<p><strong>ಬೆಂಗಳೂರು:</strong> ಎ.ಸಂಯುಕ್ತ ಮತ್ತು ಆರ್.ರಕ್ಷಿತ್ ಅವರು ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ.</p>.<p>ಭಾನುವಾರ ನಡೆದ ಫೈನಲ್ನಲ್ಲಿ ರಕ್ಷಿತ್ 6–11, 11–9, 11–3, 12–14, 11–7, 11–9ರಲ್ಲಿ ಅನಿರ್ಬನ್ರಾಯ್ ಚೌಧರಿ ಎದುರು ಗೆದ್ದರು.</p>.<p>ಸೆಮಿಫೈನಲ್ ಪಂದ್ಯಗಳಲ್ಲಿ ರಕ್ಷಿತ್ 6–11, 11–9, 11–6, 16–18, 11–8, 11–4ರಲ್ಲಿ ಶ್ರೇಯಲ್ ತೆಲಾಂಗ್ ಎದುರೂ, ಅನಿರ್ಬನ್ 8–11, 12–10, 6–11, 13–11, 11–9, 11–8ರಲ್ಲಿ ಶ್ರೇಯಸ್ ಎಸ್.ಕುಲಕರ್ಣಿ ಮೇಲೂ ವಿಜಯಿಯಾಗಿದ್ದರು.</p>.<p>ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸಂಯುಕ್ತ 11–5, 11–7, 11–5, 10–12, 11–8ರಲ್ಲಿ ಸುಶ್ಮಿತಾ ಆರ್.ಬಿದರಿ ಅವರನ್ನು ಮಣಿಸಿದರು.</p>.<p>ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಸಂಯುಕ್ತ 11–6, 11–8, 11–8, 15–13ರಲ್ಲಿ ಕೌಮುದಿ ಪಟ್ನಾಕರ್ ಎದುರೂ, ಸುಶ್ಮಿತಾ 8–11, 11–7, 11–8, 11–13, 11–9, 11–5ರಲ್ಲಿ ವಿ.ಖುಷಿ ವಿರುದ್ಧವೂ ಜಯಿಸಿದ್ದರು.</p>.<p>ಪುರುಷರ ವಿಭಾಗದ ನಾನ್ ಮೆಡಲಿಸ್ಟ್ ಸಿಂಗಲ್ಸ್ ಫೈನಲ್ನಲ್ಲಿ ರಾಘವ್ ಮುರಳಿ 12–14, 12–10, 11–9, 8–11, 11–7ರಲ್ಲಿ ಅಂಕಣ್ ಜೈನ್ ಎದುರು ಗೆದ್ದು ಪ್ರಶಸ್ತಿ ಪಡೆದರು.</p>.<p>ಮಿನಿ ಕೆಡೆಟ್ ಬಾಲಕರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಎನ್.ಅರ್ಣವ್ ಅವರ ಪಾಲಾಯಿತು. ಫೈನಲ್ನಲ್ಲಿ ಅರ್ಣವ್ 9–11, 11–5, 11–2, 11–7ರಲ್ಲಿ ಸಿದ್ಧಾಂತ್ ಧರಿವಾಲಾ ಅವರನ್ನು ಪರಾಭವಗೊಳಿಸಿದರು.</p>.<p>ಸೆಮಿಫೈನಲ್ನಲ್ಲಿ ಅರ್ಣವ್ 11–7, 11–6, 11–7ರಲ್ಲಿ ಸಮರ್ಥ್ಯ ಮಲ್ಹೋತ್ರಾ ಎದುರೂ, ಸಿದ್ಧಾಂತ್ 11–5, 11–8, 11–8ರಲ್ಲಿ ವೇದಾಂತ್ ವಶಿಷ್ಠ ಮೇಲೂ ಗೆದ್ದಿದ್ದರು.</p>.<p>ಬಾಲಕಿಯರ ವಿಭಾಗದ ಫೈನಲ್ನಲ್ಲಿ ಅಕ್ಷತಾ ಶ್ರೀಕರ್ 11–7, 11–7, 5–11, 11–6ರಲ್ಲಿ ಶಿವಾನಿ ಮಹೇಂದ್ರನ್ ಎದುರು ಗೆದ್ದರು.</p>.<p>ಸೆಮಿಫೈನಲ್ನಲ್ಲಿ ಅಕ್ಷತಾ 11–4, 11–0, 11–2ರಲ್ಲಿ ರಾಶಿ ವಿ.