‘ಈ ವರ್ಷದ ಜನವರಿಯಲ್ಲಿ ಬಲ ಮಂಡಿಯ ಗಾಯಕ್ಕೆ ಒಳಗಾಗಿದ್ದ ರವಿ, ಚೇತರಿಸಿಕೊಂಡಿದ್ದರು. ಆದರೆ ಭಾನುವಾರ ತಾಲೀಮು ಕೈಗೊಂಡಿದ್ದಾಗ ಅದೇ ಮಂಡಿಯಲ್ಲಿ ನೋವು ಕಾಣಿಸಿಕೊಂಡಿದೆ. ಏಷ್ಯನ್ ಕ್ರೀಡಾಕೂಟದ ಟ್ರಯಲ್ಸ್ಗೆ ಕೆಲವೇ ದಿನಗಳಿರುವುದರಿಂದ ಗಾಯ ಉಲ್ಬಣಿಸಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಈ ಚಾಂಪಿಯನ್ಷಿಪ್ನಿಂದ ಹಿಂದೆ ಸರಿಯಲು ನಿರ್ಧರಿಸಿದರು’ ಎಂದು ಭಾರತ ಕೋಚಿಂಗ್ ತಂಡದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.