ಯುವ ಆಟಗಾರರಾದ ರಿಶಾಂಕ್ ದೇವಾಡಿಗ ಮತ್ತು ಮೋನು ಗೋಯತ್ ಅವರ ಮೇಲೆ ಭಾರತ ತಂಡ ಭರವಸೆ ಇರಿಸಿದೆ. ಮೊದಲ ಬಾರಿ ಪ್ರಮುಖ ಟೂರ್ನಿಯಲ್ಲಿ ಆಡುತ್ತಿರುವ ಇವರಿಬ್ಬರು ಈ ವರೆಗೆ ಉತ್ತಮ ಸಾಮರ್ಥ್ಯ ತೋರಿಸಿದ್ದಾರೆ. ನಾಯಕ ಅಜಯ್ ಠಾಕೂರ್ ರೈಡಿಂಗ್ನಲ್ಲಿ ಮಿಂಚಿದ್ದು ಡಿಫೆಂಡರ್ಗಳಾದ ಸುರೇಂದ್ರ ನಾಡಾ, ಗಿರೀಶ್ ಮಾರುತಿ ಮತ್ತು ಸುರ್ಜೀತ್ ಗಮನಾರ್ಹ ಸಾಧನೆ ಮಾಡಿದ್ದಾರೆ.