<p><strong>ಮಂಗಳೂರು:</strong> ಮೂರು ಮತ್ತು ನಾಲ್ಕನೇ ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿದರೂ ಚೇತರಿಸಿಕೊಂಡು ಮುನ್ನಡೆದ ಅಗ್ರ ಶ್ರೇಯಾಂಕಿತ, ಕೇರಳದ ಮಾರ್ತಾಂಡನ್ ಕೆ.ಯು ರಾಷ್ಟ್ರಮಟ್ಟದ ಫಿಡೆ ರೇಟೆಡ್ ಚೆಸ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು.</p>.<p>ದಕ್ಷಿಣ ಕನ್ನಡ ಚೆಸ್ ಸಂಸ್ಥೆ ಇಲ್ಲಿನ ಕರ್ನಾಟಕ ತುಳು ಅಕಾಡೆಮಿಯಲ್ಲಿ ಆಯೋಜಸಿದ್ದ ಟೂರ್ನಿಯ ಕೊನೆಯ ಹಾಗೂ ಒಂಬತ್ತನೇ ಸುತ್ತಿನಲ್ಲಿ ಮಂಗಳವಾರ ಜಯ ಗಳಿಸುವ ಮೂಲಕ ಮಾರ್ತಾಂಡನ್ 7.5 ಪಾಯಿಂಟ್ ಕಲೆ ಹಾಕಿದರು. </p>.<p>ಕರ್ನಾಟಕದ ಇಶಾನ್ ಭನ್ಸಾಲಿ, ಗೋವಾದ ಜೋಶುವಾ ಮಾರ್ಕ್ ಟೆಲಿಸ್, ಕೇರಳದ ವೈಷ್ಣವ್ ಮತ್ತು ಅಜೀಶ್ ಆ್ಯಂಟನಿ, ಕರ್ನಾಟಕದ ಗವಿಸಿದ್ದಯ್ಯ, ಗುಜರಾತ್ನ ಅಡಲ್ಜ ವಂಶ್, ತಮಿಳುನಾಡಿನ ವಿಘ್ನೇಶ್ವರನ್ ಮತ್ತು ಕರ್ನಾಟಕದ ಲಕ್ಷಿತ್ ಸಾಲಿಯಾನ್ ತಲಾ 7 ಪಾಯಿಂಟ್ಗಳನ್ನು ಗಳಿಸಿದರು. ಉತ್ತಮ ಟೈಬ್ರೇಕರ್ ಆಧಾರದಲ್ಲಿ ಇಶಾನ್ ರನ್ನರ್ ಅಪ್ ಆದರೆ ಜೋಶುವಾ ಮೂರನೇ ಸ್ಥಾನ ಗಳಿಸಿದರು. </p>.<p>ಎರಡನೇ ಶ್ರೇಯಾಂಕಿತ, ಇಂಟರ್ನ್ಯಾಷನಲ್ ಮಾಸ್ಟರ್ ತಮಿಳುನಾಡಿನ ಬಾಲಸುಬ್ರಹ್ಮಣ್ಯಂ ರಾಮನಾಥನ್ ಮತ್ತು ಮೂರನೇ ಶ್ರೇಯಾಂಕಿತ ತಮಿಳುನಾಡಿನ ಪ್ರಸನ್ನ ಕಾರ್ತಿಕ್ 6.5 ಪಾಯಿಂಟ್ಗಳೊಂದಿಗೆ ಕ್ರಮವಾಗಿ 11 ಮತ್ತು 12ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಇವರಿಬ್ಬರೊಂದಿಗೆ ಒಟ್ಟು 13 ಮಂದಿ 6.5 ಪಾಯಿಂಟ್ ಗಳಿಸಿದರು. </p>.<p>ಭಾನುವಾರ 7 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದ ಏಕೈಕ ಆಟಗಾರ ಇಶಾನ್ ಕೊನೆಯ ಸುತ್ತಿನಲ್ಲಿ ಮಾರ್ತಾಂಡನ್ ಎದುರು ಆಡಿದರು. ಪಂದ್ಯವನ್ನು ಗೆದ್ದು ಮಾರ್ತಾಂಡನ್ ಟ್ರೋಫಿ ಮತ್ತು ₹ 50 ಸಾವಿರ ನಗದು ತಮ್ಮದಾಗಿಸಿಕೊಂಡರು. ಟೂರ್ನಿಯಲ್ಲಿ ಒಟ್ಟು ₹ 6 ಲಕ್ಷ ಬಹುಮಾನ ಮೊತ್ತವಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಮೂರು ಮತ್ತು ನಾಲ್ಕನೇ ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿದರೂ ಚೇತರಿಸಿಕೊಂಡು ಮುನ್ನಡೆದ ಅಗ್ರ ಶ್ರೇಯಾಂಕಿತ, ಕೇರಳದ ಮಾರ್ತಾಂಡನ್ ಕೆ.