ಜಕಾರ್ತ: ಎದುರಾಳಿಯನ್ನು ನೇರ ಗೇಮ್ಗಳಿಂದ ಮಣಿಸಿದ ಭಾರತದ ಪಿ.ವಿ.ಸಿಂಧು ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಅವರು ಜಪಾನ್ನ ಅಯಾ ಒಹೋರಿ ಅವರನ್ನು 21–17, 21–14ರಿಂದ ಮಣಿಸಿದರು. ಪುರುಷರ ವಿಭಾಗದಲ್ಲಿ ಎಚ್.ಎಸ್. ಪ್ರಣಯ್ ಪ್ರಯಾಸದ ಗೆಲುವಿನ ಮೂಲಕ 16ರ ಘಟ್ಟಕ್ಕೆ ಲಗ್ಗೆ ಇಟ್ಟರು. ಆದರೆ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ನಿರಾಸೆ ಮೂಡಿಸಿದರು.