ಭಾರತವು ಅನುಭವಿ ಚೆಟ್ರಿಯ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಗುಣಮಟ್ಟದ ಸ್ಟ್ರೈಕರ್ನ ಕೊರತೆಯಿರುವುದು ಕತಾರ್ನಲ್ಲಿ ಇತ್ತೀಚೆಗೆ ನಡೆದ ವಿಶ್ವಕಪ್ ಮತ್ತು ಏಷ್ಯಾಕಪ್ ಜಂಟಿ ಅರ್ಹತಾ ಪಂದ್ಯಗಳಲ್ಲಿ ಸಾಬೀತಾಗಿತ್ತು. ಚೆಟ್ರಿ ಗಳಿಸಿದ ಎರಡು ಗೋಲುಗಳ ನೆರವಿನಿಂದಲೇ ತಂಡವು 2-0 ಗೋಲುಗಳಿಂದ ಬಾಂಗ್ಲಾದೇಶದ ವಿರುದ್ಧ ಜಯಿಸಿತ್ತು. ಇದು ಟೂರ್ನಿಯ ಈ ಲೆಗ್ನಲ್ಲಿ ಭಾರತದ ಏಕೈಕ ಗೆಲುವಾಗಿತ್ತು.