂಗ್ ‘ಇಂಜುರಿ ಅವಧಿ’ಯಲ್ಲಿ ಈ ಪೆನಾಲ್ಟಿಯಲ್ಲಿ ಗೋಲು ಗಳಿಸಿದ್ದು, ಭಾರತ ತಂಡದ ತೇರ್ಗಡೆ ಅವಕಾಶ ಈಗ ಕಠಿಣವಾಗಿದೆ. ‘ನಮಗೆ ಬೇಸರವಾಗಿದೆ. ಆದರೆ ನಮಗೆ ಅರ್ಹತೆ ಪಡೆಯುವ ಅವಕಾಶ ಈಗಲೂ ಇದೆ’ ಎಂದು ಅವರು ಪಂದ್ಯಾನಂತರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಫಿಫಾ ರ್ಯಾಂಕಿಂಗ್ನಲ್ಲಿ ಭಾರತ, ಹಾಂಗ್ಕಾಂಗ್ಗಿಂತ 26 ಸ್ಥಾನಗಳಷ್ಟು ಮೇಲಿದೆ. ಆದರೆ ಪಂದ್ಯದ ಪ್ರಮುಖ ಘಟ್ಟಗಳಲ್ಲಿ ಅವಕಾಶಗಳನ್ನು ಪರಿವರ್ತಿಸುವಲ್ಲಿ ಎಡವಿತು. 35ನೇ ನಿಮಿಷ ಆಶಿಕ್ ಕುರುಣಿಯನ್ ಗೋಲು ಗಳಿಸುವ ಸುವರ್ಣಾವಕಾಶ ವ್ಯರ್ಥಪಡಿಸಿದ್ದರು.</p>.<p>‘ಸಿ’ ಗುಂಪಿನಲ್ಲಿರುವ ಭಾರತ ಎರಡು ಪಂದ್ಯಗಳಿಂದ ಕೇವಲ ಒಂದು ಪಾಯಿಂಟ್ ಪಡೆದಿದೆ. ಗುಂಪಿನ ವಿಜೇತ ತಂಡ ಮಾತ್ರ 2027ರ ಎಎಫ್ಸಿ ಏಷ್ಯನ್ ಕಪ್ ಆಡುವ ಅರ್ಹತೆ ಪಡೆಯುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>