<p><strong>ಬೆಂಗಳೂರು</strong>: ಮಂಗಳವಾರ ರಾತ್ರಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ಯಾಫ್ ಫುಟ್ಬಾಲ್ ಚಾಂಪಿಯನ್ಷಿಪ್ ಫೈನಲ್ ನಂತರ ಭಾರತದ ತಂಡದ ಆಟಗಾರ ಜೀಕ್ಸನ್ ಸಿಂಗ್ ಅವರು ಮೈತೆಯಿ ಬಾವುಟವನ್ನು ತಮ್ಮ ಹೆಗಲಿಗೆ ಸುತ್ತಿಕೊಂಡು ವಿಜಯವೇದಿಕೆಗೆ ಬಂದರು. </p>.<p>ಮಣಿಪುರದ ಜೀಕ್ಸನ್ ಹಾಕಿಕೊಂಡಿದ್ದ ಮೀಟಿ ಬಾವುಟವು ಚೌಕಾಕಾರದ್ದಾಗಿದ್ದು, ಏಳೂ ಬಣ್ಣಗಳನ್ನು ಹೊಂದಿದೆ. ಪುರಾತನ ಮಣಿಪುರದ ಏಳು ಬುಡಕಟ್ಟು ರಾಜವಂಶಗಳನ್ನು ಈ ಬಣ್ಣಗಳು ಪ್ರತಿನಿಧಿಸುತ್ತವೆ.</p>.<p>ಫೈನಲ್ನಲ್ಲಿ ಕುವೈತ್ ತಂಡದ ವಿರುದ್ಧ ಭಾರತ ತಂಡವು ಪೆನಾಲ್ಟಿ ಶೂಟೌಟ್ನಲ್ಲಿ ಜಯಿಸಿತ್ತು. ಅದರ ನಂತರ ವೈಯಕ್ತಿಕ ಪದಕ ಗಳಿಸಲು ಬಂದ ಜೀಕ್ಸನ್ ಸಿಂಗ್ ಈ ಬಾವುಟ ಸುತ್ತಿಕೊಂಡಿದ್ದರು.</p>.<p>ಅವರು ತಂಡದ ವಿಜಯೋತ್ಸವದಲ್ಲಿ ಬಾವುಟ ಸುತ್ತಿಕೊಂಡು ಸಾಂಕೇತಿಕ ಪ್ರದರ್ಶನ ಮಾಡಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ಈ ಕುರಿತು ಜೀಕ್ಸನ್ ಕೂಡ ಪ್ರತಿಕ್ರಿಯಿಸಿದ್ದಾರೆ.</p>.<p>‘ಪ್ರಿಯ ಅಭಿಮಾನಿಗಳೇ. ಈ ಬಾವುಟದಲ್ಲಿ ಸಂಭ್ರಮಾಚರಣೆ ಮಾಡುವ ಮೂಲಕ ಯಾರ ಮನಸ್ಸಿಗೂ ನೋವುಂಟುಮಾಡುವ ಉದ್ದೇಶ ನನ್ನದಲ್ಲ. ನನ್ನ ತವರು ಮಣಿಪುರವು ಪ್ರಸ್ತುತ ಎದುರಿಸುತ್ತಿರುವ ಪರಿಸ್ಥಿತಿಯನ್ನು ಎಲ್ಲರ ಗಮನಕ್ಕೆ ತರುವುದಷ್ಟೇ ನನ್ನ ಗುರಿಯಾಘಿತ್ತು. ಇಂದಿನ ಈ ವಿಜಯವು ಎಲ್ಲ ಭಾರತೀಯರಿಗೂ ಅರ್ಪಣೆ‘ ಎಂದು ಟ್ವೀಟ್ ಮಾಡಿದ್ದಾರೆ.</p>.<p>2017ರಲ್ಲಿ ನಡೆದಿದ್ದ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಭಾರತ ತಂಡದಲ್ಲಿ ಜೀಕ್ಸನ್ ಇದ್ದರು. ಆ ಟೂರ್ನಿಯಲ್ಲಿ ಭಾರತದ ಪರ ಗೋಲು ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಅವರದ್ದು.</p>.<p>ಮಣಿಪುರದಲ್ಲಿ ಕಳೆದ ಹಲವು ದಿನಗಳಿಂದ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಮೈತೆಯಿ ಮತ್ತು ಕುಕಿ ಬುಡಕಟ್ಟು ಜನರ ನಡುವೆ ಭುಗಿಲೆದ್ದಿರುವ ಗಲಭೆಯಿಂದ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ.</p>.