<p><strong>ಬೆಂಗಳೂರು: ಅ</strong>ಮೋಘ ಆಟ ಮುಂದುವರಿಸಿದ ಕರ್ನಾಟಕದ ಪುರುಷ ಮತ್ತು ಮಹಿಳಾ ಟೆನಿಸ್ ಡಬಲ್ಸ್ ವಿಭಾಗದ ತಂಡಗಳು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಫೈನಲ್ಗೆ ಲಗ್ಗೆಯಿಟ್ಟವು.</p>.<p>ಗುಜರಾತ್ನ ಅಹಮದಾಬಾದ್ನ ಸಾಬರಮತಿ ರಿವರ್ಫ್ರಂಟ್ ಅಂಗಣದಲ್ಲಿ ಟೆನಿಸ್ಸ್ಪರ್ಧೆಗಳ ನಡೆಯುತ್ತಿವೆ. ಸೋಮವಾರ ನಡೆದ ಪುರುಷರ ಡಬಲ್ಸ್ ಸೆಮಿಫೈನಲ್ನಲ್ಲಿ ಕರ್ನಾಟಕದ ಆದಿಲ್ ಕಲ್ಯಾಣಪುರ ಮತ್ತು ಎಸ್.ಡಿ. ಪ್ರಜ್ವಲ್ ದೇವ್5-7,6-3,10-6ರಿಂದ ಆಂಧ್ರಪ್ರದೇಶದ ಶಿವದೀಪ ಕೋಸರಾಜು ಮತ್ತು ಅನಂತ್ ಮಣಿ ಅವರನ್ನು ಸೋಲಿಸಿ ಪ್ರಶಸ್ತಿ ಸುತ್ತು ತಲುಪಿದರು.</p>.<p>ಮಹಿಳಾ ಡಬಲ್ಸ್ನಲ್ಲಿ ಸೋಹಾ ಸಾದಿಕ್ ಮತ್ತು ಶರ್ಮದಾ ಬಾಲು ಜೋಡಿಯು6-2, 6-1ರಿಂದ ಹರಿಯಾಣದ ಸಂದೀಪ್ತಿ ಸಿಂಗ್ ಮತ್ತು ರಿತು ಒಹಲ್ಯಾನ್ ಅವರನ್ನು ಪರಾಭವಗೊಳಿಸಿದರು.</p>.<p>ಪ್ರಜ್ವಲ್, ಮನೀಷ್ ಜಿ. ಮತ್ತು ಶರ್ಮದಾ ಬಾಲು ಸಿಂಗಲ್ಸ್ ವಿಭಾಗಗಳಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದರು. ಪುರುಷರ ವಿಭಾಗದಲ್ಲಿ ಪ್ರಜ್ವಲ್6-4, 6-2ರಿಂದ ತಮಿಳುನಾಡಿನ ಅಭಿನವ್ ಸಂಜೀವ್ ಎದುರು, ಮನೀಷ್3-6, 7-5, 6-2ರಿಂದ ಹರಿಯಾಣದ ಕರಣ್ ಸಿಂಗ್ ವಿರುದ್ಧ ಗೆದ್ದರು. ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಶರ್ಮದಾ1-6, 6-3, 6-1ರಿಂದ ತೆಲಂಗಾಣದ ಪಾವನಿ ಪಾಠಕ್ ಸವಾಲು ಮೀರಿದರು.</p>.<p>ಕರ್ನಾಟಕ ಫುಟ್ಬಾಲ್ ತಂಡಕ್ಕೆ ಜಯ: ಶ್ರೀಧರ್ ಕೋಟಿಕೇಲ (4ನೇ ನಿಮಿಷ) ಮತ್ತು ಸತೀಶ್ ಕುಮಾರ್ (10ನೇ ನಿ.) ಅವರ ಕಾಲ್ಚಳಕದ ಬಲದಿಂದ ಕರ್ನಾಟಕ ಪುರುಷರ ಫುಟ್ಬಾಲ್ ತಂಡವು 2–1ರಿಂದ ಆತಿಥೇಯ ಗುಜರಾತ್ ತಂಡಕ್ಕೆ ಸೋಲುಣಿಸಿತು.</p>.<p>ಗುಜರಾತ್ ತಂಡಕ್ಕಾಗಿ ಪರ್ಮಾರ್ ಧರ್ಮೇಶ್ 52ನೇ ನಿಮಿಷದಲ್ಲಿ ಒಂದು ಗೋಲು ಹೊಡೆದರು.</p>.<p>ಸ್ಕೇಟಿಂಗ್ನಲ್ಲಿ ಚಿನ್ನ: ಕರ್ನಾಟಕದ ಮಹಿನ್ ಟಂಡನ್ ಅವರು ರಾಷ್ಟ್ರೀಯ ಕ್ರೀಡಾಕೂಟದಪುರುಷರ ಆರ್ಟಿಸ್ಟಿಕ್ ಸ್ಕೇಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಇದೇ ವಿಭಾಗದಲ್ಲಿ ಕಿರಣ್ ಕುಮಾರ್ ಮತ್ತು ಮಹಿಳೆಯರ ವಿಭಾಗದಲ್ಲಿ ಸುವರ್ಣಿಕಾ ಕಂಚಿನ ಪದಕಗಳಿಗೆ ಕೊರಳೊಡ್ಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ಅ</strong>ಮೋಘ ಆಟ ಮುಂದುವರಿಸಿದ ಕರ್ನಾಟಕದ ಪುರುಷ ಮತ್ತು ಮಹಿಳಾ ಟೆನಿಸ್ ಡಬಲ್ಸ್ ವಿಭಾಗದ ತಂಡಗಳು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಫೈನಲ್ಗೆ ಲಗ್ಗೆಯಿಟ್ಟವು.