ಈ ಕುರಿತು ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿರುವ ಕೆಎಎ ಕಾರ್ಯದರ್ಶಿ ಎ.ರಾಜವೇಲು, ‘ನಿಯಮದ ಪ್ರಕಾರ ಕನಿಷ್ಠ ಮೂವರು ಇದ್ದರೆ ಮಾತ್ರ ಸ್ಪರ್ಧೆ ನಡೆಸಲಾಗುವುದು. ರಕ್ಷಿತಾ ಅವರಿಗೆ ಅನುಕೂಲ ಮಾಡಿಕೊಡಲು ವಿಶ್ವವಿದ್ಯಾಲಯ ಹಾಗೂ ದಕ್ಷಿಣ ವಲಯ ವಿವಿ ಕೂಟದಲ್ಲಿ ಮಾಡಿರುವ ಸಾಧನೆಯ ಪ್ರಮಾಣ ಪತ್ರವನ್ನು ನಮಗೆ ಸಲ್ಲಿಸಲು ತಿಳಿಸಿದ್ದೇವೆ. ಆ ಪ್ರಮಾಣಪತ್ರಗಳನ್ನು ಎಐಎಫ್ಎಫ್ಗೆ ಕಳಿಸಿ, ರಾಷ್ಟ್ರಮಟ್ಟದ ಅರ್ಹತೆಗೆ ಪರಿಗಣಿಸಲು ಕೋರುತ್ತೇವೆ‘ ಎಂದಿದ್ದಾರೆ.