<p><strong>ನವದೆಹಲಿ</strong>: ಪ್ಯಾರಿಸ್ ಒಲಿಂಪಿಕ್ಸ್ ಸಂಘಟಕರಿಗೆ ಕಳುಹಿಸಲಾದ ಪಟ್ಟಿಯಲ್ಲಿ ಕುಸ್ತಿಪಟು ಅಂತಿಮ ಪಂಘಲ್ ಅವರ ತರಬೇತುದಾರರ ಹೆಸರನ್ನು ಕೈಬಿಟ್ಟಿರುವುದಕ್ಕೆ ಭಾರತ ಕುಸ್ತಿ ಫೆಡರೇಷನ್ನ ಅಡ್ಹಾಕ್ ಸಮಿತಿ ವಿರುದ್ಧ ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಪಿ.ಟಿ. ಉಷಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಭಾರತ ಕುಸ್ತಿ ಫೆಡರೇಷನ್ ಅಮಾನತಿನಲ್ಲಿದ್ದಾಗ ಅಡ್ಹಾಕ್ ಸಮಿತಿಯು ಸಂಘಟಕರಿಗೆ ಹೆಸರುಗಳ ಪಟ್ಟಿಯನ್ನು ಕಳುಹಿಸಿತ್ತು. ಈ ವೇಳೆ ಸಮಿತಿಯು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.</p>.<p>ಪ್ಯಾರಿಸ್ಗೆ ಪಂಘಲ್ ಅವರ ಆದ್ಯತೆಯ ತರಬೇತುದಾರರಿಗೆ ವೀಸಾ ಮಂಜೂರು ವಿಳಂಬವಾದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.</p>.<p>ಹಿಸಾರ್ನಲ್ಲಿ ತರಬೇತಿ ಪಡೆಯುತ್ತಿರುವ 19 ವರ್ಷದ ಪಂಘಲ್, 2023ರಲ್ಲಿ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚು ಗೆಲ್ಲುವ ಮೂಲಕ ಪ್ಯಾರಿಸ್ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿದ ಭಾರತದ ಮೊದಲ ಕುಸ್ತಿಪಟುವಾಗಿದ್ದಾರೆ.</p>.<p>ಪಂಘಲ್ ಅವರು ತನ್ನ ಕೋಚ್ಗಳಾದ ಭಗತ್ ಸಿಂಗ್, ವಿಕಾಸ್ ಮತ್ತು ಫಿಸಿಯೋಥೆರಪಿಸ್ಟ್ ಹೀರಾ ಅವರೊಂದಿಗೆ ಪ್ಯಾರಿಸ್ಗೆ ತೆರಳಲು ಬಯಸಿದ್ದು, ಈ ಎಲ್ಲರ ಹೆಸರುಗಳಿಗೆ ಐಒಸಿ ಹಸಿರುನಿಶಾನೆ ನೀಡಿತ್ತು. ಆದರೆ, ನೆರವು ಸಿಬ್ಬಂದಿಯು ಇನ್ನೂ ವೀಸಾ ಮಂಜೂರಾತಿಗಾಗಿ ಕಾಯುತ್ತಿದ್ದಾರೆ.</p>.<p>ಆಗಸ್ಟ್ 3ರಂದು ಕುಸ್ತಿಪಟುಗಳು ಪ್ಯಾರಿಸ್ಗೆ ತಲುಪಬೇಕಿದೆ. ಆದರೆ, ನೆರವು ಸಿಬ್ಬಂದಿಗೆ ಆಗಸ್ಟ್ 2ಕ್ಕೆ ಬಯೋ ಮೆಟ್ರಿಕ್ಸ್ಗೆ ಕಾಲಾವಕಾಶ ನೀಡಲಾಗಿದೆ.</p>.<p>ಭೂಪೇಂದ್ರ ಸಿಂಗ್ ಬಾಜ್ವಾ ಮುಖ್ಯಸ್ಥರಾಗಿದ್ದ ಅಡ್ಹಾಕ್ ಸಮಿತಿಯಲ್ಲಿ ಎಂ.