<p><strong>ಆಲ್ಮಾಟಿ, ಕಜಕಸ್ತಾನ: </strong>ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿರುವ ಭಾರತದ ಪೈಲ್ವಾನ್ ರವಿ ದಹಿಯಾ, ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಆದರೆ ಮೊಣಕೈ ಗಾಯದ ಹಿನ್ನೆಲೆಯಲ್ಲಿ ಫೈನಲ್ನಿಂದ ಹಿಂದೆ ಸರಿದ ಬಜರಂಗ್ ಪೂನಿಯಾ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.</p>.<p>ರವಿ, ಈ ಆವೃತ್ತಿಯಲ್ಲಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ಗಳಿಸಿಕೊಟ್ಟರು. 57 ಕೆಜಿ ವಿಭಾಗದ ಫೈನಲ್ನಲ್ಲಿ ಅವರು ಇರಾನ್ನ ಅಲಿರೆಜಾ ನೊರ್ಸತೊಲಾಹ್ ಅವರನ್ನು ಸುಲಭವಾಗಿ ಮಣಿಸಿದರು.</p>.<p>ವೇಗದ ನಡೆಗಳಿಂದ ಗಮನಸೆಳೆದ ರವಿ 9–4ರಿಂದ ಅಲಿರೆಜಾ ಅವರಿಗೆ ಸೋಲುಣಿಸಿದರು.</p>.<p>ಮೊದಲ ಸುತ್ತಿನಲ್ಲಿ ಉಜ್ಬೆಕಿಸ್ತಾನದ ನೊದಿರ್ಜಾನ್ ಸಫರೊವ್ ಎದುರು 9–2ರಿಂದ ಗೆಲುವು ದಾಖಲಿಸಿದ್ದ ಅವರು, ಬಳಿಕ ಪ್ಯಾಲೆಸ್ಟೀನ್ನ ಅಲಿ ಎಂ.ಎಂ. ಅಬುರುಮೈಲ ವಿರುದ್ಧ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಯಿಸಿದರು.</p>.<p>65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಬಜರಂಗ್ ಅವರು ಕ್ವಾರ್ಟರ್ಫೈನಲ್ ಪಂದ್ಯದಲ್ಲೇ ಗಾಯದಿಂದ ಬಳಲಿದ್ದರು. ಫೈನಲ್ ಆಡಿದ್ದರೆ ನೋವು ಉಲ್ಬಣಗೊಳ್ಳುತ್ತಿತ್ತು ಎಂದು ಅವರು ತಿಳಿಸಿದರು.</p>.<p>ಚಿನ್ನದ ಪದಕದ ಸುತ್ತಿನಲ್ಲಿ ಅವರು, ಜಪಾನ್ನ ಪರಿಚಿತ ಎದುರಾಳಿ ತಕುಟೊ ಒಟೊಗುರಾ ಎದುರು ಸೆಣಸಬೇಕಿತ್ತು. 2018ರ ವಿಶ್ವ ಚಾಂಪಿಯನ್ಷಿಪ್ ಮತ್ತು ಕಳೆದ ವರ್ಷದ ಏಷ್ಯನ್ ಚಾಂಪಿಯನ್ಷಿಪ್ನ ಫೈನಲ್ಗಳಲ್ಲಿ ತಕುಟೊ ವಿರುದ್ಧ ಬಜರಂಗ್ ಸೋಲು ಅನುಭವಿಸಿದ್ದರು.</p>.<p>ಈ ಟೂರ್ನಿಯ ಸೆಮಿಫೈನಲ್ನಲ್ಲಿ ಬಜರಂಗ್, ಮಂಗೋಲಿಯಾದ ಬಿಲ್ಗೂನ್ ಸರ್ಮಾಂದಕ್ ಅವರನ್ನು ಮಣಿಸಿದ್ದರು.</p>.<p><strong>ಕರಣ್ಗೆ ಕಂಚು</strong></p>.