ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ್‌ ಟ್ರೋಫಿಗೆ ಕರ್ನಾಟಕ ತಂಡ: ಮನೋಜ್ ನಾಯಕ

Published 17 ಫೆಬ್ರುವರಿ 2024, 22:53 IST
Last Updated 17 ಫೆಬ್ರುವರಿ 2024, 22:53 IST
ಅಕ್ಷರ ಗಾತ್ರ

ಬೆಂಗಳೂರು: ಮನೋಜ್ ಸ್ವಾಮಿ ಕಣ್ಣನ್ ಅವರು ಇದೇ 21 ರಿಂದ ಮಾರ್ಚ್‌ 9ರವರೆಗೆ ಅರುಣಾಚಲ ಪ್ರದೇಶದಲ್ಲಿ ಸಂತೋಷ್ ಟ್ರೋಫಿಗಾಗಿ ನಡೆಯಲಿರುವ 77ನೇ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ನಲ್ಲಿ ‍ಪಾಲ್ಗೊಳ್ಳುವ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಸೌದಿ ಅರೇಬಿಯಾದಲ್ಲಿ ನಡೆದಿದ್ದ ಕೊನೆಯ ಆವೃತ್ತಿಯ ಚಾಂಪಿಯನ್ ಆಗಿರುವ ಕರ್ನಾಟಕ ತಂಡ ‘ಬಿ’ ಗುಂಪಿನಲ್ಲಿದ್ದು ಫೆ. 22 ರಂದು ನಡೆಯುವ ಮೊದಲ ಪಂದ್ಯದಲ್ಲಿ ದೆಹಲಿಯನ್ನು ಎದುರಿಸಲಿದೆ. 24ರಂದು ಮಿಜೋರಾಂ, 26ರಂದು ಮಣಿಪುರ, 29ರಂದು ರೈಲ್ವೇಸ್ ಮತ್ತು ಅಂತಿಮ ಪಂದ್ಯದಲ್ಲಿಮ ಹಾರಾಷ್ಟ್ರ ವಿರುದ್ಧ ಆಡಲಿದೆ.

ಮಾರ್ಚ್‌ 4ರಿಂದ ಕ್ವಾರ್ಟರ್‌ಫೈನಲ್ ಪಂದ್ಯಗಳು ನಡೆಯಲಿವೆ.

ತಂಡ ಹೀಗಿದೆ: ಕಬೀರ್ ತೌಫಿಕ್, ಕ್ರಿಸ್ತರಾಜನ್, ಶ್ರೀಜಿತ್ ಆರ್, ನಿಖಿಲ್ ಜಿ., ಜಾನ್ ಪೀಟರ್, ಪ್ರಬಿನ್ ತಿಗ್ಗಾ, ಶಾನಿದ್ ವಲನ್, ಮನೋಜ್ ಸ್ವಾಮಿ ಕಣ್ಣನ್ (ನಾಯಕ), ವಿ.ಸುರೇಂದ್ರ ಪ್ರಸಾದ್, ಬಿ.ಎಸ್.ಮೃಣಾಲ್ ಮುತ್ತಣ್ಣ, ಪ್ರಶಾಂತ್ ಕಾಳಿಂಗ, ವಿಶಾಲ್ ಆರ್., ವಿನಿತ್ ವೆಂಕಟೇಶ್, ಎ.
ಮೊಹಮ್ಮದ್ ಮೊಯಿನುದ್ದೀನ್, ಕಾರ್ತಿಕ್ ಗೋವಿಂದ್ ಸ್ವಾಮಿ, ಸತೀಶ್ ಕುಮಾರ್, ಗಾಡ್ವಿನ್ ಜಾನ್ಸನ್, ರಶೀದ್ ಸಿ.ಕೆ., ಅಪ್ಪು, ಡಿ ಶೆಲ್ತೋನ್ ಪಾಲ್, ನಿಖಿಲ್ ರಾಜ್ ಮುರುಗೇಶ್ ಕುಮಾರ್ ಮತ್ತು ವಿಘ್ನೇಶ್ ವಿ.
ಮುಖ್ಯ ಕೋಚ್‌: ಆರ್.ರವಿಬಾಬು, ಸಹಾಯಕ ಕೋಚ್‌: ಸುನಿಲ್ ಕುಮಾರ್. ಗೋಲ್‌ಕೀಪಿಂಗ್‌ ಕೋಚ್‌: ಎಸ್‌.ರಾಜನ್‌. ಮ್ಯಾನೇಜರ್‌: ಸರವಣ ಧರ್ಮನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT