<p><strong>ನವದೆಹಲಿ: </strong>ಭಾರತದಪ್ರಮುಖ ಟೇಬಲ್ ಟೆನಿಸ್ ಆಟಗಾರರಾದ ಶರತ್ ಕಮಲ್ ಹಾಗೂ ಜಿ.ಸತ್ಯನ್ ಅವರು ಕೋವಿಡ್ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವವರಿಗೆ ನೀಡುತ್ತಿರುವ ನೆರವನ್ನು 130 ಮಂದಿಗೆ ವಿಸ್ತರಿಸಿದ್ದಾರೆ. ಸದ್ಯ ಅವರು ದಾನಿಗಳಿಂದ ₹ 13 ಲಕ್ಷ ಹಣ ಸಂಗ್ರಹಿಸಿದ್ದಾರೆ.</p>.<p>ಈ ಮೊದಲು ಅವರು ₹ 10 ಲಕ್ಷ ನೆರವು ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದರು. ಆದರೆ ಹೆಚ್ಚಿನ ಹಣ ಸಂಗ್ರಹವಾದ ಹಿನ್ನೆಲೆಯಲ್ಲಿ ಇನ್ನಷ್ಟು ಆಟಗಾರರಿಗೆ ನೆರವು ನೀಡಲಿದ್ದಾರೆ. ಬಿಕ್ಕಟ್ಟಿನಲ್ಲಿರುವ ಆಟಗಾರರು ಒಂದು ಬಾರಿಯ ಆರ್ಥಿಕ ನೆರವಾಗಿ ₹ 10,000 ಸ್ವೀಕರಿಸಲಿದ್ದಾರೆ. ಹಿರಿಯ ಆಟಗಾರ್ತಿ ನೇಹಾ ಅಗರವಾಲ್ ಕೂಡ ಶರತ್ ಹಾಗೂ ಸತ್ಯನ್ ಅವರ ಕಾರ್ಯಕ್ಕೆ ಕೈಜೋಡಿಸಿದ್ದಾರೆ.</p>.<p>‘ನಾವು ಆರಂಭದಲ್ಲಿ 100 ಜನರಿಗೆ ನೆರವಾಗಲು ನಿರ್ಧರಿಸಿದ್ದೆವು. ಆದರೆ ನಮ್ಮ ಕಾರ್ಯಕ್ಕೆ ಹೆಚ್ಚಿನ ಸ್ಪಂದನೆ ವ್ಯಕ್ತವಾದ ಕಾರಣ ಇನ್ನೂ 30 ಆಟಗಾರರಿಗೆ ಧನಸಹಾಯ ನೀಡುತ್ತಿದ್ದೇವೆ. ಭಾನುವಾರದವರೆಗೆ ಹಣವನ್ನು ಸ್ವೀಕರಿಸುತ್ತೇವೆ. ಬಳಿಕ ಎಷ್ಟು ಆಟಗಾರರಿಗೆ ಹಂಚಬೇಕೆಂದು ತೀರ್ಮಾನಿಸುತ್ತೇವೆ’ ಎಂದು ಶರತ್ ಹೇಳಿದ್ದಾರೆ.</p>.<p>ಶರತ್ ಹಾಗೂ ಸತ್ಯನ್ ಆರಂಭದಲ್ಲಿ ಚೆನ್ನೈನ ಸ್ಥಳೀಯ ಎಂಟು ಕೋಚ್ಗಳಿಗೆ ಮಾತ್ರ ನೆರವು ನೀಡಲು ಬಯಸಿದ್ದರು. ಆದರೆ ನೇಹಾ ಅಗರವಾಲ್ ಹಾಗೂ ಅಲ್ಟಿಮೇಟ್ ಟೇಬಲ್ ಟೆನಿಸ್(ಯುಟಿಟಿ) ಲೀಗ್ನ ಬೆಂಬಲ ದೊರಕಿದ ಬಳಿಕ ಹೆಚ್ಚು ನಿಧಿ ಸಂಗ್ರಹವಾಗಿ ಹೆಚ್ಚು ಮಂದಿಗೆ ಹಂಚಲು ನೆರವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಭಾರತದಪ್ರಮುಖ ಟೇಬಲ್ ಟೆನಿಸ್ ಆಟಗಾರರಾದ ಶರತ್ ಕಮಲ್ ಹಾಗೂ ಜಿ.