<p><strong>ಚಂಡೀಗಢ</strong>: ಅರ್ಜುನ ಪ್ರಶಸ್ತಿ ವಿಜೇತೆ, ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸ್ವೀಟಿ ಬೂರಾ ಅವರು ತಮ್ಮ ಪತಿ ದೀಪಕ್ ಹೂಡಾ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.</p><p>ಸ್ವೀಟಿ ಅವರ ಪತಿ ದೀಪಕ್ ಕಬ್ಬಡ್ಡಿಯಲ್ಲಿ ಏಷ್ಯಾಡ್ ಕಂಚಿನ ಪದಕ ವಿಜೇತರಾಗಿದ್ದಾರೆ.</p><p>ಸ್ವೀಟಿ ಮತ್ತು ದೀಪಕ್ 2022ರಲ್ಲಿ ವಿವಾಹವಾಗಿದ್ದರು. ಇದೀಗ ದೀಪಕ್ ಮತ್ತು ಅವರ ಕುಟುಂಬ ಸದಸ್ಯರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಹರಿಯಾಣದ ಹಿಸ್ಸಾರ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ.</p><p>‘ಫೆ.25ರಂದು ಸ್ವೀಟಿ ಅವರ ದೂರನ್ನು ಆಧರಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ದೀಪಕ್ ಅವರಿಗೆ ಎರಡು, ಮೂರು ಬಾರಿ ನೊಟೀಸ್ ನೀಡಿದರೂ ಅವರು ಠಾಣೆಗೆ ಹಾಜರಾಗಿಲ್ಲ’ ಎಂದು ಹಿಸ್ಸಾರ್ನ ಮಹಿಳಾ ಪೊಲೀಸ್ ಠಾಣೆಯ ಎಸ್ಎಚ್ಒ ಸೀಮಾ ತಿಳಿಸಿದ್ದಾರೆ.</p><p>‘ಈ ಬಗ್ಗೆ ದೀಪಕ್ ಅವರನ್ನು ಸುದ್ದಿಸಂಸ್ಥೆ ಸಂಪರ್ಕಿಸಿದಾಗ ಅವರು ತಮ್ಮ ಗೈರುಹಾಜರಿ ಸಮರ್ಥಿಸಿಕೊಂಡರು. ‘ಪ್ರಕರಣದಿಂದ ಮಾನಸಿಕ ಕ್ಷೋಭೆಗೆ ಒಳಗಾಗಿದ್ದೇನೆ’ ಎಂದರು.</p><p>‘ನಾನು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿದ್ದು, ದಿನಾಂಕ ಮುಂದೂಡುವಂತೆ ವಿನಂತಿಸಿದ್ದೇನೆ. ನಾನು ಠಾಣೆಗೆ ಖಂಡಿತ ಹೋಗುವೆ. ಪತ್ನಿಯ ವಿರುದ್ಧ ನಕಾರಾತ್ಮಕವಾಗಿ ಮಾತನಾಡುವುದಿಲ್ಲ. ಆಕೆಯನ್ನು ಭೇಟಿ ಮಾಡಲು ನನಗೆ ಅವಕಾಶ ನೀಡುತ್ತಿಲ್ಲ’ ಎಂದು ಹೇಳಿದರು.</p><p>ಈ ಕುರಿತು ಪ್ರತಿಕ್ರಿಯಿಸಲು ಸ್ವೀಟಿ ನಿರಾಕರಿಸಿದ್ದಾರೆ.</p><p>‘ವಿಲಾಸಿ ಕಾರು ನೀಡುವಂತೆ ಒತ್ತಾಯಿಸಿದ್ದು, ಅದನ್ನು ಈಡೇರಿಸಲಾಗಿದೆ. ಆದರೆ ಪತಿ ಆಕೆಗೆ ಹೊಡೆಯುತ್ತಾರೆ. ಹಣ ಕೊಡುವಂತೆ ಪೀಡಿಸುತ್ತಿರುತ್ತಾರೆ’ ಎಂದು ಎಸ್ಎಚ್ಒ ದೂರಿನಲ್ಲಿರುವ ಅಂಶ ಹೆಕ್ಕಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ</strong>: ಅರ್ಜುನ ಪ್ರಶಸ್ತಿ ವಿಜೇತೆ, ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸ್ವೀಟಿ ಬೂರಾ ಅವರು ತಮ್ಮ ಪತಿ ದೀಪಕ್ ಹೂಡಾ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.