<p><strong>ನವದೆಹಲಿ:</strong> ಟೋಕಿಯೊ ಒಲಿಂಪಿಕ್ಸ್ಗೆ ತೆರಳಲಿರುವ ಭಾರತ ಬ್ಯಾಡ್ಮಿಂಟನ್ ತಂಡದೊಂದಿಗೆ ಪ್ರಯಾಣ ಮಾಡದಿರಲು ರಾಷ್ಟ್ರೀಯ ಮುಖ್ಯ ಕೋಚ್ ಪಿ. ಗೋಪಿಚಂದ್ ನಿರ್ಧರಿಸಿದ್ದಾರೆ.</p>.<p>ಆಟಗಾರ ಬಿ. ಸಾಯಿ ಪ್ರಣೀತ್ ಅವರ ಸಿಂಗಲ್ಸ್ ಬ್ಯಾಡ್ಮಿಂಟನ್ ಟ್ರೇನರ್, ಇಂಡೋನೆಷ್ಯಾದ ಏಗಸ್ ದ್ವಿ ಸಂತೊಸಾಗೆ ತಂಡದೊಂದಿಗೆ ತೆರಳಲು ಗೋಪಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.</p>.<p>2012ರಲ್ಲಿ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗಳಿಸಿದ್ದ ಸೈನಾ ನೆಹ್ವಾಲ್ ಮತ್ತು ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಪಿ.ವಿ. ಸಿಂಧು ಅವರಿಗೆ ಗೋಪಿ ಮಾರ್ಗದರ್ಶನ ನೀಡಿದ್ದರು.</p>.<p>ಈ ಬಾರಿ ಬ್ಯಾಡ್ಮಿಂಟನ್ ತಂಡದೊಂದಿಗೆ ತೆರಳಲು ನೆರವು ಸಿಬ್ಬಂದಿಯಲ್ಲಿ ಐದು ಜನಕ್ಕೆ ಮಾತ್ರ ಅವಕಾಶ ನೀಡಲು ಭಾರತ ಒಲಿಂಪಿಕ್ ಸಂಸ್ಥೆ (ಐಒಸಿ) ನಿರ್ಧರಿಸಿದೆ. ಅದರಿಂದಾಗಿ ತಂಡದಲ್ಲಿ ಮೂವರು ಕೋಚ್ ಮತ್ತು ಇಬ್ಬರು ಫಿಸಿಯೊ ಇದ್ದಾರೆ.</p>.<p>ಗಚ್ಚಿಬೌಳಿ ಕ್ರೀಡಾಂಗಣದಲ್ಲಿ ಸಿಂಧು ಅವರು ಕೊರಿಯಾದ ಕೋಚ್ ಥೇ ಸಂಗ್ ಪಾರ್ಕ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಪ್ರಣಿತ್ ಅವರಿಗೆ ಸಂತೊಸಾ ಮಾರ್ಗದರ್ಶನ ನೀಡುತ್ತಿದ್ದಾರೆ. ಚಿರಾಗ್ ಮತ್ತು ಸಾತ್ವಿಕ್ ಅವರಿಗೆ ಡೆನ್ಮಾರ್ಕ್ನ ಮಥಾಯಿಸ್ ಬೊಯ್ ಮಾರ್ಗದರ್ಶನ ನೀಡುತ್ತಿದ್ದಾರೆ.</p>.<p>‘ಲಭ್ಯವಿದ್ದ ಒಂದು ಕೋಟಾದಲ್ಲಿ ಸಂತೊಸಾ ಅವರು ತೆರಳಲು ಗೋಪಿಚಂದ್ ಅವಕಾಶ ಮಾಡಿಕೊಟ್ಟಿದ್ದಾರೆ‘ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ತಿಳಿಸಿದ್ದಾರೆ.</p>.<p>ಇದರಿಂದಾಗಿ ಭಾರತ ತಂಡದಲ್ಲಿ ಒಟ್ಟು ಒಂಬತ್ತು ಮಂದಿ ತೆರಳುತ್ತಿದ್ದಾರೆ. ಅದರಲ್ಲಿ ಮೂವರು ವಿದೇಶಿ ಕೋಚ್ಗಳು, ಫಿಸಿಯೊಗಳಾದ ಸುಮಾಂಶ್ ಸಿವಾಲೆಂಕಾ ಮತ್ತು ಎವಾಗ್ಲಿನಾ ಬೆದಂ ಮತ್ತು ನಾಲ್ವರು ಆಟಗಾರರು ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಟೋಕಿಯೊ ಒಲಿಂಪಿಕ್ಸ್ಗೆ ತೆರಳಲಿರುವ ಭಾರತ ಬ್ಯಾಡ್ಮಿಂಟನ್ ತಂಡದೊಂದಿಗೆ ಪ್ರಯಾಣ ಮಾಡದಿರಲು ರಾಷ್ಟ್ರೀಯ ಮುಖ್ಯ ಕೋಚ್ ಪಿ. ಗೋಪಿಚಂದ್ ನಿರ್ಧರಿಸಿದ್ದಾರೆ.