<p>70 ಕೆಜಿ ವಿಭಾಗದಲ್ಲಿ ಕರಣ್ ಕಂಚಿನ ಪದಕ ಗಳಿಸಿದರು. ಕ್ವಾರ್ಟರ್ಫೈನಲ್ನಲ್ಲಿ 0–6ರಿಂದ ಕಜಕಸ್ತಾನದ ಸಿರ್ಬಾಜ್ ತಲ್ಗಟ್ ಎದುರು ಎಡವಿದ್ದ ಕರಣ್ ಅವರಿಗೆ ರೆಪಚೇಜ್ ಮೂಲಕ ಕಂಚಿನ ಪದಕದ ಪ್ಲೇ ಆಫ್ನಲ್ಲಿ ಆಡುವ ಅವಕಾಶ ಲಭಿಸಿತ್ತು. ಈ ಪಂದ್ಯದಲ್ಲಿ ಅವರು ಕೊರಿಯಾದ ಸಿಯುಂಗ್ಬಾಂಗ್ ಎದುರು 3–1ರಿಂದ ಗೆದ್ದರು.</p>.<p>ಸತ್ಯವರ್ತ್ ಕಡಿಯಾನ್ ಹಾಗೂ ನರಸಿಂಗ್ ಪಂಚಮ್ ಯಾದವ್ ಅವರು ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.</p>.<p>97 ಕೆಜಿ ವಿಭಾಗದಲ್ಲಿ ಸತ್ಯವರ್ತ್ 8–0ಯಿಂದ ಕಿರ್ಗಿಸ್ತಾನದ ಅರ್ಸಲಾನ್ಬೆಕ್ ತುರ್ದುಬೆಕೊವ್ ಅವರನ್ನು ಪರಾಭವಗೊಳಿಸಿ ಕ್ವಾರ್ಟರ್ಫೈನಲ್ ತಲುಪಿದ್ದರು. ಎಂಟರಘಟ್ಟದಲ್ಲಿ 4–1ರಿಂದ ಉಜ್ಬೆಕಿಸ್ತಾನದ ಮುಖಮ್ಮದ್ರಸೂಲ್ ರಖಿಮೊವ್ ಅವರನ್ನು ಚಿತ್ ಮಾಡಿದ್ದರು.</p>.<p>ಆದರೆ 25 ಸೆಕೆಂಡುಗಳಲ್ಲಿ ಕೊನೆಗೊಂಡ ನಾಲ್ಕರಘಟ್ಟದ ಹಣಾಹಣಿಯಲ್ಲಿ ಇರಾನ್ನ ಅಲಿ ಖಲೀಲ್ ಎದುರು ಸತ್ಯವರ್ತ್ ಮುಗ್ಗರಿಸಿದರು. ಅಲಿ ಅವರಿಗೆ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಗೆಲುವು ಒಲಿಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲ್ಮಾಟಿ, ಕಜಕಸ್ತಾನ: </strong>ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿರುವ ಭಾರತದ ಪೈಲ್ವಾನ್ ರವಿ ದಹಿಯಾ, ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಆದರೆ ಮೊಣಕೈ ಗಾಯದ ಹಿನ್ನೆಲೆಯಲ್ಲಿ ಫೈನಲ್ನಿಂದ ಹಿಂದೆ ಸರಿದ ಬಜರಂಗ್ ಪೂನಿಯಾ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.</p>.<p>ರವಿ, ಈ ಆವೃತ್ತಿಯಲ್ಲಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ ಗಳಿಸಿಕೊಟ್ಟರು. 57 ಕೆಜಿ ವಿಭಾಗದ ಫೈನಲ್ನಲ್ಲಿ ಅವರು ಇರಾನ್ನ ಅಲಿರೆಜಾ ನೊರ್ಸತೊಲಾಹ್ ಅವರನ್ನು ಸುಲಭವಾಗಿ ಮಣಿಸಿದರು.</p>.<p>ವೇಗದ ನಡೆಗಳಿಂದ ಗಮನಸೆಳೆದ ರವಿ 9–4ರಿಂದ ಅಲಿರೆಜಾ ಅವರಿಗೆ ಸೋಲುಣಿಸಿದರು.</p>.<p>ಮೊದಲ ಸುತ್ತಿನಲ್ಲಿ ಉಜ್ಬೆಕಿಸ್ತಾನದ ನೊದಿರ್ಜಾನ್ ಸಫರೊವ್ ಎದುರು 9–2ರಿಂದ ಗೆಲುವು ದಾಖಲಿಸಿದ್ದ ಅವರು, ಬಳಿಕ ಪ್ಯಾಲೆಸ್ಟೀನ್ನ ಅಲಿ ಎಂ.