ಬೆಂಗಳೂರು: ಕೇಂದ್ರ ಸುಂಕ ಮತ್ತು ತೆರಿಗೆ ಇಲಾಖೆಯ ಅಧಿಕಾರಿ ಎಂ. ಯೋಗೇಂದ್ರ ಚೆನ್ನೈನಲ್ಲಿ ಈಚೆಗೆ ನಡೆದ 52ನೇ ಕೇಂದ್ರ ಕಂದಾಯ ಇಲಾಖೆಗಳ ಕ್ರೀಡಾಕೂಟದಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದ್ದರು.
50 ವರ್ಷ ಮೇಲಿನವರ ವಿಭಾಗದ 1500 ಮೀಟರ್ಸ್ ಮತ್ತು 400 ಮೀಟರ್ಸ್ ಓಟಗಳಲ್ಲಿ ಎರಡನೇ ಸ್ಥಾನ ಪಡೆದರು. ಇದರೊಂದಿಗೆ ಇದೇ ತಿಂಗಳು ಕೋಲ್ಕತ್ತದಲ್ಲಿ ನಡೆಯಲಿರುವ ಅಖಿಲ ಭಾರತಮಟ್ಟದ ಕೂಟಕ್ಕೆ ಆಯ್ಕೆಯಾದರು.
400 ಮೀಟರ್ಸ್ ಓಟದಲ್ಲಿ ಮೈಸೂರಿನ ಆದಾಯ ತೆರಿಗೆ ಇಲಾಖೆಯ ಆಡಳಿತಾಧಿಕಾರಿ ಮಹದೇವಯ್ಯ ಕಂಚಿನ ಪದಕ ಪಡೆದರು.