ಆರಂಭದಲ್ಲಿ 3–7ರ ಹಿನ್ನಡೆ ಅನುಭವಿಸಿದ್ದ ಭಾರತ ನಂತರ ಚೇತರಿಸಿಕೊಂಡಿತು. ಪ್ರದೀಪ್ ನರ್ವಾಲ್ ಬದಲಿಗೆ ಮೋನು ಗೋಯಟ್ ಅವರನ್ನು ಕಣಕ್ಕೆ ಇಳಿಸಿದ ಕೋಚ್ ಶ್ರೀನಿವಾಸ ರೆಡ್ಡಿ ಫಲ ಕಂಡರು. ಠಾಕೂರ್ಗೆ ಉತ್ತಮ ಸಹಕಾರ ನೀಡಿದ ಗೋಯಟ್ ತಂಡಕ್ಕೆ ಪಾಯಿಂಟ್ಗಳನ್ನು ಗಳಿಸಿಕೊಟ್ಟರು. 8–8ರ ಸಮಬಲ ಸಾಧಿಸಿದ ನಂತರ ಹಿಂದಿರುಗಿ ನೋಡದ ಭಾರತ ಪ್ರಥಮಾರ್ಧದ ಮುಕ್ತಾಯಕ್ಕೆ 17–10ರಿಂದ ಮುನ್ನಡೆಯಿತು.