</p>.<p>ಆಟಗಾರ ಬಿ. ಸಾಯಿ ಪ್ರಣೀತ್ ಅವರ ಸಿಂಗಲ್ಸ್ ಬ್ಯಾಡ್ಮಿಂಟನ್ ಟ್ರೇನರ್, ಇಂಡೋನೆಷ್ಯಾದ ಏಗಸ್ ದ್ವಿ ಸಂತೊಸಾಗೆ ತಂಡದೊಂದಿಗೆ ತೆರಳಲು ಗೋಪಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.</p>.<p>2012ರಲ್ಲಿ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗಳಿಸಿದ್ದ ಸೈನಾ ನೆಹ್ವಾಲ್ ಮತ್ತು ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಪಿ.ವಿ. ಸಿಂಧು ಅವರಿಗೆ ಗೋಪಿ ಮಾರ್ಗದರ್ಶನ ನೀಡಿದ್ದರು.</p>.<p>ಈ ಬಾರಿ ಬ್ಯಾಡ್ಮಿಂಟನ್ ತಂಡದೊಂದಿಗೆ ತೆರಳಲು ನೆರವು ಸಿಬ್ಬಂದಿಯಲ್ಲಿ ಐದು ಜನಕ್ಕೆ ಮಾತ್ರ ಅವಕಾಶ ನೀಡಲು ಭಾರತ ಒಲಿಂಪಿಕ್ ಸಂಸ್ಥೆ (ಐಒಸಿ) ನಿರ್ಧರಿಸಿದೆ. ಅದರಿಂದಾಗಿ ತಂಡದಲ್ಲಿ ಮೂವರು ಕೋಚ್ ಮತ್ತು ಇಬ್ಬರು ಫಿಸಿಯೊ ಇದ್ದಾರೆ.</p>.<p>ಗಚ್ಚಿಬೌಳಿ ಕ್ರೀಡಾಂಗಣದಲ್ಲಿ ಸಿಂಧು ಅವರು ಕೊರಿಯಾದ ಕೋಚ್ ಥೇ ಸಂಗ್ ಪಾರ್ಕ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಪ್ರಣಿತ್ ಅವರಿಗೆ ಸಂತೊಸಾ ಮಾರ್ಗದರ್ಶನ ನೀಡುತ್ತಿದ್ದಾರೆ. ಚಿರಾಗ್ ಮತ್ತು ಸಾತ್ವಿಕ್ ಅವರಿಗೆ ಡೆನ್ಮಾರ್ಕ್ನ ಮಥಾಯಿಸ್ ಬೊಯ್ ಮಾರ್ಗದರ್ಶನ ನೀಡುತ್ತಿದ್ದಾರೆ.</p>.<p>‘ಲಭ್ಯವಿದ್ದ ಒಂದು ಕೋಟಾದಲ್ಲಿ ಸಂತೊಸಾ ಅವರು ತೆರಳಲು ಗೋಪಿಚಂದ್ ಅವಕಾಶ ಮಾಡಿಕೊಟ್ಟಿದ್ದಾರೆ‘ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ತಿಳಿಸಿದ್ದಾರೆ.</p>.<p>ಇದರಿಂದಾಗಿ ಭಾರತ ತಂಡದಲ್ಲಿ ಒಟ್ಟು ಒಂಬತ್ತು ಮಂದಿ ತೆರಳುತ್ತಿದ್ದಾರೆ. ಅದರಲ್ಲಿ ಮೂವರು ವಿದೇಶಿ ಕೋಚ್ಗಳು, ಫಿಸಿಯೊಗಳಾದ ಸುಮಾಂಶ್ ಸಿವಾಲೆಂಕಾ ಮತ್ತು ಎವಾಗ್ಲಿನಾ ಬೆದಂ ಮತ್ತು ನಾಲ್ವರು ಆಟಗಾರರು ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>