<p><strong>ನವದೆಹಲಿ</strong>: ಕರ್ನಾಟಕದ ಶ್ರೀಹರಿ ನಟರಾಜ್ ಮತ್ತು ಕೇರಳದ ಸಜನ್ ಪ್ರಕಾಶ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.</p>.<p>ಭಾರತ ಈಜು ಫೆಡರೇಷನ್ (ಎಸ್ಎಫ್ಐ) ಕಾಮನ್ವೆಲ್ತ್ ಕೂಟಕ್ಕೆ ನಾಲ್ವರು ಸದಸ್ಯರ ಭಾರತ ತಂಡವನ್ನು ಶನಿವಾರ ಪ್ರಕಟಿಸಿತು. ಸಜನ್ ಮತ್ತು ಶ್ರೀಹರಿ ಜತೆ ದೆಹಲಿಯ ಭರವಸೆಯ ಈಜು ಪಟು ಕುಶಾಗ್ರ ರಾವತ್ ಹಾಗೂ ಮಧ್ಯಪ್ರದೇಶದ ಅದ್ವೈತ್ ಪಾಗೆ ಅವರೂ ಸ್ಥಾನ ಪಡೆದುಕೊಂಡಿದ್ದಾರೆ.</p>.<p>ಕಾಮನ್ವೆಲ್ತ್ ಕೂಟಕ್ಕೆ ನಾಲ್ವರು ಈಜು ಸ್ಪರ್ಧಿಗಳನ್ನು ಕಳುಹಿಸುವ ಅವಕಾಶವನ್ನು ಎಸ್ಎಫ್ಐ ಪಡೆದುಕೊಂಡಿತ್ತು.</p>.<p>'ಕಳೆದ ಒಂದು ವರ್ಷದ ಅವಧಿಯಲ್ಲಿ ಸ್ಪರ್ಧಿಗಳ ಪ್ರದರ್ಶನವನ್ನು ನೋಡಿಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ. ಎಸ್ಎಫ್ಐ ನಿಗದಿಪಡಿಸಿದ್ದ ಸಮಯವನ್ನು ಕಂಡುಕೊಳ್ಳುವಲ್ಲಿ ಈ ಸ್ಪರ್ಧಿಗಳು ಯಶಸ್ವಿಯಾಗಿದ್ದಾರೆ’ ಎಂದು ಫೆಡರೇಷನ್ನ ಕಾರ್ಯದರ್ಶಿ ಮೋನಲ್ ಚೋಕ್ಸಿ ಹೇಳಿದ್ದಾರೆ.</p>.<p>ಶ್ರೀಹರಿ 50 ಮೀ., 100 ಮೀ. ಮತ್ತು 200 ಮೀ. ಬ್ಯಾಕ್ಸ್ಟ್ರೋಕ್ ವಿಭಾಗಗಳಲ್ಲಿ ಕಣಕ್ಕಿಳಿಯುವರು. ಟೋಕಿಯೊ ಒಲಿಂಪಿಕ್ಸ್ ಬಳಿಕ ಬೆಂಗಳೂರಿನ ಈಜು ಪಟು ಪಾಲ್ಗೊಳ್ಳುತ್ತಿರುವ ಪ್ರಮುಖ ಕೂಟ ಇದಾಗಿದೆ.</p>.<p>ಸಜನ್ 50 ಮೀ., 100 ಮೀ. ಮತ್ತು 200 ಮೀ. ಬಟರ್ಫ್ಲೈ ವಿಭಾಗಗಳಲ್ಲಿ ಸ್ಪರ್ಧಿಸುವರು. ತಮ್ಮ ನೆಚ್ಚಿನ ಸ್ಪರ್ಧೆ 200 ಮೀ.ನಲ್ಲಿ ಅವರು ಭಾರತಕ್ಕೆ ಮೊದಲ ಪದಕ ತಂದುಕೊಡುವ ವಿಶ್ವಾಸದಲ್ಲಿದ್ದಾರೆ.</p>.<p>ಕುಶಾಗ್ರ ಮತ್ತು ಅದ್ವೈತ್ 1,500 ಮೀ. ಫ್ರೀಸ್ಟೈಲ್ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಕುಶಾಗ್ರ 200 ಮೀ. ಹಾಗೂ 400 ಮೀ. ಫ್ರೀಸ್ಟೈಲ್ನಲ್ಲೂ ಪಾಲ್ಗೊಳ್ಳುವರು.</p>.