ಭುವನೇಶ್ವರ: ವಿಶ್ವ ಕಪ್ ಹಾಕಿಯಲ್ಲಿ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪುವುದು ನಮ್ಮ ಮೊದಲ ಆದ್ಯತೆ ಎಂದು ಭಾರತ ತಂಡದ ನಾಯಕ ಮನಪ್ರೀತ್ ಸಿಂಗ್ ಹೇಳಿದರು.
ಇದೇ 28ರಿಂದ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಸಿದ್ಧತೆ ಆರಂಭಗೊಳಿಸಿದೆ. ಅಭ್ಯಾಸದ ನಡುವೆ ಗುರುವಾರ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಮನಪ್ರೀತ್ ಸಿಂಗ್ ‘ಗುಂಪು ಹಂತದ ಎಲ್ಲ ಪಂದ್ಯದಲ್ಲಿ ಗೆಲುವು ಸಾಧಿಸುವ ಭರವಸೆ ಇದೆ’ ಎಂದರು.