ಭಾರತ ಬ್ಯಾಸ್ಕೆಟ್ಬಾಲ್ ತಂಡಕ್ಕೆ ವಿಶೇಷ್ ನಾಯಕ

ಬೆಂಗಳೂರು: ಸಾಬಾ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲಿರುವ ಭಾರತ ಬ್ಯಾಸ್ಕೆಟ್ಬಾಲ್ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಶಶಾಂಕ್ ಜಯಶಂಕರ್ ರೈ ಸ್ಥಾನ ಪಡೆದಿದ್ದಾರೆ.
ವಿಶೇಷ್ ಭೃಗುವಂಶಿ ಭಾರತ ತಂಡದ ನಾಯಕತ್ವ ವಹಿಸಿದ್ದಾರೆ.
ನವೆಂಬರ್ 15ರಿಂದ 20ರವರೆಗೆ ಬಾಂಗ್ಲಾದೇಶದ ಢಾಕಾದಲ್ಲಿ ಸಾಬಾ ಚಾಂಪಿಯನ್ಷಿಪ್ ನಿಗದಿಯಾಗಿದೆ. ಭಾರತ ಅಲ್ಲದೆ ಶ್ರೀಲಂಕಾ, ಮಾಲ್ಡಿವ್ಸ್, ಬಾಂಗ್ಲಾದೇಶ, ನೇಪಾಳ ತಂಡಗಳು ಭಾಗವಹಿಸಲಿವೆ.
ಭಾರತ ತಂಡ ಇಂತಿದೆ: ವಿಶೇಷ್ ಭೃಗುವಂಶಿ (ನಾಯಕ) ಶಶಾಂಕ್ ಜಯಶಂಕರ್ ರೈ, ಮುಯಿನ್ ಬೆಕ್ ಹಫೀಜ್, ಅರವಿಂದ್ ಕುಮಾರ್ ಮುತ್ತುಕೃಷ್ಣನ್, ಪಾಲ್ಪ್ರೀತ್ ಸಿಂಗ್ ಬ್ರಾರ್, ದೀಪಕ್ ಚೌಧರಿ, ಅಮ್ಜೋತ್ ಸಿಂಗ್ ಗಿಲ್, ಅಮೃತ್ಪಾಲ್ ಸಿಂಗ್, ಪಿಯೂಷ್ ಮೀನಾ, ಸೆಜಿನ್ ಮ್ಯಾಥ್ಯು, ಪ್ರಶಾಂತ್ ಸಿಂಗ್ ರಾವತ್, ಲಾಲ್ರಿನಾ ರೆಂಥ್ಲೆಯ್. ಮುಖ್ಯ ಕೋಚ್: ವೆಸೆಲಿನ್ ಮ್ಯಾಟಿಚ್. ಸಹಾಯಕ ಕೋಚ್ ಮತ್ತು ವ್ಯವಸ್ಥಾಪಕ: ಥಾಂಕ್ಚನ್ ಮುಲಕಲ್ ಚಾಕೊ. ಫಿಸಿಯೊ: ಶಿವ ಷಣ್ಮುಗ ಸಿಂಗ್ ವೀರಪಾಂಡಿ. ಫೀಬಾ ರೆಫರಿ: ಇಮ್ರಾನ್ ಅಲಿ ಬೇಗ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.