<p><strong>ಬೆಂಗಳೂರು</strong>: ಬೆಂಗಳೂರು ಎಫ್ಸಿ ಮತ್ತು ಒಡಿಶಾ ಎಫ್ಸಿ ನಡುವೆ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯ ಗೋಲಿಲ್ಲದೇ ‘ಡ್ರಾ’ ಆಯಿತು. ಲೀಗ್ ಅಗ್ರಸ್ಥಾನಕ್ಕೇರುವ ಒಡಿಶಾ ಎಫ್ಸಿ ತಂಡದ ಕನಸಿಗೆ ಈ ಫಲಿತಾಂಶದಿಂದ ಹಿನ್ನಡೆಯಾಗಿದೆ.</p><p>ಒಂದೆಡೆ ಒಡಿಶಾ ನಿರಾಸೆ ಅನುಭವಿಸಿದರೆ, ಇನ್ನೊಂದೆಡೆ ಆತಿಥೇಯ ಬೆಂಗಳೂರು 20 ಪಂದ್ಯಗಳಿಂದ 22 ಪಾಯಿಂಟ್ಸ್ ಕಲೆಹಾಕಿದ್ದು ಆರನೇ ಸ್ಥಾನಕ್ಕೇರಿದೆ. ಇನ್ನೂ ಎರಡು ಪಂದ್ಯಗಳು ಆಡಲು ಉಳಿದಿದ್ದರೂ, ಜೆರಾಲ್ಡ್ ಜಾರ್ಗೊಝಾ ಪಡೆಯ ಪ್ಲೇ ಆಫ್ ಅವಕಾಶ ಕ್ಷೀಣವಾಗಿದೆ.</p><p>ಒಡಿಶಾ ತಂಡ ಈ ಮೊದಲೇ ಪ್ಲೇ ಆಫ್ಗೆ ಅರ್ಹತೆ ಪಡೆದಿದ್ದರೂ, ಅಗ್ರಸ್ಥಾನಕ್ಕೇರಿ ಲೀಗ್ ಶೀಲ್ಡ್ ಪಡೆಯುವ ಹಾದಿಯಲ್ಲಿ ಎಡವಿದಂತಾಗಿದೆ. ಸೆರ್ಗಿಯೊ ಲೊಬೆರಾ ತರಬೇತಿಯ ತಂಡ 19 ಪಂದ್ಯಗಳಿಂದ 36 ಪಾಯಿಂಟ್ಸ್ ಸಂಗ್ರಹಿಸಿದೆ.</p><p>ಅಗ್ರಸ್ಥಾನದಲ್ಲಿರುವ ಮುಂಬೈ ಇಷ್ಟೇ ಪಂದ್ಯಗಳಿಂದ 41 ಪಾಯಿಂಟ್ಸ್ ಕಲೆಹಾಕಿದೆ.</p><p>ಜಾರ್ಗೋಝಾ ಈ ಪಂದ್ಯಕ್ಕೆ ಶಿವಶಕ್ತಿ ನಾರಾಯಣನ್ ಮತ್ತು ಶಂಕರ್ ಸಂಪಿಂಗಿರಾಜ್ ಅವರಿಗೆ 11ರಲ್ಲಿ ಅವಕಾಶ ಕಲ್ಪಿಸಿದರು.</p><p>ಇದರಿಂದ ಸುನಿಲ್ ಚೆಟ್ರಿಗೆ ಅವಕಾಶವಾಗಲಿಲ್ಲ. ಬ್ಲೂಸ್ ಗೋಲ್ಕೀಪರ್ ಗುರುಪ್ರೀತ್ ಸಂಧು ನಾಯಕತ್ವ ವಹಿಸಿದರು. ಪಂದ್ಯದಲ್ಲಿ ಗುರುಪ್ರೀತ್, ಒಡಿಶಾ ತಂಡದ ಕೆಲವು ಗೋಲು ಯತ್ನಗಳನ್ನು ಉತ್ತಮವಾಗಿ ತಡೆದರು.