<p><strong>ಮನಿಲಾ, ಪಿಲಿಪ್ಪೀನ್ಸ್:</strong> ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಸೆಮಿಫೈನಲ್ ಪಂದ್ಯದಲ್ಲಿ ಅಂಪೈರ್ಗಳ ‘ಅನ್ಯಾಯ‘ದ ನಿರ್ಧಾರದಿಂದಾಗಿ ತಾನು ಸೋಲಬೇಕಾಯಿತು ಎಂದು ಭಾರತದ ಆಟಗಾರ್ತಿ ಪಿ.ವಿ.ಸಿಂಧು ಕಣ್ಣೀರು ಸುರಿಸಿದ್ದಾರೆ.</p>.<p>ಪಂದ್ಯದ ಮೊದಲ ಗೇಮ್ ಗೆದ್ದುಕೊಂಡಿದ್ದ ಸಿಂಧು ಅವರಿಗೆ ಎರಡನೇ ಗೇಮ್ನಲ್ಲಿ 14–11ರಿಂದ ಮುನ್ನಡೆಯಲ್ಲಿದ್ದರು. ಈ ವೇಳೆ ಸರ್ವ್ ಮಾಡಲುಸಿಂಧು ನಿಗದಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂದು ಅಂಪೈರ್ ಪೆನಾಲ್ಟಿ ನೀಡಿದ್ದರು. ಇದರಿಂದ ಎದುರಾಳಿ ಜಪಾನ್ನ ಅಕಾನೆ ಯಮಗುಚಿ ಅವರಿಗೆ ಒಂದು ಹೆಚ್ಚುವರಿ ಪಾಯಿಂಟ್ ಲಭಿಸಿತ್ತು. ತರುವಾಯ ಪಂದ್ಯದಲ್ಲಿ ಭಾರತದ ಆಟಗಾರ್ತಿ21-13, 19-21, 16-21ರಿಂದ ಸೋತು ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.</p>.<p><a href="https://www.prajavani.net/sports/sports-extra/khelo-india-hockey-gold-for-bangalore-university-933089.html" itemprop="url">ಖೇಲೊ ಇಂಡಿಯಾ ಹಾಕಿ: ಬೆಂಗಳೂರು ವಿವಿಗೆ ಚಿನ್ನ </a></p>.<p>‘ಸರ್ವ್ ಮಾಡಲು ನೀವು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೀರಿ ಎಂದು ಅಂಪೈರ್ ನನಗೆ ಹೇಳಿದರು. ಆ ಹಂತದಲ್ಲಿ ಸರ್ವ್ ಎದುರಿಸಲು ಅಕಾನೆ ಇನ್ನೂ ಸಿದ್ಧರಾಗಿರಲಿಲ್ಲ. ಆದರೆ ತಕ್ಷಣ ಅವರಿಗೆ ಪಾಯಿಂಟ್ ನೀಡಲಾಯಿತು. ಇದು ನಿಜವಾಗಿ ಅನ್ಯಾಯ. ನನ್ನ ಸೋಲಿಗೆ ಇದೂ ಒಂದು ಕಾರಣ‘ ಎಂದು ಸಿಂಧು ಶನಿವಾರ ಪಂದ್ಯದ ಬಳಿಕ ನುಡಿದರು.</p>.<p>‘ನಾನು 14–11ರಿಂದ ಮುನ್ನಡೆಯಲ್ಲಿದ್ದ ಸಂದರ್ಭದಲ್ಲಿ ಪೆನಾಲ್ಟಿ ನೀಡಲಾಯಿತು. ಆಗ ಸ್ಕೋರ್ 15–11 ಆಗಬೇಕಿತ್ತು. ಬದಲಾಗಿ 14–12 ಆಯಿತು.