ಪಂದ್ಯದ ನಾಲ್ಕನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ರೂಪದಲ್ಲಿ ಆತಿಥೇಯರಿಗೆ ಮುನ್ನಡೆ ಗಳಿಸುವ ಅವಕಾಶ ಇತ್ತಾದರೂ ಭಾರತದ ಅನುಭವಿ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ಆಕರ್ಷಕ ಡೈವಿಂಗ್ ಮೂಲಕ ತಡೆದರು. ಅದಾದ ಐದನೇ ನಿಮಿಷದಲ್ಲಿ ಆಸ್ಟ್ರೇಲಿಯಾವು ಮೂರು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತು. ಆದರೆ, ಅವುಗಳನ್ನು ಶ್ರೀಜೇಶ್ ತಡೆಯುವ ಮೂಲಕ ಪರಾಕ್ರಮ ತೋರಿದರು. ಈ ಮಧ್ಯೆ ಭಾರತ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರಿಗೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತಾದರೂ ಅವರನ್ನು ಗುರಿ ಸೇರಿಸುವಲ್ಲಿ ಅವರು ವಿಫಲವಾದರು.