</p><p>ಪಂದ್ಯ ನಿರೀಕ್ಷಿಸಿದಷ್ಟು ಬಿರುಸು ಪಡೆಯಲಿಲ್ಲ. ಒಡಿಶಾ, ಆತಿಥೇಯರ ಮೇಲೆ ಒತ್ತಡ ಹೇರತೊಡಗಿತು. ಪಂದ್ಯದ 31ನೇ ನಿಮಿಷ ಅಹ್ಮದ್ ಜಹೋವ ಪಾಸ್ನಲ್ಲಿ ಜೆರ್ರಿ ಲಾಲ್ರಿನ್ಝವಾಲಾ ಅವರು ಬಾಕ್ಸ್ ಒಳಗಿಂದ ನಡೆಸಿದ ಗೋಲು ಯತ್ನವನ್ನು ಗುರುಪ್ರೀತ್ ಯಶಸ್ವಿಯಾಗಿ ತಡೆದರು.</p><p>ಬೆಂಗಳೂರು ಬ್ಲೂಸ್ಗೂ ಅವಕಾಶ ದೊರಕಿತ್ತು. ಸ್ಪೇನ್ನ ಜೇವಿ ಹೆರ್ನಾಂಡಿಝ್ ಅವರ ಪಾಸ್ನಲ್ಲಿ ಡ್ರೋಸ್ಟ್ ಅವರ ಗೋಲಿನತ್ತ ಒದ್ದ ಚೆಂಡನ್ನು ರಕ್ಷಣೆ ಆಟಗಾರ, ಸೆನೆಗಲ್ನ ಮೊರ್ತಾಡಾ ಫಾಲ್ ಅವರು ತಡೆದರು.</p><p>ವಿರಾಮಕ್ಕೆ ಮೊದಲು ಒಡಿಶಾ ತಂಡದ ರಾಯ್ ಕೃಷ್ಣ ಅವರು ಗೋಲಿನತ್ತ ಒದ್ದ ಚೆಂಡು ಗುರುಪ್ರೀತ್ ಅವರನ್ನು ವಂಚಿಸಿ ಗೋಲಿನತ್ತ ಹೋದರೂ, ಶಂಕರ್ ಸಕಾಲದಲ್ಲಿ ತಡೆದು ಅಪಾಯ ತಪ್ಪಿಸಿದರು.</p><p>ವಿರಾಮದ ಸ್ವಲ್ಪ ಹೊತ್ತಿನ ನಂತರ ಶಿವಶಕ್ತಿ ಬದಲು ಚೆಟ್ರಿ ಆಟಕ್ಕಿಳಿದರು. ಚೆಟ್ರಿ ಮತ್ತು ಜೇವಿ ಜೋಡಿ ಕೆಲಮಟ್ಟಿಗೆ ಒಡಿಶಾ ತಂಡಕ್ಕೆ ಸವಾಲೊಡ್ಡಿತು.</p><p>ಜೇವಿ ಅವರ ಮತ್ತೊಂದು ಗೋಲು ಯತ್ನಕ್ಕೆ ಅಮರಿಂದರ್ ಅಡ್ಡಿಯಾದರು.</p><p>ಬ್ಲೂಸ್ ತಂಡ ಮುಂದಿನ ಪಂದ್ಯವನ್ನು ಕೋಲ್ಕತ್ತದಲ್ಲಿ ಏಪ್ರಿಲ್ 7ರಂದು ಈಸ್ಟ್ ಬೆಂಗಾಲ್ ವಿರುದ್ಧ ಆಡಲಿದೆ. ಒಡಿಶಾ ಎಫ್ಸಿ ತನ್ನ ಮುಂದಿನ ಪಂದ್ಯವನ್ನು ತವರು ಭುವನೇಶ್ವರದಲ್ಲಿ ಏಪ್ರಿಲ್ 2ರಂದು ಪಂಜಾಬ್ ಎಫ್ಸಿ ವಿರುದ್ಧ ಆಡಲಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೆಂಗಳೂರು ಎಫ್ಸಿ ಮತ್ತು ಒಡಿಶಾ ಎಫ್ಸಿ ನಡುವೆ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯ ಗೋಲಿಲ್ಲದೇ ‘ಡ್ರಾ’ ಆಯಿತು. ಲೀಗ್ ಅಗ್ರಸ್ಥಾನಕ್ಕೇರುವ ಒಡಿಶಾ ಎಫ್ಸಿ ತಂಡದ ಕನಸಿಗೆ ಈ ಫಲಿತಾಂಶದಿಂದ ಹಿನ್ನಡೆಯಾಗಿದೆ.</p><p>ಒಂದೆಡೆ ಒಡಿಶಾ ನಿರಾಸೆ ಅನುಭವಿಸಿದರೆ, ಇನ್ನೊಂದೆಡೆ ಆತಿಥೇಯ ಬೆಂಗಳೂರು 20 ಪಂದ್ಯಗಳಿಂದ 22 ಪಾಯಿಂಟ್ಸ್ ಕಲೆಹಾಕಿದ್ದು ಆರನೇ ಸ್ಥಾನಕ್ಕೇರಿದೆ. ಇನ್ನೂ ಎರಡು ಪಂದ್ಯಗಳು ಆಡಲು ಉಳಿದಿದ್ದರೂ, ಜೆರಾಲ್ಡ್ ಜಾರ್ಗೊಝಾ ಪಡೆಯ ಪ್ಲೇ ಆಫ್ ಅವಕಾಶ ಕ್ಷೀಣವಾಗಿದೆ.</p><p>ಒಡಿಶಾ ತಂಡ ಈ ಮೊದಲೇ ಪ್ಲೇ ಆಫ್ಗೆ ಅರ್ಹತೆ ಪಡೆದಿದ್ದರೂ, ಅಗ್ರಸ್ಥಾನಕ್ಕೇರಿ ಲೀಗ್ ಶೀಲ್ಡ್ ಪಡೆಯುವ ಹಾದಿಯಲ್ಲಿ ಎಡವಿದಂತಾಗಿದೆ. ಸೆರ್ಗಿಯೊ ಲೊಬೆರಾ ತರಬೇತಿಯ ತಂಡ 19 ಪಂದ್ಯಗಳಿಂದ 36 ಪಾಯಿಂಟ್ಸ್ ಸಂಗ್ರಹಿಸಿದೆ.</p><p>ಅಗ್ರಸ್ಥಾನದಲ್ಲಿರುವ ಮುಂಬೈ ಇಷ್ಟೇ ಪಂದ್ಯಗಳಿಂದ 41 ಪಾಯಿಂಟ್ಸ್ ಕಲೆಹಾಕಿದೆ.</p><p>ಜಾರ್ಗೋಝಾ ಈ ಪಂದ್ಯಕ್ಕೆ ಶಿವಶಕ್ತಿ ನಾರಾಯಣನ್ ಮತ್ತು ಶಂಕರ್ ಸಂಪಿಂಗಿರಾಜ್ ಅವರಿಗೆ 11ರಲ್ಲಿ ಅವಕಾಶ ಕಲ್ಪಿಸಿದರು.</p><p>ಇದರಿಂದ ಸುನಿಲ್ ಚೆಟ್ರಿಗೆ ಅವಕಾಶವಾಗಲಿಲ್ಲ. ಬ್ಲೂಸ್ ಗೋಲ್ಕೀಪರ್ ಗುರುಪ್ರೀತ್ ಸಂಧು ನಾಯಕತ್ವ ವಹಿಸಿದರು. ಪಂದ್ಯದಲ್ಲಿ ಗುರುಪ್ರೀತ್, ಒಡಿಶಾ ತಂಡದ ಕೆಲವು ಗೋಲು ಯತ್ನಗಳನ್ನು ಉತ್ತಮವಾಗಿ ತಡೆದರು.