ಯು ರಾಷ್ಟ್ರಮಟ್ಟದ ಫಿಡೆ ರೇಟೆಡ್ ಚೆಸ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು.</p>.<p>ದಕ್ಷಿಣ ಕನ್ನಡ ಚೆಸ್ ಸಂಸ್ಥೆ ಇಲ್ಲಿನ ಕರ್ನಾಟಕ ತುಳು ಅಕಾಡೆಮಿಯಲ್ಲಿ ಆಯೋಜಸಿದ್ದ ಟೂರ್ನಿಯ ಕೊನೆಯ ಹಾಗೂ ಒಂಬತ್ತನೇ ಸುತ್ತಿನಲ್ಲಿ ಮಂಗಳವಾರ ಜಯ ಗಳಿಸುವ ಮೂಲಕ ಮಾರ್ತಾಂಡನ್ 7.5 ಪಾಯಿಂಟ್ ಕಲೆ ಹಾಕಿದರು. </p>.<p>ಕರ್ನಾಟಕದ ಇಶಾನ್ ಭನ್ಸಾಲಿ, ಗೋವಾದ ಜೋಶುವಾ ಮಾರ್ಕ್ ಟೆಲಿಸ್, ಕೇರಳದ ವೈಷ್ಣವ್ ಮತ್ತು ಅಜೀಶ್ ಆ್ಯಂಟನಿ, ಕರ್ನಾಟಕದ ಗವಿಸಿದ್ದಯ್ಯ, ಗುಜರಾತ್ನ ಅಡಲ್ಜ ವಂಶ್, ತಮಿಳುನಾಡಿನ ವಿಘ್ನೇಶ್ವರನ್ ಮತ್ತು ಕರ್ನಾಟಕದ ಲಕ್ಷಿತ್ ಸಾಲಿಯಾನ್ ತಲಾ 7 ಪಾಯಿಂಟ್ಗಳನ್ನು ಗಳಿಸಿದರು. ಉತ್ತಮ ಟೈಬ್ರೇಕರ್ ಆಧಾರದಲ್ಲಿ ಇಶಾನ್ ರನ್ನರ್ ಅಪ್ ಆದರೆ ಜೋಶುವಾ ಮೂರನೇ ಸ್ಥಾನ ಗಳಿಸಿದರು. </p>.<p>ಎರಡನೇ ಶ್ರೇಯಾಂಕಿತ, ಇಂಟರ್ನ್ಯಾಷನಲ್ ಮಾಸ್ಟರ್ ತಮಿಳುನಾಡಿನ ಬಾಲಸುಬ್ರಹ್ಮಣ್ಯಂ ರಾಮನಾಥನ್ ಮತ್ತು ಮೂರನೇ ಶ್ರೇಯಾಂಕಿತ ತಮಿಳುನಾಡಿನ ಪ್ರಸನ್ನ ಕಾರ್ತಿಕ್ 6.5 ಪಾಯಿಂಟ್ಗಳೊಂದಿಗೆ ಕ್ರಮವಾಗಿ 11 ಮತ್ತು 12ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಇವರಿಬ್ಬರೊಂದಿಗೆ ಒಟ್ಟು 13 ಮಂದಿ 6.5 ಪಾಯಿಂಟ್ ಗಳಿಸಿದರು. </p>.<p>ಭಾನುವಾರ 7 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದ ಏಕೈಕ ಆಟಗಾರ ಇಶಾನ್ ಕೊನೆಯ ಸುತ್ತಿನಲ್ಲಿ ಮಾರ್ತಾಂಡನ್ ಎದುರು ಆಡಿದರು. ಪಂದ್ಯವನ್ನು ಗೆದ್ದು ಮಾರ್ತಾಂಡನ್ ಟ್ರೋಫಿ ಮತ್ತು ₹ 50 ಸಾವಿರ ನಗದು ತಮ್ಮದಾಗಿಸಿಕೊಂಡರು. ಟೂರ್ನಿಯಲ್ಲಿ ಒಟ್ಟು ₹ 6 ಲಕ್ಷ ಬಹುಮಾನ ಮೊತ್ತವಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>