<p>‘ಇದು ನನ್ನ ಮಣಿಪುರದ ಬಾವುಟ. ಎಲ್ಲರೂ ಶಾಂತಿಯಿಂದ ಬಾಳಬೇಕು ಮತ್ತು ಸಂಘರ್ಷ ಬೇಡ ಎಂಬ ಸಂದೇಶವನ್ನು ಭಾರತ ಮತ್ತು ಮಣಿಪುರಕ್ಕೆ ನೀಡಿದೆ. ನನಗೆ ಶಾಂತಿ ಮುಖ್ಯ. ಕಳೆದೆರಡು ತಿಂಗಳುಗಳಿಂದ ಸಂಘರ್ಷ ನಡೆಯುತ್ತಿದೆ. ಇದು ಇಲ್ಲಿಗೆ ನಿಲ್ಲಲಿ. ಸರ್ಕಾರ ಮತ್ತು ಜನರು ಈ ನಿಟ್ಟಿನಲ್ಲಿ ಪ್ರಯತ್ನಿಸಲಿ‘ ಎಂದು ಜೀಕ್ಸನ್ ಸಿಂಗ್ ಇಎಸ್ಪಿಎನ್. ಇನ್ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.</p>.<p>’ಮಣಿಪುರದಲ್ಲಿರುವ ನನ್ನ ಕುಟುಂಬ ಸುರಕ್ಷಿತವಾಗಿದೆ. ಆದರೆ, ಅಲ್ಲಿಯ ಬಹಳಷ್ಟು ಕುಟುಂಬಗಳು ಮನೆ ಕಳೆದುಕೊಂಡಿದ್ದಾರೆ. ಜೀವ ಕಳೆದುಕೊಂಡಿದ್ದಾರೆ. ಬಹಳ ಭೀಕರ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯಲ್ಲಿ ನಾನು ಕೂಡ ಮರಳಿ ಹೋಗುವುದು ಕಷ್ಟವಿದೆ‘ ಎಂದೂ ಹೇಳಿದರು.</p>.<p>ಈ ಕುರಿತು ಪ್ರತಿಕ್ರಿಯಿಸಲು ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ನಿರಾಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮಂಗಳವಾರ ರಾತ್ರಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ಯಾಫ್ ಫುಟ್ಬಾಲ್ ಚಾಂಪಿಯನ್ಷಿಪ್ ಫೈನಲ್ ನಂತರ ಭಾರತದ ತಂಡದ ಆಟಗಾರ ಜೀಕ್ಸನ್ ಸಿಂಗ್ ಅವರು ಮೈತೆಯಿ ಬಾವುಟವನ್ನು ತಮ್ಮ ಹೆಗಲಿಗೆ ಸುತ್ತಿಕೊಂಡು ವಿಜಯವೇದಿಕೆಗೆ ಬಂದರು. </p>.<p>ಮಣಿಪುರದ ಜೀಕ್ಸನ್ ಹಾಕಿಕೊಂಡಿದ್ದ ಮೀಟಿ ಬಾವುಟವು ಚೌಕಾಕಾರದ್ದಾಗಿದ್ದು, ಏಳೂ ಬಣ್ಣಗಳನ್ನು ಹೊಂದಿದೆ. ಪುರಾತನ ಮಣಿಪುರದ ಏಳು ಬುಡಕಟ್ಟು ರಾಜವಂಶಗಳನ್ನು ಈ ಬಣ್ಣಗಳು ಪ್ರತಿನಿಧಿಸುತ್ತವೆ.</p>.<p>ಫೈನಲ್ನಲ್ಲಿ ಕುವೈತ್ ತಂಡದ ವಿರುದ್ಧ ಭಾರತ ತಂಡವು ಪೆನಾಲ್ಟಿ ಶೂಟೌಟ್ನಲ್ಲಿ ಜಯಿಸಿತ್ತು. ಅದರ ನಂತರ ವೈಯಕ್ತಿಕ ಪದಕ ಗಳಿಸಲು ಬಂದ ಜೀಕ್ಸನ್ ಸಿಂಗ್ ಈ ಬಾವುಟ ಸುತ್ತಿಕೊಂಡಿದ್ದರು.</p>.<p>ಅವರು ತಂಡದ ವಿಜಯೋತ್ಸವದಲ್ಲಿ ಬಾವುಟ ಸುತ್ತಿಕೊಂಡು ಸಾಂಕೇತಿಕ ಪ್ರದರ್ಶನ ಮಾಡಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ಈ ಕುರಿತು ಜೀಕ್ಸನ್ ಕೂಡ ಪ್ರತಿಕ್ರಿಯಿಸಿದ್ದಾರೆ.