</p>.<p>ಗುಜರಾತ್ನ ಅಹಮದಾಬಾದ್ನ ಸಾಬರಮತಿ ರಿವರ್ಫ್ರಂಟ್ ಅಂಗಣದಲ್ಲಿ ಟೆನಿಸ್ಸ್ಪರ್ಧೆಗಳ ನಡೆಯುತ್ತಿವೆ. ಸೋಮವಾರ ನಡೆದ ಪುರುಷರ ಡಬಲ್ಸ್ ಸೆಮಿಫೈನಲ್ನಲ್ಲಿ ಕರ್ನಾಟಕದ ಆದಿಲ್ ಕಲ್ಯಾಣಪುರ ಮತ್ತು ಎಸ್.ಡಿ. ಪ್ರಜ್ವಲ್ ದೇವ್5-7,6-3,10-6ರಿಂದ ಆಂಧ್ರಪ್ರದೇಶದ ಶಿವದೀಪ ಕೋಸರಾಜು ಮತ್ತು ಅನಂತ್ ಮಣಿ ಅವರನ್ನು ಸೋಲಿಸಿ ಪ್ರಶಸ್ತಿ ಸುತ್ತು ತಲುಪಿದರು.</p>.<p>ಮಹಿಳಾ ಡಬಲ್ಸ್ನಲ್ಲಿ ಸೋಹಾ ಸಾದಿಕ್ ಮತ್ತು ಶರ್ಮದಾ ಬಾಲು ಜೋಡಿಯು6-2, 6-1ರಿಂದ ಹರಿಯಾಣದ ಸಂದೀಪ್ತಿ ಸಿಂಗ್ ಮತ್ತು ರಿತು ಒಹಲ್ಯಾನ್ ಅವರನ್ನು ಪರಾಭವಗೊಳಿಸಿದರು.</p>.<p>ಪ್ರಜ್ವಲ್, ಮನೀಷ್ ಜಿ. ಮತ್ತು ಶರ್ಮದಾ ಬಾಲು ಸಿಂಗಲ್ಸ್ ವಿಭಾಗಗಳಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದರು. ಪುರುಷರ ವಿಭಾಗದಲ್ಲಿ ಪ್ರಜ್ವಲ್6-4, 6-2ರಿಂದ ತಮಿಳುನಾಡಿನ ಅಭಿನವ್ ಸಂಜೀವ್ ಎದುರು, ಮನೀಷ್3-6, 7-5, 6-2ರಿಂದ ಹರಿಯಾಣದ ಕರಣ್ ಸಿಂಗ್ ವಿರುದ್ಧ ಗೆದ್ದರು. ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಶರ್ಮದಾ1-6, 6-3, 6-1ರಿಂದ ತೆಲಂಗಾಣದ ಪಾವನಿ ಪಾಠಕ್ ಸವಾಲು ಮೀರಿದರು.</p>.<p>ಕರ್ನಾಟಕ ಫುಟ್ಬಾಲ್ ತಂಡಕ್ಕೆ ಜಯ: ಶ್ರೀಧರ್ ಕೋಟಿಕೇಲ (4ನೇ ನಿಮಿಷ) ಮತ್ತು ಸತೀಶ್ ಕುಮಾರ್ (10ನೇ ನಿ.) ಅವರ ಕಾಲ್ಚಳಕದ ಬಲದಿಂದ ಕರ್ನಾಟಕ ಪುರುಷರ ಫುಟ್ಬಾಲ್ ತಂಡವು 2–1ರಿಂದ ಆತಿಥೇಯ ಗುಜರಾತ್ ತಂಡಕ್ಕೆ ಸೋಲುಣಿಸಿತು.</p>.<p>ಗುಜರಾತ್ ತಂಡಕ್ಕಾಗಿ ಪರ್ಮಾರ್ ಧರ್ಮೇಶ್ 52ನೇ ನಿಮಿಷದಲ್ಲಿ ಒಂದು ಗೋಲು ಹೊಡೆದರು.</p>.<p>ಸ್ಕೇಟಿಂಗ್ನಲ್ಲಿ ಚಿನ್ನ: ಕರ್ನಾಟಕದ ಮಹಿನ್ ಟಂಡನ್ ಅವರು ರಾಷ್ಟ್ರೀಯ ಕ್ರೀಡಾಕೂಟದಪುರುಷರ ಆರ್ಟಿಸ್ಟಿಕ್ ಸ್ಕೇಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಇದೇ ವಿಭಾಗದಲ್ಲಿ ಕಿರಣ್ ಕುಮಾರ್ ಮತ್ತು ಮಹಿಳೆಯರ ವಿಭಾಗದಲ್ಲಿ ಸುವರ್ಣಿಕಾ ಕಂಚಿನ ಪದಕಗಳಿಗೆ ಕೊರಳೊಡ್ಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>