<p><strong>ಮುಂಬೈ:</strong> ವಿಶ್ವಕಪ್ ಟೂರ್ನಿಯಲ್ಲಿ ಐದು ಶತಕ ಗಳಿಸಿ ವಿಶ್ವದಾಖಲೆ ಬರೆದ ಭಾರತದ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು ಭಾನುವಾರ ಬೆಳಗಿನ ಜಾವ ಮುಂಬೈಗೆ ಮರಳಿದರು. ಆದರೆ, ವಿಮಾನ ನಿಲ್ದಾಣದಿಂದಲೇ ಅವರು ಟೀಕೆಗಳನ್ನು ಎದುರಿಸಬೇಕಾಯಿತು.</p>.<p>ಅಚ್ಚರಿಯೆಂದರೆ ತಂಡದ ಸೋಲಿನ ಕುರಿತ ಯಾವ ಟೀಕೆಯೂ ಅದರಲ್ಲಿ ಇರಲಿಲ್ಲ. ಬದಲಿಗೆ ರೋಹಿತ್ ಮತ್ತು ರಿತಿಕಾ ಸಜ್ದೆ ದಂಪತಿಯು ’ಬೇಜವಾಬ್ದಾರಿ ಪಾಲಕರು’ ಎಂಬ ಟೀಕೆಗೆ ಗುರಿಯಾದರು. ವಿಮಾನ ನಿಲ್ದಾಣದಿಂದ ಹೊರಬಂದ ಅವರು ತಮ್ಮ ಎಸ್ಯುವಿ ಕಾರ್ ಅನ್ನು ಚಾಲನೆ ಮಾಡಲು ಅಣಿಯಾದರು.</p>.<p>ಚಾಲಕನ ಪಕ್ಕದ ಆಸನದಲ್ಲಿ ರಿತಿಕಾ ಅವರು ತಮ್ಮ ಮಗು ಸಮೈರಾಳನ್ನು ತಮ್ಮ ಕಾಲುಗಳ ಮೇಲೆ ಕೂರಿಸಿಕೊಂಡು ಕುಳಿತರು.</p>.<p>ಇದನ್ನು ನೋಡಿದ ಟೋನಿ ಎಂಬುವವರು, ‘ಮೂರ್ಖತನ ಮಾಡಬೇಡಿ. ಮಗುವಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿಕೊಂಡಿಲ್ಲವೇಕೆ?’ ಎಂದು ಟ್ವೀಟ್ ಮಾಡಿದರು.ಅದರ ಬೆನ್ನಲ್ಲಿಯೇ ಹಲವರು ಅದಕ್ಕೆ ಪ್ರತಿಕ್ರಿಯಿಸಿದರು.</p>.<p>‘ಮುಂದಿನ ಸೀಟ್ನಲ್ಲಿ ತಮ್ಮ ತೊಡೆಯ ಮೇಲೆ ಮಗುವನ್ನು ಕೂರಿಸಿಕೊಂಡಿದ್ದಾರೆ. ಎಂತಹ ಬೇಜವಾಬ್ದಾರಿತನ ಇದು. ಅದರಲ್ಲೂ ಭಾರತದಲ್ಲಿ ಜನರು ಚಾಲನೆ ಮಾಡುವ ರೀತಿಯನ್ನು ನೋಡಿದರೆ ಭಯವಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ವಿಶ್ವಕಪ್ ಟೂರ್ನಿಯಲ್ಲಿ ಐದು ಶತಕ ಗಳಿಸಿ ವಿಶ್ವದಾಖಲೆ ಬರೆದ ಭಾರತದ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು ಭಾನುವಾರ ಬೆಳಗಿನ ಜಾವ ಮುಂಬೈಗೆ ಮರಳಿದರು. ಆದರೆ, ವಿಮಾನ ನಿಲ್ದಾಣದಿಂದಲೇ ಅವರು ಟೀಕೆಗಳನ್ನು ಎದುರಿಸಬೇಕಾಯಿತು.</p>.<p>ಅಚ್ಚರಿಯೆಂದರೆ ತಂಡದ ಸೋಲಿನ ಕುರಿತ ಯಾವ ಟೀಕೆಯೂ ಅದರಲ್ಲಿ ಇರಲಿಲ್ಲ. ಬದಲಿಗೆ ರೋಹಿತ್ ಮತ್ತು ರಿತಿಕಾ ಸಜ್ದೆ ದಂಪತಿಯು ’ಬೇಜವಾಬ್ದಾರಿ ಪಾಲಕರು’ ಎಂಬ ಟೀಕೆಗೆ ಗುರಿಯಾದರು. ವಿಮಾನ ನಿಲ್ದಾಣದಿಂದ ಹೊರಬಂದ ಅವರು ತಮ್ಮ ಎಸ್ಯುವಿ ಕಾರ್ ಅನ್ನು ಚಾಲನೆ ಮಾಡಲು ಅಣಿಯಾದರು.</p>.<p>ಚಾಲಕನ ಪಕ್ಕದ ಆಸನದಲ್ಲಿ ರಿತಿಕಾ ಅವರು ತಮ್ಮ ಮಗು ಸಮೈರಾಳನ್ನು ತಮ್ಮ ಕಾಲುಗಳ ಮೇಲೆ ಕೂರಿಸಿಕೊಂಡು ಕುಳಿತರು.</p>.<p>ಇದನ್ನು ನೋಡಿದ ಟೋನಿ ಎಂಬುವವರು, ‘ಮೂರ್ಖತನ ಮಾಡಬೇಡಿ. ಮಗುವಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿಕೊಂಡಿಲ್ಲವೇಕೆ?’ ಎಂದು ಟ್ವೀಟ್ ಮಾಡಿದರು.ಅದರ ಬೆನ್ನಲ್ಲಿಯೇ ಹಲವರು ಅದಕ್ಕೆ ಪ್ರತಿಕ್ರಿಯಿಸಿದರು.</p>.<p>‘ಮುಂದಿನ ಸೀಟ್ನಲ್ಲಿ ತಮ್ಮ ತೊಡೆಯ ಮೇಲೆ ಮಗುವನ್ನು ಕೂರಿಸಿಕೊಂಡಿದ್ದಾರೆ. ಎಂತಹ ಬೇಜವಾಬ್ದಾರಿತನ ಇದು. ಅದರಲ್ಲೂ ಭಾರತದಲ್ಲಿ ಜನರು ಚಾಲನೆ ಮಾಡುವ ರೀತಿಯನ್ನು ನೋಡಿದರೆ ಭಯವಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>