<p><strong>ಉಡುಪಿ:</strong> ಇಲ್ಲಿನ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಯೋನೆಕ್ಸ್ ಸನ್ರೈಸ್ ಆಲ್ ಇಂಡಿಯಾ ಸಬ್ ಜ್ಯೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ದಿನವಾದ ಮಂಗಳವಾರ ಕರ್ನಾಟಕದ ಅನುಷ್ಕಾ ಬರಾಯ್ ಉತ್ತಮ ಪ್ರದರ್ಶನ ನೀಡಿದರು.</p>.<p>13 ವರ್ಷದೊಳಗಿನವರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಮಹಾರಾಷ್ಟ್ರದ ಖುಷಿ ಸಿಂಗ್ ವಿರುದ್ಧ 15–3, 15–2 ಅಂತರದ ನೇರ ಸೆಟ್ಗಳಲ್ಲಿ ಅನುಷ್ಕಾ ಬರಾಯ್ ಗೆಲುವು ಸಾಧಿಸಿದರು.</p>.<p>2ನೇ ಸುತ್ತಿನಲ್ಲಿ ತಮಿಳುನಾಡಿನ ಇಯಾಜೀನ್ ವಿರುದ್ಧ 11-15 15-7 15-8 ಪಾಯಿಂಟ್ಸ್ಗಳೊಂದಿಗೆ ಜಯಗಳಿಸಿ ಮುಂದಿನ ಸುತ್ತು ಪ್ರವೇಶಿಸಿದರು.</p>.<p>ಕರ್ನಾಟಕದ ಪ್ರೀತಿ ಆರ್.ರಾವ್ ಕೂಡ ಎರಡನೇ ಸುತ್ತಿನಲ್ಲಿ ಮಹಾರಾಷ್ಟ್ರದ ಅನನ್ಯ ಅಗರ್ವಾಲ್ ವಿರುದ್ಧ 15–11,15–4 ನೇರ ಸೆಟ್ಗಳಲ್ಲಿ ಜಯ ಸಾಧಿಸಿದರು.</p>.<p>ಆದರೆ, ಬಾಲಕರ ವಿಭಾಗದಲ್ಲಿ ಕರ್ನಾಟಕ ತಂಡದಿಂದ ಉತ್ತಮ ಪ್ರದರ್ಶನ ಹೊರಹೊಮ್ಮಲಿಲ್ಲ. ಗಗನ್ ಎಸ್.ಗೌಡ ಉತ್ತರಾಘಂಡದ ವಂಶ್ ಪ್ರತಾಪ್ ಸಿಂಗ್ ವಿರುದ್ಧ ಹಾಗೂ ಪುಷ್ಕರ್ ಸಾಯಿ ಉತ್ತರ ಪ್ರದೇಶದ ಲಕ್ಷಯ್ ಗ್ರೋವರ್ ವಿರುದ್ಧ ಪರಾಭವಗೊಂಡರು.</p>.<p>ಬಾಲಕಿಯರ ಡಬಲ್ಸ್ನಲ್ಲಿ ರಾಜ್ಯದ ಆರಾಧನಾ ಪದಮಠ ಹಾಗೂ ಪ್ರೀತಿ ಕೆ.ರಾವ್ ಜೋಡಿ ಪುದುಚೇರಿಯ ನಸ್ರೀನ್ ಹಾಗೂ ಜನನಿಕ ಜೋಡಿಯನ್ನು 15-10 15-5 ನೇರ ಸೆಟ್ಗಳಿಂದ ಮಣಿಸಿತು.</p>.<p>ಇದೇವೇಳೆ, ರಾಜ್ಯದ ದಿಯಾ ಭೀಮಯ್ಯ, ಅಮೂಲ್ಯ ಅಭಿಲಾಶ್ ಕಶ್ಯಪ್ ಜೋಡಿ ತೆಲಂಗಾಣದ ಮಹೇಶ್ವರಿ, ಕೀರ್ತಿ ಮಂಚಾಲ ಜೋಡಿಯನ್ನು ಪರಾಭವಗೊಳಿಸಿ 2ನೇ ಸುತ್ತು ಪ್ರವೇಶಿಸಿತು.</p>.