ಬೆಂಗಳೂರು: ನಗರದ ರಾಮಯ್ಯ ತಾಂತ್ರಿಕ ಸಂಸ್ಥೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಸಂಸ್ಥೆ ಆಯೋಜಿಸಿದ್ದ ಅಂತರ ಕಾಲೇಜು ಮುಕ್ತ ಬ್ಯಾಸ್ಕೆಟ್ಬಾಲ್ ಟೂರ್ನಿಯ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ರಾಮಯ್ಯ ಸಂಸ್ಥೆ ತಂಡ ಆತಿಥೇಯ ಮೀನಾಕ್ಷಿ ಸಂಸ್ಥೆಯನ್ನು 64–50ರಲ್ಲಿ ಮಣಿಸಿತು. ರೋಹನ್ ಮತ್ತು ಪ್ರತ್ಯಾಂಶು ಕ್ರಮವಗಿ 18 ಮತ್ತು 15 ಪಾಯಿಂಟ್ ಗಳಿಸಿ ರಾಮಯ್ಯ ಸಂಸ್ಥೆಯ ಗೆಲುವಿಗೆ ಕಾರಣರಾದರು.
ಸುಮಂತ್ (16 ಪಾಯಿಂಟ್ಸ್) ಮತ್ತು ಭುವನ್ (15 ಪಾಯಿಂಟ್ಸ್) ಮೀನಾಕ್ಷಿ ತಂಡದ ಪರವಾಗಿ ಮಿಂಚಿದರು.