ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಪುರ, ಡೆಲ್ಲಿ ತಂಡಗಳ ಜಯಭೇರಿ

ಪ್ರೊ ಕಬಡ್ಡಿ; ಮಿಂಚಿದ ರಾಹುಲ್ ಚೌಧರಿ, ನವೀನಕುಮಾರ್
Last Updated 15 ಅಕ್ಟೋಬರ್ 2022, 16:33 IST
ಅಕ್ಷರ ಗಾತ್ರ

ಬೆಂಗಳೂರು: ರಾಹುಲ್ ಚೌಧರಿ ಹಾಗೂ ಅರ್ಜುನ್ ದೇಶ್ವಾಲ್ ಅವರ ಅಮೋಘ ಆಟದ ಬಲದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪ್ಯಾಂಥರ್ಸ್ ತಂಡವು 25–18ರಿಂದ ಗುಜರಾತ್ ಜೈಂಟ್ಸ್‌ ವಿರುದ್ಧ ಜಯಿಸಿತು. ಆರಂಭದಿಂದಲೂ ಜೈಪುರ ತಂಡದ ಆಟಗಾರರು ಮೇಲುಗೈ ಸಾಧಿಸಿದರು. ಪ್ರಥಮಾರ್ಧಕ್ಕೆ ಜೈಪುರ ತಂಡವು 12–9ರಿಂದ ಮುನ್ನಡೆ ಗಳಿಸಿತು. ನಂತರದ ಅವಧಿಯಲ್ಲಿಯೂ (13–9) ಮುನ್ನಡೆ ಉಳಿಸಿಕೊಂಡಿತು.

ಪಿಂಕ್ ಪ್ಯಾಂಥರ್ಸ್ ತಂಡದ ರೇಡರ್ ರಾಹುಲ್ ಐದು ಅಂಕ ಗಳಿಸಿದರು. ಅಂಕುಶ್ ಮೂರು ಹಾಗೂ ಅರ್ಜುನ್ ದೇಶ್ವಾಲ್ ನಾಲ್ಕು ಅಂಕಗಳನ್ನು ಗಳಿಸಿ ತಂಡಕ್ಕೆ ಬಲ ತುಂಬಿದರು.

ಚೆನ್ನಾಗಿ ಆಡುತ್ತಿದ್ದ ಅಂಕುಶ್ ಒರಟು ಆಟವಾಡಿ ಹಸಿರು ಕಾರ್ಡ್ ದರ್ಶನ ಮಾಡಿದರು. ಗುಜರಾತ್ ತಂಡದ ಆಲ್‌ರೌಂಡರ್ ಶಂಕರ್ ಅವರಿಗೂ ರೆಫರಿ ಹಸಿರು ಕಾರ್ಡ್ ತೋರಿಸಿದರು. ತಂಡದ ಬದಲೀ ಆಟಗಾರ ಪ್ರತೀಕ್ ದಯಾ ಆರು ಅಂಕ ಗಳಿಸಿದರು.

ದಬಂಗ್ ಜಯಭೇರಿ: ಒಂದು ಡಜನ್ ಅಂಕ ಗಳಿಸಿದ ನಾಯಕ ನವೀನಕುಮಾರ್ ಮತ್ತು ಮಂಜೀತ್ ಅವರ ಮಿಂಚಿನ ದಾಳಿಯ ಆಟದ ಮೂಲಕ ದಬಂಗ್ ಡೆಲ್ಲಿ ತಂಡವು 46–26ರಿಂದ ತೆಲುಗು ಟೈಟನ್ಸ್‌ ವಿರುದ್ಧ ಜಯಿಸಿತು. ರವಿಕುಮಾರ್ ರಕ್ಷಣೆಯಲ್ಲಿ ನಾಲ್ಕು ಅಂಕಗಳ ಕಾಣಿಕೆ ನೀಡಿದರು.

ಟೈಟನ್ಸ್‌ ತಂಡದ ಸಿದ್ಧಾರ್ಥ್ ದೇಸಾಯಿ (6) ಹಾಗೂ ವಿನಯ್ (10) ಅಮೋಘ ದಾಳಿ ನಡೆಸಿದರು. ಆದರೂ ಗೆಲುವು ಸಾಧ್ಯವಾಗಲಿಲ್ಲ.

ಇಂದಿನ ಪಂದ್ಯಗಳು

ಪುಣೇರಿ ಪಲ್ಟನ್–ಯು ಮುಂಬಾ (ರಾತ್ರಿ 7.30)

ಯು.ಪಿ ಯೋಧಾ–ಬೆಂಗಳೂರು ಬುಲ್ಸ್ (ರಾತ್ರಿ 8.30)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT