ಉಡುಪಿ: ಜಾರ್ಖಂಡ್ನ ಧನ್ ಬಾದ್ ಫುಟ್ಬಾಲ್ ಅಕಾ ಡೆಮಿಗೆ ತರಬೇತುದಾರರಾಗಿ ಮುಂಬೈ–ಕರ್ನಾಟಕ ಸ್ಪೋರ್ಟ್ಸ್ ಅಸೋಸಿಯೇಷನ್ ಮಾಜಿ ಕೋಚ್ ಶೇಖರ್ ಬಂಗೇರ ಆಯ್ಕೆ ಯಾಗಿದ್ದಾರೆ.
ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ ಆಯೋಜಕತ್ವದ 18 ವರ್ಷ ದೊಳಗಿನವರ ಇಂಡಿಯನ್ ಲೀಗ್ ಇದೇ ತಿಂಗಳ ಕೊನೆಯಲ್ಲಿ ಜರುಗಲಿದ್ದು ಧನ್ಬಾದ್ ತಂಡಕ್ಕೆ ಶೇಖರ್ ಬಂಗೇರ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಧನ್ಬಾದ್ ಅಕಾಡೆಮಿಯು ಗೋವಾ, ಕೇರಳ, ಮಹಾರಾಷ್ಟ್ರದಲ್ಲಿ ಅಕಾಡೆಮಿಗಳನ್ನು ಹೊಂದಿದ್ದು ಶೇಖರ್ ಬಂಗೇರ ಅವರನ್ನು ಮುಖ್ಯ ಕೋಚ್ ಆಗಿ ನಿಯುಕ್ತಿಗೊಳಿಸಲಾಗಿದೆ.