ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸುವ ಭಾರತ ತಂಡದ ಆಯ್ಕೆಗೆ ಹಾಕಿ ಇಂಡಿಯಾ ಮುನ್ನುಡಿ ಬರೆದಿದೆ.
ಸ್ಪೇನ್ನಲ್ಲಿ ನಡೆಯಲಿರುವ ಪಂಚದೇಶಗಳ ಸರಣಿಯಲ್ಲಿ ಆಡಲು 39 ಆಟಗಾರರ ಸಂಭವನೀಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ನಡೆಯಲಿರುವ ರಾಷ್ಟ್ರೀಯ ಶಿಬಿರದಲ್ಲಿ ಈ ತಂಡವು ಭಾಗವಹಿಸಲಿದೆ. ನಂತರ ಅಂತಿಮ 20ರ ತಂಡವನ್ನು ಆಯ್ಕೆ ಮಾಡಲಾಗುವುದು.
ಟೋಕಿಯೊ ಒಲಿಂಪಿಕ್ ಪದಕ ವಿಜೇತ ತಂಡದ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ಮನದೀಪ್ ಸಿಂಗ್ ಹಾಗೂ ಮನ್ಪ್ರೀತ್ ಸಿಂಗ್ ಅವರೂ ತಂಡದಲ್ಲಿದ್ದಾರೆ.
ಮುಂಬರುವ ಒಲಿಂಪಿಕ್ಸ್ ಸಿದ್ಧತೆ ಇಲ್ಲಿಂದಲೇ ಆರಂಭವಾಗಲಿದೆ ಎಂದು ತಂಡದ ಕೋಚ್ ಕ್ರೇಗ್ ಫುಲ್ಟಾನ್ ಕೂಡ ಇಂಗಿತ ವ್ಯಕ್ತಪಡಿಸಿದ್ದಾರೆ.