ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌: ಪ್ರಶಸ್ತಿ ಕನಸಲ್ಲಿ ರಶೀದ್‌, ರಾಂಧವಾ

Last Updated 6 ಮೇ 2019, 18:24 IST
ಅಕ್ಷರ ಗಾತ್ರ

ಪಂಚಕುಲ: ಭಾರತದ ಗಾಲ್ಫರ್‌ಗಳಾದ ಜ್ಯೋತಿ ರಾಂಧವಾ, ರಶೀದ್‌ ಖಾನ್‌ ಮತ್ತು ಚಿರಾಗ್‌ ಕುಮಾರ್‌ ಅವರು ಮಂಗಳವಾರದಿಂದ ನಡೆಯುವ ಟಾಟಾ ಸ್ಟೀಲ್‌ ಪಿಜಿಟಿಐ ಪ್ಲೇಯರ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸುವ ಹುಮ್ಮಸ್ಸಿನಲ್ಲಿದ್ದಾರೆ.

₹ 30 ಲಕ್ಷ ಬಹುಮಾನ ಮೊತ್ತದ ಚಾಂಪಿಯನ್‌ಷಿಪ್‌ ಪಂಚಕುಲ ಗಾಲ್ಫ್‌ ಕ್ಲಬ್‌ನಲ್ಲಿ ಆಯೋಜನೆಯಾಗಿದೆ.

ಹನಿ ಬೈಸೋಯಾ, ಉದಯನ್‌ ಮಾನೆ ಮತ್ತು ಕ್ಷಿತಿಜ್‌ ನವೀದ್‌ ಕೌಲ್‌ ಅವರೂ ಭಾರತದ ಭರವಸೆಯಾಗಿದ್ದಾರೆ. ರಾಂಧವಾ ಅವರು ಮೊದಲ ಬಾರಿಗೆ ಪಂಚಕುಲ ಗಾಲ್ಫ್‌ ಕ್ಲಬ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಶ್ರೀಲಂಕಾದ ಗಾಲ್ಫರ್‌, ಹಾಲಿ ಚಾಂಪಿಯನ್‌ ಎನ್‌.ತಂಗರಾಜ್‌, ಅನುರಾ ರೋಹನಾ, ಮಿಥುನ್‌ ಪೆರೇರಾ, ಕೆ.ಪ್ರಭಾಕರನ್‌, ಬಾಂಗ್ಲಾದೇಶದ ಮೊಹಮ್ಮದ್‌ ಜಮಾಲ್‌ ಹುಸೇನ್ ಮೊಲ್ಲಾ ಮತ್ತು ಆಸ್ಟ್ರೇಲಿಯಾದ ಕುನಾಲ್‌ ಬಾಸಿನ್‌ ಅವರೂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT