<p><strong>ನವದೆಹಲಿ: </strong>ಡೆನ್ಮಾರ್ಕ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಥಾಮಸ್ ಮತ್ತು ಉಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಗಾಗಿ ಆಯೋಜಿಸಲು ಉದ್ದೇಶಿಸಿದ್ದ ರಾಷ್ಟ್ರೀಯ ಶಿಬಿರವನ್ನು ಗುರುವಾರ ರದ್ದು ಮಾಡಲಾಗಿದೆ.</p>.<p>ಆಟಗಾರರು ಏಳು ದಿನ ಕ್ವಾರಂಟೈನ್ನಲ್ಲಿ ಇರುವುದನ್ನು ಕಡ್ಡಾಯ ಮಾಡಿರುವುದರಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಅಕ್ಟೋಬರ್ ಮೂರರಿಂದ 11ರ ವರೆಗೆ ನಡೆಯಲಿರುವ ಟೂರ್ನಿಗಾಗಿ ಸೆಪ್ಟೆಂಬರ್ ಏಳರಿಂದ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಶಿಬಿರವನ್ನು ಆಯೋಜಿಸಲು ನಿರ್ಧರಿಸಲಾಗಿತ್ತು.</p>.<p>ಕೋವಿಡ್–19ರ ಆತಂಕದಿಂದಾಗಿ ಶಿಬಿರಕ್ಕೂ ಮೊದಲು ಏಳು ದಿನ ಎಲ್ಲ 26 ಆಟಗಾರರು ಕ್ವಾರಂಟೈನ್ನಲ್ಲಿ ಇರಬೇಕು ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಸೂಚಿಸಿತ್ತು. ಇದಕ್ಕೆ ಆಟಗಾರರು ಮತ್ತು ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿತ್ತು.</p>.<p>’ಕ್ವಾರಂಟೈನಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸಾಯ್ ಸ್ಪಷ್ಟವಾಗಿ ಹೇಳಿದೆ. ಗುರುವಾರ ಈ ಕುರಿತು ವಿಸ್ತೃತ ಚರ್ಚೆ ನಡೆಯಿತು. ಸಾಯ್ ನಿರ್ದೇಶನ ಪಾಲಿಸಲು ಸಾಧ್ಯವಿಲ್ಲ ಎಂದು ಆಟಗಾರರು ಹೇಳಿದ್ದರಿಂದ ಶಿಬಿರವನ್ನು ರದ್ದು ಮಾಡಲು ಗುರುವಾರ ತೀರ್ಮಾನಿಸಲಾಯಿತು‘ ಎಂದು ಆಯ್ಕೆ ಸಮಿತಿಯ ಸದಸ್ಯ ವಿಮಲ್ ಕುಮಾರ್ ತಿಳಿಸಿದರು.</p>.<p>’ಶಿಬಿರ ನಡೆಯದೇ ಇರುವ ಕಾರಣ ಆಟಗಾರರು ತಮ್ಮ ರಾಜ್ಯಗಳ ಕೇಂದ್ರಗಳಲ್ಲಿ ಅಭ್ಯಾಸ ಮಾಡಲಿದ್ದು ಪ್ರತಿದಿನದ ಮಾಹಿತಿಯನ್ನು ಹೈದರಾಬಾದ್ಗೆ ಕಳುಹಿಸಬೇಕು‘ ಎಂದು ಹೇಳಿದ ವಿಮಲ್ ಕುಮಾರ್ ಶಿಬಿರ ಆಯೋಜಿಸದೆ ತಂಡವನ್ನು ಆಯ್ಕೆ ಮಾಡುವುದು ಕಷ್ಟಸಾಧ್ಯ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಡೆನ್ಮಾರ್ಕ್ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಥಾಮಸ್ ಮತ್ತು ಉಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಗಾಗಿ ಆಯೋಜಿಸಲು ಉದ್ದೇಶಿಸಿದ್ದ ರಾಷ್ಟ್ರೀಯ ಶಿಬಿರವನ್ನು ಗುರುವಾರ ರದ್ದು ಮಾಡಲಾಗಿದೆ.</p>.<p>ಆಟಗಾರರು ಏಳು ದಿನ ಕ್ವಾರಂಟೈನ್ನಲ್ಲಿ ಇರುವುದನ್ನು ಕಡ್ಡಾಯ ಮಾಡಿರುವುದರಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಅಕ್ಟೋಬರ್ ಮೂರರಿಂದ 11ರ ವರೆಗೆ ನಡೆಯಲಿರುವ ಟೂರ್ನಿಗಾಗಿ ಸೆಪ್ಟೆಂಬರ್ ಏಳರಿಂದ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಶಿಬಿರವನ್ನು ಆಯೋಜಿಸಲು ನಿರ್ಧರಿಸಲಾಗಿತ್ತು.</p>.<p>ಕೋವಿಡ್–19ರ ಆತಂಕದಿಂದಾಗಿ ಶಿಬಿರಕ್ಕೂ ಮೊದಲು ಏಳು ದಿನ ಎಲ್ಲ 26 ಆಟಗಾರರು ಕ್ವಾರಂಟೈನ್ನಲ್ಲಿ ಇರಬೇಕು ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಸೂಚಿಸಿತ್ತು. ಇದಕ್ಕೆ ಆಟಗಾರರು ಮತ್ತು ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿತ್ತು.</p>.<p>’ಕ್ವಾರಂಟೈನಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸಾಯ್ ಸ್ಪಷ್ಟವಾಗಿ ಹೇಳಿದೆ. ಗುರುವಾರ ಈ ಕುರಿತು ವಿಸ್ತೃತ ಚರ್ಚೆ ನಡೆಯಿತು. ಸಾಯ್ ನಿರ್ದೇಶನ ಪಾಲಿಸಲು ಸಾಧ್ಯವಿಲ್ಲ ಎಂದು ಆಟಗಾರರು ಹೇಳಿದ್ದರಿಂದ ಶಿಬಿರವನ್ನು ರದ್ದು ಮಾಡಲು ಗುರುವಾರ ತೀರ್ಮಾನಿಸಲಾಯಿತು‘ ಎಂದು ಆಯ್ಕೆ ಸಮಿತಿಯ ಸದಸ್ಯ ವಿಮಲ್ ಕುಮಾರ್ ತಿಳಿಸಿದರು.</p>.<p>’ಶಿಬಿರ ನಡೆಯದೇ ಇರುವ ಕಾರಣ ಆಟಗಾರರು ತಮ್ಮ ರಾಜ್ಯಗಳ ಕೇಂದ್ರಗಳಲ್ಲಿ ಅಭ್ಯಾಸ ಮಾಡಲಿದ್ದು ಪ್ರತಿದಿನದ ಮಾಹಿತಿಯನ್ನು ಹೈದರಾಬಾದ್ಗೆ ಕಳುಹಿಸಬೇಕು‘ ಎಂದು ಹೇಳಿದ ವಿಮಲ್ ಕುಮಾರ್ ಶಿಬಿರ ಆಯೋಜಿಸದೆ ತಂಡವನ್ನು ಆಯ್ಕೆ ಮಾಡುವುದು ಕಷ್ಟಸಾಧ್ಯ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>