<p><strong>ಬೆಂಗಳೂರು/ಕೋಲ್ಕತ್ತ:</strong> ಕೋಲ್ಕತ್ತದಲ್ಲಿ ಈಚೆಗೆ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಗೆದ್ದ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ತಂಡದ ಅಭಿಮಾನಿಗಳ ಪುಂಡಾಟಿಕೆಯಿಂದಾಗಿ ಬೆಂಗಳೂರು ಎಫ್ಸಿ ತಂಡದ ಮಾಲೀಕರು ಮತ್ತು ಬೆಂಬಲಿಗರು ಗಾಯಗೊಂಡಿದ್ದಾರೆ. </p>.<p>ಫೈನಲ್ ಪಂದ್ಯದಲ್ಲಿ ಬಾಗನ್ ತಂಡವು ಬಿಎಫ್ಸಿ ಎದುರು ಜಯಿಸಿತ್ತು. ಬಾಗನ್ ತಂಡದ ಅಭಿಮಾನಿಗಳೆನ್ನಲಾದ ಕೆಲವು ಕಿಡಿಗೇಡಿಗಳು ಸುಡುಮದ್ದುಗಳನ್ನು ಬಿಎಫ್ಸಿ ಬೆಂಬಲಿಗರ ಸ್ಟ್ಯಾಂಡ್ಗೆ ಒಗೆದಿದ್ದಾರೆ. ಘಟನೆಯಲ್ಲಿ ಒಬ್ಬ ಅಭಿಮಾನಿಯ ಕಣ್ಣಿಗೆ ಗಾಯವಾಗಿದೆ. </p>.<p>ಬಿಎಫ್ಸಿಯು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಗೆ ದೂರು ನೀಡಿದೆ. </p>.<p>‘ಬೆಂಗಳೂರು ಎಫ್ಸಿ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಪ್ರವಾಸಿ ತಂಡದ ಅಭಿಮಾನಿಗಳ ಮೇಲೆ ಆತಿಥೇಯ ಬೆಂಬಲಿಗರು ನಡೆಸಿರುವ ದಾಳಿಯು ಅಮಾನವೀಯವಾಗಿದೆ. ಸುಡುಮದ್ದುಗಳನ್ನು ಅಭಿಮಾನಿಗಳ ಗ್ಯಾಲರಿಗೆ ತೂರಿದರು. ಈ ಘಟನೆಯಲ್ಲಿ ಕ್ಲಬ್ ಮಾಲೀಕರಾದ ಪಾರ್ಥ್ ಜಿಂದಾಲ್ ಅವರಿಗೂ ಸುಟ್ಟ ಗಾಯಗಳಾಗಿವೆ’ ಎಂದು ತಂಡವು ದೂರಿನಲ್ಲಿ ಉಲ್ಲೇಖಿಸಿದೆ.</p>.<p>‘ಈ ಕುರಿತು ನಾವು ಎಐಎಫ್ಎಫ್ಗೆ ದೂರು ನೀಡಿದ್ದೇವೆ. ಕ್ರೀಡಾಂಗಣಗಳಲ್ಲಿ ಆಟಗಾರರು ಮತ್ತು ಅಭಿಮಾನಿಗಳಿಗೆ ಭದ್ರತೆ ನೀಡಬೇಕು. ಎಐಎಫ್ಎಫ್ ಮತ್ತು ಎಫ್ಎಸ್ಡಿಎಲ್ ಜಂಟಿಯಾಗಿ ಈ ಕುರಿತು ಗಂಭೀರವಾಗಿ ಚಿಂತಿಸಿ ಪರಿಹಾರ ಕಂಡುಹಿಡಿಯಬೇಕು. ಅಭಿಮಾನಿಗಳ ಸುರಕ್ಷತೆಗೆ ಕಟ್ಟುನಿಟ್ಟಾದ ರಕ್ಷಣಾ ವ್ಯವಸ್ಥೆ ರೂಪಿಸಬೇಕು’ ಎಂದು ತಂಡವು