<p>ಕಾಮನ್ವೆಲ್ತ್ ಕೂಟದ ಈಜು ಸ್ಪರ್ಧೆಯಲ್ಲಿ ಭಾರತ ಇದುವರೆಗೂ ಪದಕ ಜಯಿಸಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕರ್ನಾಟಕದ ಶ್ರೀಹರಿ ನಟರಾಜ್ ಮತ್ತು ಕೇರಳದ ಸಜನ್ ಪ್ರಕಾಶ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.</p>.<p>ಭಾರತ ಈಜು ಫೆಡರೇಷನ್ (ಎಸ್ಎಫ್ಐ) ಕಾಮನ್ವೆಲ್ತ್ ಕೂಟಕ್ಕೆ ನಾಲ್ವರು ಸದಸ್ಯರ ಭಾರತ ತಂಡವನ್ನು ಶನಿವಾರ ಪ್ರಕಟಿಸಿತು. ಸಜನ್ ಮತ್ತು ಶ್ರೀಹರಿ ಜತೆ ದೆಹಲಿಯ ಭರವಸೆಯ ಈಜು ಪಟು ಕುಶಾಗ್ರ ರಾವತ್ ಹಾಗೂ ಮಧ್ಯಪ್ರದೇಶದ ಅದ್ವೈತ್ ಪಾಗೆ ಅವರೂ ಸ್ಥಾನ ಪಡೆದುಕೊಂಡಿದ್ದಾರೆ.</p>.<p>ಕಾಮನ್ವೆಲ್ತ್ ಕೂಟಕ್ಕೆ ನಾಲ್ವರು ಈಜು ಸ್ಪರ್ಧಿಗಳನ್ನು ಕಳುಹಿಸುವ ಅವಕಾಶವನ್ನು ಎಸ್ಎಫ್ಐ ಪಡೆದುಕೊಂಡಿತ್ತು.</p>.<p>'ಕಳೆದ ಒಂದು ವರ್ಷದ ಅವಧಿಯಲ್ಲಿ ಸ್ಪರ್ಧಿಗಳ ಪ್ರದರ್ಶನವನ್ನು ನೋಡಿಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ. ಎಸ್ಎಫ್ಐ ನಿಗದಿಪಡಿಸಿದ್ದ ಸಮಯವನ್ನು ಕಂಡುಕೊಳ್ಳುವಲ್ಲಿ ಈ ಸ್ಪರ್ಧಿಗಳು ಯಶಸ್ವಿಯಾಗಿದ್ದಾರೆ’ ಎಂದು ಫೆಡರೇಷನ್ನ ಕಾರ್ಯದರ್ಶಿ ಮೋನಲ್ ಚೋಕ್ಸಿ ಹೇಳಿದ್ದಾರೆ.</p>.<p>ಶ್ರೀಹರಿ 50 ಮೀ., 100 ಮೀ. ಮತ್ತು 200 ಮೀ. ಬ್ಯಾಕ್ಸ್ಟ್ರೋಕ್ ವಿಭಾಗಗಳಲ್ಲಿ ಕಣಕ್ಕಿಳಿಯುವರು. ಟೋಕಿಯೊ ಒಲಿಂಪಿಕ್ಸ್ ಬಳಿಕ ಬೆಂಗಳೂರಿನ ಈಜು ಪಟು ಪಾಲ್ಗೊಳ್ಳುತ್ತಿರುವ ಪ್ರಮುಖ ಕೂಟ ಇದಾಗಿದೆ.</p>.<p>ಸಜನ್ 50 ಮೀ., 100 ಮೀ. ಮತ್ತು 200 ಮೀ. ಬಟರ್ಫ್ಲೈ ವಿಭಾಗಗಳಲ್ಲಿ ಸ್ಪರ್ಧಿಸುವರು. ತಮ್ಮ ನೆಚ್ಚಿನ ಸ್ಪರ್ಧೆ 200 ಮೀ.ನಲ್ಲಿ ಅವರು ಭಾರತಕ್ಕೆ ಮೊದಲ ಪದಕ ತಂದುಕೊಡುವ ವಿಶ್ವಾಸದಲ್ಲಿದ್ದಾರೆ.</p>.<p>ಕುಶಾಗ್ರ ಮತ್ತು ಅದ್ವೈತ್ 1,500 ಮೀ. ಫ್ರೀಸ್ಟೈಲ್ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಕುಶಾಗ್ರ 200 ಮೀ. ಹಾಗೂ 400 ಮೀ. ಫ್ರೀಸ್ಟೈಲ್ನಲ್ಲೂ ಪಾಲ್ಗೊಳ್ಳುವರು.</p>.<p>ಕಾಮನ್ವೆಲ್ತ್ ಕೂಟದ ಈಜು ಸ್ಪರ್ಧೆಯಲ್ಲಿ ಭಾರತ ಇದುವರೆಗೂ ಪದಕ ಜಯಿಸಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>