</p><p>ಪಂದ್ಯ ನಿರೀಕ್ಷಿಸಿದಷ್ಟು ಬಿರುಸು ಪಡೆಯಲಿಲ್ಲ. ಒಡಿಶಾ, ಆತಿಥೇಯರ ಮೇಲೆ ಒತ್ತಡ ಹೇರತೊಡಗಿತು. ಪಂದ್ಯದ 31ನೇ ನಿಮಿಷ ಅಹ್ಮದ್ ಜಹೋವ ಪಾಸ್ನಲ್ಲಿ ಜೆರ್ರಿ ಲಾಲ್ರಿನ್ಝವಾಲಾ ಅವರು ಬಾಕ್ಸ್ ಒಳಗಿಂದ ನಡೆಸಿದ ಗೋಲು ಯತ್ನವನ್ನು ಗುರುಪ್ರೀತ್ ಯಶಸ್ವಿಯಾಗಿ ತಡೆದರು.</p><p>ಬೆಂಗಳೂರು ಬ್ಲೂಸ್ಗೂ ಅವಕಾಶ ದೊರಕಿತ್ತು. ಸ್ಪೇನ್ನ ಜೇವಿ ಹೆರ್ನಾಂಡಿಝ್ ಅವರ ಪಾಸ್ನಲ್ಲಿ ಡ್ರೋಸ್ಟ್ ಅವರ ಗೋಲಿನತ್ತ ಒದ್ದ ಚೆಂಡನ್ನು ರಕ್ಷಣೆ ಆಟಗಾರ, ಸೆನೆಗಲ್ನ ಮೊರ್ತಾಡಾ ಫಾಲ್ ಅವರು ತಡೆದರು.</p><p>ವಿರಾಮಕ್ಕೆ ಮೊದಲು ಒಡಿಶಾ ತಂಡದ ರಾಯ್ ಕೃಷ್ಣ ಅವರು ಗೋಲಿನತ್ತ ಒದ್ದ ಚೆಂಡು ಗುರುಪ್ರೀತ್ ಅವರನ್ನು ವಂಚಿಸಿ ಗೋಲಿನತ್ತ ಹೋದರೂ, ಶಂಕರ್ ಸಕಾಲದಲ್ಲಿ ತಡೆದು ಅಪಾಯ ತಪ್ಪಿಸಿದರು.</p><p>ವಿರಾಮದ ಸ್ವಲ್ಪ ಹೊತ್ತಿನ ನಂತರ ಶಿವಶಕ್ತಿ ಬದಲು ಚೆಟ್ರಿ ಆಟಕ್ಕಿಳಿದರು. ಚೆಟ್ರಿ ಮತ್ತು ಜೇವಿ ಜೋಡಿ ಕೆಲಮಟ್ಟಿಗೆ ಒಡಿಶಾ ತಂಡಕ್ಕೆ ಸವಾಲೊಡ್ಡಿತು.</p><p>ಜೇವಿ ಅವರ ಮತ್ತೊಂದು ಗೋಲು ಯತ್ನಕ್ಕೆ ಅಮರಿಂದರ್ ಅಡ್ಡಿಯಾದರು.</p><p>ಬ್ಲೂಸ್ ತಂಡ ಮುಂದಿನ ಪಂದ್ಯವನ್ನು ಕೋಲ್ಕತ್ತದಲ್ಲಿ ಏಪ್ರಿಲ್ 7ರಂದು ಈಸ್ಟ್ ಬೆಂಗಾಲ್ ವಿರುದ್ಧ ಆಡಲಿದೆ. ಒಡಿಶಾ ಎಫ್ಸಿ ತನ್ನ ಮುಂದಿನ ಪಂದ್ಯವನ್ನು ತವರು ಭುವನೇಶ್ವರದಲ್ಲಿ ಏಪ್ರಿಲ್ 2ರಂದು ಪಂಜಾಬ್ ಎಫ್ಸಿ ವಿರುದ್ಧ ಆಡಲಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>