<p><strong>ಬೆಂಗಳೂರು</strong>: ಅಮೋಘ ಚಾಲನಾ ಕೌಶಲ ಮೆರೆದ ಕರ್ನಾಟಕದ ಅಬ್ದುಲ್ ವಾಹಿದ್ ತನ್ವೀರ್, ಮೊರೊಕ್ಕೊದ ಎರ್ಫೌಡ್ನಲ್ಲಿ ನಡೆದ ಮೆರ್ಗೌಜಾ ಮೋಟಾರು ರ್ಯಾಲಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.</p>.<p>ಶೆರ್ಕೊ ಟಿವಿಎಸ್ ರ್ಯಾಲಿ ಫ್ಯಾಕ್ಟರಿ ತಂಡವನ್ನು ಪ್ರತಿನಿಧಿಸಿದ್ದ ಅಬ್ದುಲ್, ಎಂಡ್ಯುರೊ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.</p>.<p>ಭಾನುವಾರ ನಡೆದ ಅಂತಿಮ ಹಂತದ ಸ್ಪರ್ಧೆಯಲ್ಲಿ ಅಬ್ದುಲ್, ಉತ್ತಮ ಸಾಮರ್ಥ್ಯ ತೋರಿದರು. ಮರಳುಗಾಡಿನ ಇಳಿಜಾರಿಯಲ್ಲಿ ಅಮೋಘ ರೀತಿಯಲ್ಲಿ ಬೈಕ್ ಚಲಾಯಿಸಿದ ಅವರು ಮೊದಲಿಗರಾಗಿ ಗುರಿ ಮುಟ್ಟಿದರು.</p>.<p>ಕರ್ನಾಟಕದ ಮತ್ತೊಬ್ಬ ಚಾಲಕ ಕೆ.ಪಿ.ಅರವಿಂದ್, ರ್ಯಾಲಿ ವಿಭಾಗದಲ್ಲಿ ಒಟ್ಟಾರೆ 51ನೇ ಸ್ಥಾನ ಪಡೆದರು. ಐದನೇ ಹಂತದ ಸ್ಪರ್ಧೆಯನ್ನು ಉಡುಪಿಯ ಅರವಿಂದ್, 23ನೇಯವರಾಗಿ ಮುಗಿಸಿದರು.</p>.<p>‘ಇಲ್ಲಿ ಪ್ರಶಸ್ತಿ ಗೆದ್ದಿದ್ದರಿಂದ ತುಂಬಾ ಖುಷಿಯಾಗಿದೆ. ಬಹುಕಾಲದ ಕನಸು ನನಸಾದ ಸಮಯವಿದು. ಮುಂದಿನ ರ್ಯಾಲಿಗಳಲ್ಲೂ ಇದೇ ಸಾಮರ್ಥ್ಯ ಮುಂದುವರಿಸಿ ಇನ್ನಷ್ಟು ಪ್ರಶಸ್ತಿ ಗೆಲ್ಲುವುದು ನನ್ನ ಗುರಿ. ಅದಕ್ಕಾಗಿ ಈಗಿನಿಂದಲೇ ಎಲ್ಲಾ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡು ಸಾಗುತ್ತೇನೆ’ ಎಂದು ಅಬ್ದುಲ್ ಸಂತಸ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಅಮೋಘ ಚಾಲನಾ ಕೌಶಲ ಮೆರೆದ ಕರ್ನಾಟಕದ ಅಬ್ದುಲ್ ವಾಹಿದ್ ತನ್ವೀರ್, ಮೊರೊಕ್ಕೊದ ಎರ್ಫೌಡ್ನಲ್ಲಿ ನಡೆದ ಮೆರ್ಗೌಜಾ ಮೋಟಾರು ರ್ಯಾಲಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.</p>.<p>ಶೆರ್ಕೊ ಟಿವಿಎಸ್ ರ್ಯಾಲಿ ಫ್ಯಾಕ್ಟರಿ ತಂಡವನ್ನು ಪ್ರತಿನಿಧಿಸಿದ್ದ ಅಬ್ದುಲ್, ಎಂಡ್ಯುರೊ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.</p>.<p>ಭಾನುವಾರ ನಡೆದ ಅಂತಿಮ ಹಂತದ ಸ್ಪರ್ಧೆಯಲ್ಲಿ ಅಬ್ದುಲ್, ಉತ್ತಮ ಸಾಮರ್ಥ್ಯ ತೋರಿದರು. ಮರಳುಗಾಡಿನ ಇಳಿಜಾರಿಯಲ್ಲಿ ಅಮೋಘ ರೀತಿಯಲ್ಲಿ ಬೈಕ್ ಚಲಾಯಿಸಿದ ಅವರು ಮೊದಲಿಗರಾಗಿ ಗುರಿ ಮುಟ್ಟಿದರು.</p>.<p>ಕರ್ನಾಟಕದ ಮತ್ತೊಬ್ಬ ಚಾಲಕ ಕೆ.ಪಿ.ಅರವಿಂದ್, ರ್ಯಾಲಿ ವಿಭಾಗದಲ್ಲಿ ಒಟ್ಟಾರೆ 51ನೇ ಸ್ಥಾನ ಪಡೆದರು. ಐದನೇ ಹಂತದ ಸ್ಪರ್ಧೆಯನ್ನು ಉಡುಪಿಯ ಅರವಿಂದ್, 23ನೇಯವರಾಗಿ ಮುಗಿಸಿದರು.</p>.<p>‘ಇಲ್ಲಿ ಪ್ರಶಸ್ತಿ ಗೆದ್ದಿದ್ದರಿಂದ ತುಂಬಾ ಖುಷಿಯಾಗಿದೆ. ಬಹುಕಾಲದ ಕನಸು ನನಸಾದ ಸಮಯವಿದು. ಮುಂದಿನ ರ್ಯಾಲಿಗಳಲ್ಲೂ ಇದೇ ಸಾಮರ್ಥ್ಯ ಮುಂದುವರಿಸಿ ಇನ್ನಷ್ಟು ಪ್ರಶಸ್ತಿ ಗೆಲ್ಲುವುದು ನನ್ನ ಗುರಿ. ಅದಕ್ಕಾಗಿ ಈಗಿನಿಂದಲೇ ಎಲ್ಲಾ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡು ಸಾಗುತ್ತೇನೆ’ ಎಂದು ಅಬ್ದುಲ್ ಸಂತಸ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>