ಎಂ. ಸೋಮಯ್ಯ ಮತ್ತು ಮಂಜುಷಾ ಕನ್ವರ್ ಸದಸ್ಯರಾಗಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಪ್ಯಾರಿಸ್ ಒಲಿಂಪಿಕ್ಸ್ ಸಂಘಟಕರಿಗೆ ಕಳುಹಿಸಲಾದ ಪಟ್ಟಿಯಲ್ಲಿ ಕುಸ್ತಿಪಟು ಅಂತಿಮ ಪಂಘಲ್ ಅವರ ತರಬೇತುದಾರರ ಹೆಸರನ್ನು ಕೈಬಿಟ್ಟಿರುವುದಕ್ಕೆ ಭಾರತ ಕುಸ್ತಿ ಫೆಡರೇಷನ್ನ ಅಡ್ಹಾಕ್ ಸಮಿತಿ ವಿರುದ್ಧ ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಪಿ.ಟಿ. ಉಷಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಭಾರತ ಕುಸ್ತಿ ಫೆಡರೇಷನ್ ಅಮಾನತಿನಲ್ಲಿದ್ದಾಗ ಅಡ್ಹಾಕ್ ಸಮಿತಿಯು ಸಂಘಟಕರಿಗೆ ಹೆಸರುಗಳ ಪಟ್ಟಿಯನ್ನು ಕಳುಹಿಸಿತ್ತು. ಈ ವೇಳೆ ಸಮಿತಿಯು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.</p>.<p>ಪ್ಯಾರಿಸ್ಗೆ ಪಂಘಲ್ ಅವರ ಆದ್ಯತೆಯ ತರಬೇತುದಾರರಿಗೆ ವೀಸಾ ಮಂಜೂರು ವಿಳಂಬವಾದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.</p>.<p>ಹಿಸಾರ್ನಲ್ಲಿ ತರಬೇತಿ ಪಡೆಯುತ್ತಿರುವ 19 ವರ್ಷದ ಪಂಘಲ್, 2023ರಲ್ಲಿ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚು ಗೆಲ್ಲುವ ಮೂಲಕ ಪ್ಯಾರಿಸ್ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿದ ಭಾರತದ ಮೊದಲ ಕುಸ್ತಿಪಟುವಾಗಿದ್ದಾರೆ.</p>.<p>ಪಂಘಲ್ ಅವರು ತನ್ನ ಕೋಚ್ಗಳಾದ ಭಗತ್ ಸಿಂಗ್, ವಿಕಾಸ್ ಮತ್ತು ಫಿಸಿಯೋಥೆರಪಿಸ್ಟ್ ಹೀರಾ ಅವರೊಂದಿಗೆ ಪ್ಯಾರಿಸ್ಗೆ ತೆರಳಲು ಬಯಸಿದ್ದು, ಈ ಎಲ್ಲರ ಹೆಸರುಗಳಿಗೆ ಐಒಸಿ ಹಸಿರುನಿಶಾನೆ ನೀಡಿತ್ತು. ಆದರೆ, ನೆರವು ಸಿಬ್ಬಂದಿಯು ಇನ್ನೂ ವೀಸಾ ಮಂಜೂರಾತಿಗಾಗಿ ಕಾಯುತ್ತಿದ್ದಾರೆ.</p>.<p>ಆಗಸ್ಟ್ 3ರಂದು ಕುಸ್ತಿಪಟುಗಳು ಪ್ಯಾರಿಸ್ಗೆ ತಲುಪಬೇಕಿದೆ. ಆದರೆ, ನೆರವು ಸಿಬ್ಬಂದಿಗೆ ಆಗಸ್ಟ್ 2ಕ್ಕೆ ಬಯೋ ಮೆಟ್ರಿಕ್ಸ್ಗೆ ಕಾಲಾವಕಾಶ ನೀಡಲಾಗಿದೆ.</p>.<p>ಭೂಪೇಂದ್ರ ಸಿಂಗ್ ಬಾಜ್ವಾ ಮುಖ್ಯಸ್ಥರಾಗಿದ್ದ ಅಡ್ಹಾಕ್ ಸಮಿತಿಯಲ್ಲಿ ಎಂ.ಎಂ. ಸೋಮಯ್ಯ ಮತ್ತು ಮಂಜುಷಾ ಕನ್ವರ್ ಸದಸ್ಯರಾಗಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>