ಆಗ್ರಹಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು/ಕೋಲ್ಕತ್ತ:</strong> ಕೋಲ್ಕತ್ತದಲ್ಲಿ ಈಚೆಗೆ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಗೆದ್ದ ಮೋಹನ್ ಬಾಗನ್ ಸೂಪರ್ ಜೈಂಟ್ಸ್ ತಂಡದ ಅಭಿಮಾನಿಗಳ ಪುಂಡಾಟಿಕೆಯಿಂದಾಗಿ ಬೆಂಗಳೂರು ಎಫ್ಸಿ ತಂಡದ ಮಾಲೀಕರು ಮತ್ತು ಬೆಂಬಲಿಗರು ಗಾಯಗೊಂಡಿದ್ದಾರೆ. </p>.<p>ಫೈನಲ್ ಪಂದ್ಯದಲ್ಲಿ ಬಾಗನ್ ತಂಡವು ಬಿಎಫ್ಸಿ ಎದುರು ಜಯಿಸಿತ್ತು. ಬಾಗನ್ ತಂಡದ ಅಭಿಮಾನಿಗಳೆನ್ನಲಾದ ಕೆಲವು ಕಿಡಿಗೇಡಿಗಳು ಸುಡುಮದ್ದುಗಳನ್ನು ಬಿಎಫ್ಸಿ ಬೆಂಬಲಿಗರ ಸ್ಟ್ಯಾಂಡ್ಗೆ ಒಗೆದಿದ್ದಾರೆ. ಘಟನೆಯಲ್ಲಿ ಒಬ್ಬ ಅಭಿಮಾನಿಯ ಕಣ್ಣಿಗೆ ಗಾಯವಾಗಿದೆ. </p>.<p>ಬಿಎಫ್ಸಿಯು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಗೆ ದೂರು ನೀಡಿದೆ. </p>.<p>‘ಬೆಂಗಳೂರು ಎಫ್ಸಿ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಪ್ರವಾಸಿ ತಂಡದ ಅಭಿಮಾನಿಗಳ ಮೇಲೆ ಆತಿಥೇಯ ಬೆಂಬಲಿಗರು ನಡೆಸಿರುವ ದಾಳಿಯು ಅಮಾನವೀಯವಾಗಿದೆ. ಸುಡುಮದ್ದುಗಳನ್ನು ಅಭಿಮಾನಿಗಳ ಗ್ಯಾಲರಿಗೆ ತೂರಿದರು. ಈ ಘಟನೆಯಲ್ಲಿ ಕ್ಲಬ್ ಮಾಲೀಕರಾದ ಪಾರ್ಥ್ ಜಿಂದಾಲ್ ಅವರಿಗೂ ಸುಟ್ಟ ಗಾಯಗಳಾಗಿವೆ’ ಎಂದು ತಂಡವು ದೂರಿನಲ್ಲಿ ಉಲ್ಲೇಖಿಸಿದೆ.</p>.<p>‘ಈ ಕುರಿತು ನಾವು ಎಐಎಫ್ಎಫ್ಗೆ ದೂರು ನೀಡಿದ್ದೇವೆ. ಕ್ರೀಡಾಂಗಣಗಳಲ್ಲಿ ಆಟಗಾರರು ಮತ್ತು ಅಭಿಮಾನಿಗಳಿಗೆ ಭದ್ರತೆ ನೀಡಬೇಕು. ಎಐಎಫ್ಎಫ್ ಮತ್ತು ಎಫ್ಎಸ್ಡಿಎಲ್ ಜಂಟಿಯಾಗಿ ಈ ಕುರಿತು ಗಂಭೀರವಾಗಿ ಚಿಂತಿಸಿ ಪರಿಹಾರ ಕಂಡುಹಿಡಿಯಬೇಕು. ಅಭಿಮಾನಿಗಳ ಸುರಕ್ಷತೆಗೆ ಕಟ್ಟುನಿಟ್ಟಾದ ರಕ್ಷಣಾ ವ್ಯವಸ್ಥೆ ರೂಪಿಸಬೇಕು’ ಎಂದು ತಂಡವು ಆಗ್ರಹಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>