ಇದು ನನಗೆ ಅನ್ಯಾಯ ಎಂದೆನಿಸಿತು. ಬಳಿಕ ಅಕಾನೆ ಸತತ ಪಾಯಿಂಟ್ಸ್ ಗಳಿಸಿದರು. ಹಾಗಾಗದಿದ್ದರೆ ನಾನು ಪಂದ್ಯ ಜಯಿಸಿ ಫೈನಲ್ನಲ್ಲಿ ಆಡುತ್ತಿದ್ದೆ‘ ಎಂದು ಸಿಂಧು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮನಿಲಾ, ಪಿಲಿಪ್ಪೀನ್ಸ್:</strong> ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಸೆಮಿಫೈನಲ್ ಪಂದ್ಯದಲ್ಲಿ ಅಂಪೈರ್ಗಳ ‘ಅನ್ಯಾಯ‘ದ ನಿರ್ಧಾರದಿಂದಾಗಿ ತಾನು ಸೋಲಬೇಕಾಯಿತು ಎಂದು ಭಾರತದ ಆಟಗಾರ್ತಿ ಪಿ.ವಿ.ಸಿಂಧು ಕಣ್ಣೀರು ಸುರಿಸಿದ್ದಾರೆ.</p>.<p>ಪಂದ್ಯದ ಮೊದಲ ಗೇಮ್ ಗೆದ್ದುಕೊಂಡಿದ್ದ ಸಿಂಧು ಅವರಿಗೆ ಎರಡನೇ ಗೇಮ್ನಲ್ಲಿ 14–11ರಿಂದ ಮುನ್ನಡೆಯಲ್ಲಿದ್ದರು. ಈ ವೇಳೆ ಸರ್ವ್ ಮಾಡಲುಸಿಂಧು ನಿಗದಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂದು ಅಂಪೈರ್ ಪೆನಾಲ್ಟಿ ನೀಡಿದ್ದರು. ಇದರಿಂದ ಎದುರಾಳಿ ಜಪಾನ್ನ ಅಕಾನೆ ಯಮಗುಚಿ ಅವರಿಗೆ ಒಂದು ಹೆಚ್ಚುವರಿ ಪಾಯಿಂಟ್ ಲಭಿಸಿತ್ತು. ತರುವಾಯ ಪಂದ್ಯದಲ್ಲಿ ಭಾರತದ ಆಟಗಾರ್ತಿ21-13, 19-21, 16-21ರಿಂದ ಸೋತು ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.</p>.<p><a href="https://www.prajavani.net/sports/sports-extra/khelo-india-hockey-gold-for-bangalore-university-933089.html" itemprop="url">ಖೇಲೊ ಇಂಡಿಯಾ ಹಾಕಿ: ಬೆಂಗಳೂರು ವಿವಿಗೆ ಚಿನ್ನ </a></p>.<p>‘ಸರ್ವ್ ಮಾಡಲು ನೀವು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೀರಿ ಎಂದು ಅಂಪೈರ್ ನನಗೆ ಹೇಳಿದರು. ಆ ಹಂತದಲ್ಲಿ ಸರ್ವ್ ಎದುರಿಸಲು ಅಕಾನೆ ಇನ್ನೂ ಸಿದ್ಧರಾಗಿರಲಿಲ್ಲ. ಆದರೆ ತಕ್ಷಣ ಅವರಿಗೆ ಪಾಯಿಂಟ್ ನೀಡಲಾಯಿತು. ಇದು ನಿಜವಾಗಿ ಅನ್ಯಾಯ. ನನ್ನ ಸೋಲಿಗೆ ಇದೂ ಒಂದು ಕಾರಣ‘ ಎಂದು ಸಿಂಧು ಶನಿವಾರ ಪಂದ್ಯದ ಬಳಿಕ ನುಡಿದರು.</p>.<p>‘ನಾನು 14–11ರಿಂದ ಮುನ್ನಡೆಯಲ್ಲಿದ್ದ ಸಂದರ್ಭದಲ್ಲಿ ಪೆನಾಲ್ಟಿ ನೀಡಲಾಯಿತು. ಆಗ ಸ್ಕೋರ್ 15–11 ಆಗಬೇಕಿತ್ತು. ಬದಲಾಗಿ 14–12 ಆಯಿತು.ಇದು ನನಗೆ ಅನ್ಯಾಯ ಎಂದೆನಿಸಿತು. ಬಳಿಕ ಅಕಾನೆ ಸತತ ಪಾಯಿಂಟ್ಸ್ ಗಳಿಸಿದರು. ಹಾಗಾಗದಿದ್ದರೆ ನಾನು ಪಂದ್ಯ ಜಯಿಸಿ ಫೈನಲ್ನಲ್ಲಿ ಆಡುತ್ತಿದ್ದೆ‘ ಎಂದು ಸಿಂಧು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>