ಜಕಾರ್ತ: ದೀಪಾ ಕರ್ಮಾಕರ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿದ ಭಾರತದ ಮಹಿಳಾ ಜಿಮ್ನಾಸ್ಟ್ಗಳು ಏಳನೇ ಸ್ಥಾನ ಗಳಿಸಿದರು.
ಎಂಟು ತಂಡಗಳಿದ್ದ ಫೈನಲ್ನಲ್ಲಿ ಭಾರತ ಬುಧವಾರ 138.50 ಪಾಯಿಂಟ್ ಗಳಿಸಿತು. ಆತಿಥೇಯ ಇಂಡೊನೇಷ್ಯಾ ಕೊನೆಯ ಸ್ಥಾನದಲ್ಲಿ ಉಳಿಯಿತು. ಮೊಣಕಾಲು ನೋವಿನಿಂದ ಬಳಲಿದ ದೀಪಾ ಕರ್ಮಾಕರ್ ಫೈನಲ್ನಲ್ಲಿ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದರು.
ಅರುಣ ಬುದ್ಧ ರೆಡ್ಡಿ ಮತ್ತು ಪ್ರಣತಿ ದಾಸ್ ಎಲ್ಲ ನಾಲ್ಕು ವಿಭಾಗಗಳಲ್ಲೂ ಸ್ಪರ್ಧಿಸಿದರು. ಪ್ರಣತಿ ನಾಯಕ್ ಮೂರು ವಿಭಾಗಗಳಲ್ಲಿ ಮಾತ್ರ ಸ್ಪರ್ಧಿಸಿದರು. ಮಂದಿರಾ ಚೌಧರಿ, ಬ್ಯಾಲನ್ಸ್ ಬೀಮ್ ವಿಭಾಗದಲ್ಲಷ್ಟೇ ಸೆಣಸಿದರು.
ಮಹಿಳೆಯರ ವೈಯಕ್ತಿಕ ಫೈನಲ್ ಸ್ಪರ್ಧೆಗಳು ಗುರುವಾರ ನಡೆಯಲಿವೆ.