ರಾವ್ ಎದುರೂ, ಶಿವಾನಿ ಮಹೇಂದ್ರನ್ 11–8, 11–8, 11–8ರಲ್ಲಿ ಸುಮೇಧಾ ಕೆ.ಎಸ್.ಭಟ್ ವಿರುದ್ಧವೂ ವಿಜಯಿಯಾಗಿದ್ದರು.</p>.<p>ಕೆಡೆಟ್ ಬಾಲಕರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಕೆ.ಆಯುಷ್ 11–7, 6–11, 10–12, 11–6, 11–8ರಲ್ಲಿ ಸಿದ್ಧಾಂತ್ ವಾಸನ್ ಅವರನ್ನು ಸೋಲಿಸಿದರು.</p>.<p>ಸೆಮಿಫೈನಲ್ನಲ್ಲಿ ಸಿದ್ಧಾಂತ್ 11–3, 11–7, 6–11, 11–6ರಲ್ಲಿ ಮೊಹನೀಶ್ ನಂದಿ ನಾರಾ ಎದುರೂ, ಆಯುಷ್ 11–5, 8–11, 11–6, 11–8ರಲ್ಲಿ ಶೇಷಾಂತ್ ರಾಮಸ್ವಾಮಿ ಮೇಲೂ ಗೆದ್ದಿದ್ದರು.</p>.<p>ಬಾಲಕಿಯರ ವಿಭಾಗದಲ್ಲಿ ನೀತಿ ಅಗರವಾಲ್ ಚಾಂಪಿಯನ್ ಆದರು.</p>.<p>ಫೈನಲ್ನಲ್ಲಿ ನೀತಿ 10–12, 11–5, 14–12, 11–9ರಲ್ಲಿ ಸಾನ್ವಿ ವಿಶಾಲ್ ಮಂಡೇಕರ್ ಅವರನ್ನು ಮಣಿಸಿದರು.</p>.<p>ನಾಲ್ಕರ ಘಟ್ಟದ ಪೈಪೋಟಿಗಳಲ್ಲಿ ಸಾನ್ವಿ 6–11, 11–8, 11–8, 11–5ರಲ್ಲಿ ವೃಷಾಲಿ ಕಿಣಿ ಎದುರೂ, ನೀತಿ 2–11, 13–11, 6–11, 11–8, 11–9ರಲ್ಲಿ ಎಚ್.ಎ.ಪ್ರಾಣವಿ ಮೇಲೂ ವಿಜಯಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎ.ಸಂಯುಕ್ತ ಮತ್ತು ಆರ್.ರಕ್ಷಿತ್ ಅವರು ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ.</p>.<p>ಭಾನುವಾರ ನಡೆದ ಫೈನಲ್ನಲ್ಲಿ ರಕ್ಷಿತ್ 6–11, 11–9, 11–3, 12–14, 11–7, 11–9ರಲ್ಲಿ ಅನಿರ್ಬನ್ರಾಯ್ ಚೌಧರಿ ಎದುರು ಗೆದ್ದರು.</p>.<p>ಸೆಮಿಫೈನಲ್ ಪಂದ್ಯಗಳಲ್ಲಿ ರಕ್ಷಿತ್ 6–11, 11–9, 11–6, 16–18, 11–8, 11–4ರಲ್ಲಿ ಶ್ರೇಯಲ್ ತೆಲಾಂಗ್ ಎದುರೂ, ಅನಿರ್ಬನ್ 8–11, 12–10, 6–11, 13–11, 11–9, 11–8ರಲ್ಲಿ ಶ್ರೇಯಸ್ ಎಸ್.ಕುಲಕರ್ಣಿ ಮೇಲೂ ವಿಜಯಿಯಾಗಿದ್ದರು.</p>.<p>ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸಂಯುಕ್ತ 11–5, 11–7, 11–5, 10–12, 11–8ರಲ್ಲಿ ಸುಶ್ಮಿತಾ ಆರ್.ಬಿದರಿ ಅವರನ್ನು ಮಣಿಸಿದರು.</p>.<p>ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಸಂಯುಕ್ತ 11–6, 11–8, 11–8, 15–13ರಲ್ಲಿ ಕೌಮುದಿ ಪಟ್ನಾಕರ್ ಎದುರೂ, ಸುಶ್ಮಿತಾ 8–11, 11–7, 11–8, 11–13, 11–9, 11–5ರಲ್ಲಿ ವಿ.