ಎಂ. ಅಬುರುಮೈಲ ವಿರುದ್ಧ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಯಿಸಿದರು.</p>.<p>65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಬಜರಂಗ್ ಅವರು ಕ್ವಾರ್ಟರ್ಫೈನಲ್ ಪಂದ್ಯದಲ್ಲೇ ಗಾಯದಿಂದ ಬಳಲಿದ್ದರು. ಫೈನಲ್ ಆಡಿದ್ದರೆ ನೋವು ಉಲ್ಬಣಗೊಳ್ಳುತ್ತಿತ್ತು ಎಂದು ಅವರು ತಿಳಿಸಿದರು.</p>.<p>ಚಿನ್ನದ ಪದಕದ ಸುತ್ತಿನಲ್ಲಿ ಅವರು, ಜಪಾನ್ನ ಪರಿಚಿತ ಎದುರಾಳಿ ತಕುಟೊ ಒಟೊಗುರಾ ಎದುರು ಸೆಣಸಬೇಕಿತ್ತು. 2018ರ ವಿಶ್ವ ಚಾಂಪಿಯನ್ಷಿಪ್ ಮತ್ತು ಕಳೆದ ವರ್ಷದ ಏಷ್ಯನ್ ಚಾಂಪಿಯನ್ಷಿಪ್ನ ಫೈನಲ್ಗಳಲ್ಲಿ ತಕುಟೊ ವಿರುದ್ಧ ಬಜರಂಗ್ ಸೋಲು ಅನುಭವಿಸಿದ್ದರು.</p>.<p>ಈ ಟೂರ್ನಿಯ ಸೆಮಿಫೈನಲ್ನಲ್ಲಿ ಬಜರಂಗ್, ಮಂಗೋಲಿಯಾದ ಬಿಲ್ಗೂನ್ ಸರ್ಮಾಂದಕ್ ಅವರನ್ನು ಮಣಿಸಿದ್ದರು.</p>.<p><strong>ಕರಣ್ಗೆ ಕಂಚು</strong></p>.<p>70 ಕೆಜಿ ವಿಭಾಗದಲ್ಲಿ ಕರಣ್ ಕಂಚಿನ ಪದಕ ಗಳಿಸಿದರು. ಕ್ವಾರ್ಟರ್ಫೈನಲ್ನಲ್ಲಿ 0–6ರಿಂದ ಕಜಕಸ್ತಾನದ ಸಿರ್ಬಾಜ್ ತಲ್ಗಟ್ ಎದುರು ಎಡವಿದ್ದ ಕರಣ್ ಅವರಿಗೆ ರೆಪಚೇಜ್ ಮೂಲಕ ಕಂಚಿನ ಪದಕದ ಪ್ಲೇ ಆಫ್ನಲ್ಲಿ ಆಡುವ ಅವಕಾಶ ಲಭಿಸಿತ್ತು. ಈ ಪಂದ್ಯದಲ್ಲಿ ಅವರು ಕೊರಿಯಾದ ಸಿಯುಂಗ್ಬಾಂಗ್ ಎದುರು 3–1ರಿಂದ ಗೆದ್ದರು.</p>.<p>ಸತ್ಯವರ್ತ್ ಕಡಿಯಾನ್ ಹಾಗೂ ನರಸಿಂಗ್ ಪಂಚಮ್ ಯಾದವ್ ಅವರು ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.</p>.<p>97 ಕೆಜಿ ವಿಭಾಗದಲ್ಲಿ ಸತ್ಯವರ್ತ್ 8–0ಯಿಂದ ಕಿರ್ಗಿಸ್ತಾನದ ಅರ್ಸಲಾನ್ಬೆಕ್ ತುರ್ದುಬೆಕೊವ್ ಅವರನ್ನು ಪರಾಭವಗೊಳಿಸಿ ಕ್ವಾರ್ಟರ್ಫೈನಲ್ ತಲುಪಿದ್ದರು. ಎಂಟರಘಟ್ಟದಲ್ಲಿ 4–1ರಿಂದ ಉಜ್ಬೆಕಿಸ್ತಾನದ ಮುಖಮ್ಮದ್ರಸೂಲ್ ರಖಿಮೊವ್ ಅವರನ್ನು ಚಿತ್ ಮಾಡಿದ್ದರು.</p>.<p>ಆದರೆ 25 ಸೆಕೆಂಡುಗಳಲ್ಲಿ ಕೊನೆಗೊಂಡ ನಾಲ್ಕರಘಟ್ಟದ ಹಣಾಹಣಿಯಲ್ಲಿ ಇರಾನ್ನ ಅಲಿ ಖಲೀಲ್ ಎದುರು ಸತ್ಯವರ್ತ್ ಮುಗ್ಗರಿಸಿದರು. ಅಲಿ ಅವರಿಗೆ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಗೆಲುವು ಒಲಿಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>