ಸತ್ಯನ್ ಅವರು ಕೋವಿಡ್ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವವರಿಗೆ ನೀಡುತ್ತಿರುವ ನೆರವನ್ನು 130 ಮಂದಿಗೆ ವಿಸ್ತರಿಸಿದ್ದಾರೆ. ಸದ್ಯ ಅವರು ದಾನಿಗಳಿಂದ ₹ 13 ಲಕ್ಷ ಹಣ ಸಂಗ್ರಹಿಸಿದ್ದಾರೆ.</p>.<p>ಈ ಮೊದಲು ಅವರು ₹ 10 ಲಕ್ಷ ನೆರವು ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದರು. ಆದರೆ ಹೆಚ್ಚಿನ ಹಣ ಸಂಗ್ರಹವಾದ ಹಿನ್ನೆಲೆಯಲ್ಲಿ ಇನ್ನಷ್ಟು ಆಟಗಾರರಿಗೆ ನೆರವು ನೀಡಲಿದ್ದಾರೆ. ಬಿಕ್ಕಟ್ಟಿನಲ್ಲಿರುವ ಆಟಗಾರರು ಒಂದು ಬಾರಿಯ ಆರ್ಥಿಕ ನೆರವಾಗಿ ₹ 10,000 ಸ್ವೀಕರಿಸಲಿದ್ದಾರೆ. ಹಿರಿಯ ಆಟಗಾರ್ತಿ ನೇಹಾ ಅಗರವಾಲ್ ಕೂಡ ಶರತ್ ಹಾಗೂ ಸತ್ಯನ್ ಅವರ ಕಾರ್ಯಕ್ಕೆ ಕೈಜೋಡಿಸಿದ್ದಾರೆ.</p>.<p>‘ನಾವು ಆರಂಭದಲ್ಲಿ 100 ಜನರಿಗೆ ನೆರವಾಗಲು ನಿರ್ಧರಿಸಿದ್ದೆವು. ಆದರೆ ನಮ್ಮ ಕಾರ್ಯಕ್ಕೆ ಹೆಚ್ಚಿನ ಸ್ಪಂದನೆ ವ್ಯಕ್ತವಾದ ಕಾರಣ ಇನ್ನೂ 30 ಆಟಗಾರರಿಗೆ ಧನಸಹಾಯ ನೀಡುತ್ತಿದ್ದೇವೆ. ಭಾನುವಾರದವರೆಗೆ ಹಣವನ್ನು ಸ್ವೀಕರಿಸುತ್ತೇವೆ. ಬಳಿಕ ಎಷ್ಟು ಆಟಗಾರರಿಗೆ ಹಂಚಬೇಕೆಂದು ತೀರ್ಮಾನಿಸುತ್ತೇವೆ’ ಎಂದು ಶರತ್ ಹೇಳಿದ್ದಾರೆ.</p>.<p>ಶರತ್ ಹಾಗೂ ಸತ್ಯನ್ ಆರಂಭದಲ್ಲಿ ಚೆನ್ನೈನ ಸ್ಥಳೀಯ ಎಂಟು ಕೋಚ್ಗಳಿಗೆ ಮಾತ್ರ ನೆರವು ನೀಡಲು ಬಯಸಿದ್ದರು. ಆದರೆ ನೇಹಾ ಅಗರವಾಲ್ ಹಾಗೂ ಅಲ್ಟಿಮೇಟ್ ಟೇಬಲ್ ಟೆನಿಸ್(ಯುಟಿಟಿ) ಲೀಗ್ನ ಬೆಂಬಲ ದೊರಕಿದ ಬಳಿಕ ಹೆಚ್ಚು ನಿಧಿ ಸಂಗ್ರಹವಾಗಿ ಹೆಚ್ಚು ಮಂದಿಗೆ ಹಂಚಲು ನೆರವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>