</p>.<p>‘ಪ್ರಿಯ ಅಭಿಮಾನಿಗಳೇ. ಈ ಬಾವುಟದಲ್ಲಿ ಸಂಭ್ರಮಾಚರಣೆ ಮಾಡುವ ಮೂಲಕ ಯಾರ ಮನಸ್ಸಿಗೂ ನೋವುಂಟುಮಾಡುವ ಉದ್ದೇಶ ನನ್ನದಲ್ಲ. ನನ್ನ ತವರು ಮಣಿಪುರವು ಪ್ರಸ್ತುತ ಎದುರಿಸುತ್ತಿರುವ ಪರಿಸ್ಥಿತಿಯನ್ನು ಎಲ್ಲರ ಗಮನಕ್ಕೆ ತರುವುದಷ್ಟೇ ನನ್ನ ಗುರಿಯಾಘಿತ್ತು. ಇಂದಿನ ಈ ವಿಜಯವು ಎಲ್ಲ ಭಾರತೀಯರಿಗೂ ಅರ್ಪಣೆ‘ ಎಂದು ಟ್ವೀಟ್ ಮಾಡಿದ್ದಾರೆ.</p>.<p>2017ರಲ್ಲಿ ನಡೆದಿದ್ದ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಭಾರತ ತಂಡದಲ್ಲಿ ಜೀಕ್ಸನ್ ಇದ್ದರು. ಆ ಟೂರ್ನಿಯಲ್ಲಿ ಭಾರತದ ಪರ ಗೋಲು ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಅವರದ್ದು.</p>.<p>ಮಣಿಪುರದಲ್ಲಿ ಕಳೆದ ಹಲವು ದಿನಗಳಿಂದ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಮೈತೆಯಿ ಮತ್ತು ಕುಕಿ ಬುಡಕಟ್ಟು ಜನರ ನಡುವೆ ಭುಗಿಲೆದ್ದಿರುವ ಗಲಭೆಯಿಂದ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ.</p>.<p>‘ಇದು ನನ್ನ ಮಣಿಪುರದ ಬಾವುಟ. ಎಲ್ಲರೂ ಶಾಂತಿಯಿಂದ ಬಾಳಬೇಕು ಮತ್ತು ಸಂಘರ್ಷ ಬೇಡ ಎಂಬ ಸಂದೇಶವನ್ನು ಭಾರತ ಮತ್ತು ಮಣಿಪುರಕ್ಕೆ ನೀಡಿದೆ. ನನಗೆ ಶಾಂತಿ ಮುಖ್ಯ. ಕಳೆದೆರಡು ತಿಂಗಳುಗಳಿಂದ ಸಂಘರ್ಷ ನಡೆಯುತ್ತಿದೆ. ಇದು ಇಲ್ಲಿಗೆ ನಿಲ್ಲಲಿ. ಸರ್ಕಾರ ಮತ್ತು ಜನರು ಈ ನಿಟ್ಟಿನಲ್ಲಿ ಪ್ರಯತ್ನಿಸಲಿ‘ ಎಂದು ಜೀಕ್ಸನ್ ಸಿಂಗ್ ಇಎಸ್ಪಿಎನ್. ಇನ್ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.</p>.<p>’ಮಣಿಪುರದಲ್ಲಿರುವ ನನ್ನ ಕುಟುಂಬ ಸುರಕ್ಷಿತವಾಗಿದೆ. ಆದರೆ, ಅಲ್ಲಿಯ ಬಹಳಷ್ಟು ಕುಟುಂಬಗಳು ಮನೆ ಕಳೆದುಕೊಂಡಿದ್ದಾರೆ. ಜೀವ ಕಳೆದುಕೊಂಡಿದ್ದಾರೆ. ಬಹಳ ಭೀಕರ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯಲ್ಲಿ ನಾನು ಕೂಡ ಮರಳಿ ಹೋಗುವುದು ಕಷ್ಟವಿದೆ‘ ಎಂದೂ ಹೇಳಿದರು.</p>.<p>ಈ ಕುರಿತು ಪ್ರತಿಕ್ರಿಯಿಸಲು ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ನಿರಾಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>