<p>ಟೂರ್ನಿ ಜುಲೈ 7ರವರೆಗೂ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಇಲ್ಲಿನ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಯೋನೆಕ್ಸ್ ಸನ್ರೈಸ್ ಆಲ್ ಇಂಡಿಯಾ ಸಬ್ ಜ್ಯೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ದಿನವಾದ ಮಂಗಳವಾರ ಕರ್ನಾಟಕದ ಅನುಷ್ಕಾ ಬರಾಯ್ ಉತ್ತಮ ಪ್ರದರ್ಶನ ನೀಡಿದರು.</p>.<p>13 ವರ್ಷದೊಳಗಿನವರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಮಹಾರಾಷ್ಟ್ರದ ಖುಷಿ ಸಿಂಗ್ ವಿರುದ್ಧ 15–3, 15–2 ಅಂತರದ ನೇರ ಸೆಟ್ಗಳಲ್ಲಿ ಅನುಷ್ಕಾ ಬರಾಯ್ ಗೆಲುವು ಸಾಧಿಸಿದರು.</p>.<p>2ನೇ ಸುತ್ತಿನಲ್ಲಿ ತಮಿಳುನಾಡಿನ ಇಯಾಜೀನ್ ವಿರುದ್ಧ 11-15 15-7 15-8 ಪಾಯಿಂಟ್ಸ್ಗಳೊಂದಿಗೆ ಜಯಗಳಿಸಿ ಮುಂದಿನ ಸುತ್ತು ಪ್ರವೇಶಿಸಿದರು.</p>.<p>ಕರ್ನಾಟಕದ ಪ್ರೀತಿ ಆರ್.ರಾವ್ ಕೂಡ ಎರಡನೇ ಸುತ್ತಿನಲ್ಲಿ ಮಹಾರಾಷ್ಟ್ರದ ಅನನ್ಯ ಅಗರ್ವಾಲ್ ವಿರುದ್ಧ 15–11,15–4 ನೇರ ಸೆಟ್ಗಳಲ್ಲಿ ಜಯ ಸಾಧಿಸಿದರು.</p>.<p>ಆದರೆ, ಬಾಲಕರ ವಿಭಾಗದಲ್ಲಿ ಕರ್ನಾಟಕ ತಂಡದಿಂದ ಉತ್ತಮ ಪ್ರದರ್ಶನ ಹೊರಹೊಮ್ಮಲಿಲ್ಲ. ಗಗನ್ ಎಸ್.ಗೌಡ ಉತ್ತರಾಘಂಡದ ವಂಶ್ ಪ್ರತಾಪ್ ಸಿಂಗ್ ವಿರುದ್ಧ ಹಾಗೂ ಪುಷ್ಕರ್ ಸಾಯಿ ಉತ್ತರ ಪ್ರದೇಶದ ಲಕ್ಷಯ್ ಗ್ರೋವರ್ ವಿರುದ್ಧ ಪರಾಭವಗೊಂಡರು.</p>.<p>ಬಾಲಕಿಯರ ಡಬಲ್ಸ್ನಲ್ಲಿ ರಾಜ್ಯದ ಆರಾಧನಾ ಪದಮಠ ಹಾಗೂ ಪ್ರೀತಿ ಕೆ.ರಾವ್ ಜೋಡಿ ಪುದುಚೇರಿಯ ನಸ್ರೀನ್ ಹಾಗೂ ಜನನಿಕ ಜೋಡಿಯನ್ನು 15-10 15-5 ನೇರ ಸೆಟ್ಗಳಿಂದ ಮಣಿಸಿತು.</p>.<p>ಇದೇವೇಳೆ, ರಾಜ್ಯದ ದಿಯಾ ಭೀಮಯ್ಯ, ಅಮೂಲ್ಯ ಅಭಿಲಾಶ್ ಕಶ್ಯಪ್ ಜೋಡಿ ತೆಲಂಗಾಣದ ಮಹೇಶ್ವರಿ, ಕೀರ್ತಿ ಮಂಚಾಲ ಜೋಡಿಯನ್ನು ಪರಾಭವಗೊಳಿಸಿ 2ನೇ ಸುತ್ತು ಪ್ರವೇಶಿಸಿತು.</p>.<p>ಟೂರ್ನಿ ಜುಲೈ 7ರವರೆಗೂ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>