ಖುಷಿ ವಿರುದ್ಧವೂ ಜಯಿಸಿದ್ದರು.</p>.<p>ಪುರುಷರ ವಿಭಾಗದ ನಾನ್ ಮೆಡಲಿಸ್ಟ್ ಸಿಂಗಲ್ಸ್ ಫೈನಲ್ನಲ್ಲಿ ರಾಘವ್ ಮುರಳಿ 12–14, 12–10, 11–9, 8–11, 11–7ರಲ್ಲಿ ಅಂಕಣ್ ಜೈನ್ ಎದುರು ಗೆದ್ದು ಪ್ರಶಸ್ತಿ ಪಡೆದರು.</p>.<p>ಮಿನಿ ಕೆಡೆಟ್ ಬಾಲಕರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಎನ್.ಅರ್ಣವ್ ಅವರ ಪಾಲಾಯಿತು. ಫೈನಲ್ನಲ್ಲಿ ಅರ್ಣವ್ 9–11, 11–5, 11–2, 11–7ರಲ್ಲಿ ಸಿದ್ಧಾಂತ್ ಧರಿವಾಲಾ ಅವರನ್ನು ಪರಾಭವಗೊಳಿಸಿದರು.</p>.<p>ಸೆಮಿಫೈನಲ್ನಲ್ಲಿ ಅರ್ಣವ್ 11–7, 11–6, 11–7ರಲ್ಲಿ ಸಮರ್ಥ್ಯ ಮಲ್ಹೋತ್ರಾ ಎದುರೂ, ಸಿದ್ಧಾಂತ್ 11–5, 11–8, 11–8ರಲ್ಲಿ ವೇದಾಂತ್ ವಶಿಷ್ಠ ಮೇಲೂ ಗೆದ್ದಿದ್ದರು.</p>.<p>ಬಾಲಕಿಯರ ವಿಭಾಗದ ಫೈನಲ್ನಲ್ಲಿ ಅಕ್ಷತಾ ಶ್ರೀಕರ್ 11–7, 11–7, 5–11, 11–6ರಲ್ಲಿ ಶಿವಾನಿ ಮಹೇಂದ್ರನ್ ಎದುರು ಗೆದ್ದರು.</p>.<p>ಸೆಮಿಫೈನಲ್ನಲ್ಲಿ ಅಕ್ಷತಾ 11–4, 11–0, 11–2ರಲ್ಲಿ ರಾಶಿ ವಿ.ರಾವ್ ಎದುರೂ, ಶಿವಾನಿ ಮಹೇಂದ್ರನ್ 11–8, 11–8, 11–8ರಲ್ಲಿ ಸುಮೇಧಾ ಕೆ.ಎಸ್.ಭಟ್ ವಿರುದ್ಧವೂ ವಿಜಯಿಯಾಗಿದ್ದರು.</p>.<p>ಕೆಡೆಟ್ ಬಾಲಕರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಕೆ.ಆಯುಷ್ 11–7, 6–11, 10–12, 11–6, 11–8ರಲ್ಲಿ ಸಿದ್ಧಾಂತ್ ವಾಸನ್ ಅವರನ್ನು ಸೋಲಿಸಿದರು.</p>.<p>ಸೆಮಿಫೈನಲ್ನಲ್ಲಿ ಸಿದ್ಧಾಂತ್ 11–3, 11–7, 6–11, 11–6ರಲ್ಲಿ ಮೊಹನೀಶ್ ನಂದಿ ನಾರಾ ಎದುರೂ, ಆಯುಷ್ 11–5, 8–11, 11–6, 11–8ರಲ್ಲಿ ಶೇಷಾಂತ್ ರಾಮಸ್ವಾಮಿ ಮೇಲೂ ಗೆದ್ದಿದ್ದರು.</p>.<p>ಬಾಲಕಿಯರ ವಿಭಾಗದಲ್ಲಿ ನೀತಿ ಅಗರವಾಲ್ ಚಾಂಪಿಯನ್ ಆದರು.</p>.<p>ಫೈನಲ್ನಲ್ಲಿ ನೀತಿ 10–12, 11–5, 14–12, 11–9ರಲ್ಲಿ ಸಾನ್ವಿ ವಿಶಾಲ್ ಮಂಡೇಕರ್ ಅವರನ್ನು ಮಣಿಸಿದರು.</p>.<p>ನಾಲ್ಕರ ಘಟ್ಟದ ಪೈಪೋಟಿಗಳಲ್ಲಿ ಸಾನ್ವಿ 6–11, 11–8, 11–8, 11–5ರಲ್ಲಿ ವೃಷಾಲಿ ಕಿಣಿ ಎದುರೂ, ನೀತಿ 2–11, 13–11, 6–11, 11–8, 11–9ರಲ್ಲಿ ಎಚ್.ಎ.ಪ್ರಾಣವಿ ಮೇಲೂ ವಿಜಯಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>