</p><p>ಸ್ವೀಟಿ ಅವರ ಪತಿ ದೀಪಕ್ ಕಬ್ಬಡ್ಡಿಯಲ್ಲಿ ಏಷ್ಯಾಡ್ ಕಂಚಿನ ಪದಕ ವಿಜೇತರಾಗಿದ್ದಾರೆ.</p><p>ಸ್ವೀಟಿ ಮತ್ತು ದೀಪಕ್ 2022ರಲ್ಲಿ ವಿವಾಹವಾಗಿದ್ದರು. ಇದೀಗ ದೀಪಕ್ ಮತ್ತು ಅವರ ಕುಟುಂಬ ಸದಸ್ಯರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಹರಿಯಾಣದ ಹಿಸ್ಸಾರ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ.</p><p>‘ಫೆ.25ರಂದು ಸ್ವೀಟಿ ಅವರ ದೂರನ್ನು ಆಧರಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ದೀಪಕ್ ಅವರಿಗೆ ಎರಡು, ಮೂರು ಬಾರಿ ನೊಟೀಸ್ ನೀಡಿದರೂ ಅವರು ಠಾಣೆಗೆ ಹಾಜರಾಗಿಲ್ಲ’ ಎಂದು ಹಿಸ್ಸಾರ್ನ ಮಹಿಳಾ ಪೊಲೀಸ್ ಠಾಣೆಯ ಎಸ್ಎಚ್ಒ ಸೀಮಾ ತಿಳಿಸಿದ್ದಾರೆ.</p><p>‘ಈ ಬಗ್ಗೆ ದೀಪಕ್ ಅವರನ್ನು ಸುದ್ದಿಸಂಸ್ಥೆ ಸಂಪರ್ಕಿಸಿದಾಗ ಅವರು ತಮ್ಮ ಗೈರುಹಾಜರಿ ಸಮರ್ಥಿಸಿಕೊಂಡರು. ‘ಪ್ರಕರಣದಿಂದ ಮಾನಸಿಕ ಕ್ಷೋಭೆಗೆ ಒಳಗಾಗಿದ್ದೇನೆ’ ಎಂದರು.</p><p>‘ನಾನು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿದ್ದು, ದಿನಾಂಕ ಮುಂದೂಡುವಂತೆ ವಿನಂತಿಸಿದ್ದೇನೆ. ನಾನು ಠಾಣೆಗೆ ಖಂಡಿತ ಹೋಗುವೆ. ಪತ್ನಿಯ ವಿರುದ್ಧ ನಕಾರಾತ್ಮಕವಾಗಿ ಮಾತನಾಡುವುದಿಲ್ಲ. ಆಕೆಯನ್ನು ಭೇಟಿ ಮಾಡಲು ನನಗೆ ಅವಕಾಶ ನೀಡುತ್ತಿಲ್ಲ’ ಎಂದು ಹೇಳಿದರು.</p><p>ಈ ಕುರಿತು ಪ್ರತಿಕ್ರಿಯಿಸಲು ಸ್ವೀಟಿ ನಿರಾಕರಿಸಿದ್ದಾರೆ.</p><p>‘ವಿಲಾಸಿ ಕಾರು ನೀಡುವಂತೆ ಒತ್ತಾಯಿಸಿದ್ದು, ಅದನ್ನು ಈಡೇರಿಸಲಾಗಿದೆ. ಆದರೆ ಪತಿ ಆಕೆಗೆ ಹೊಡೆಯುತ್ತಾರೆ. ಹಣ ಕೊಡುವಂತೆ ಪೀಡಿಸುತ್ತಿರುತ್ತಾರೆ’ ಎಂದು ಎಸ್ಎಚ್ಒ ದೂರಿನಲ್ಲಿರುವ ಅಂಶ ಹೆಕ್ಕಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>