ಮೈಸೂರು: ಗ್ರ್ಯಾಂಡ್ಮಾಸ್ಟರ್ ಎಂ.ಎಸ್.ತೇಜ್ಕುಮಾರ್ ಅವರು ಮೈಸೂರಿನಲ್ಲಿ ಭಾನುವಾರ ಕೊನೆಗೊಂಡ ರಾಜ್ಯಮಟ್ಟದ ಮುಕ್ತ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಮೈಸೂರು ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ವಿ.ವಿ.ಜಿಮ್ಖಾನಾ ಹಾಲ್ನಲ್ಲಿ ನಡೆದ ಟೂರ್ನಿಯಲ್ಲಿ ಮೈಸೂರಿನ ತೇಜ್ಕುಮಾರ್ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಒಂಬತ್ತು ಪಾಯಿಂಟ್ ಕಲೆಹಾಕಿದರು.
ಓಜಸ್ ಕುಲಕರ್ಣಿ ಅವರು ‘ರನ್ನರ್ ಅಪ್’ ಸ್ಥಾನ ಪಡೆದರು. ಓಜಸ್, ಡಿ.ಯಶಸ್ ಮತ್ತು ಎಂ.ಶಿವಂತ್ ಅವರು ತಲಾ 7.5 ಪಾಯಿಂಟ್ಗಳನ್ನು ಕಲೆಹಾಕಿದರು.
ಉತ್ತಮ ‘ಟೈಬ್ರೇಕರ್’ ಅಂಕಗಳಿಂದ ಓಜಸ್ಗೆ ಎರಡನೇ ಸ್ಥಾನ ಲಭಿಸಿತು.
ಯಶಸ್ ಹಾಗೂ ಶಿವಂತ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದುಕೊಂಡರೆ, ಏಳು ಪಾಯಿಂಟ್ ಕಲೆಹಾಕಿದ ವಿ.ಪಿ.ಎಸ್. ದರ್ಶನ್ ಅವರು ಐದನೇ ಸ್ಥಾನ ಪಡೆದರು.