ನವದೆಹಲಿ: ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಅಂಕಿತಾ ರೈನಾ ಹಾಗೂ ದಿವಿಜ್ ಶರಣ್ ಅವರನ್ನು ರಾಷ್ಟ್ರೀಯ ಟೆನಿಸ್ ಫೆಡರೇಷನ್, ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡುವ ಸಾಧ್ಯತೆಯಿದೆ. ಡೇವಿಸ್ ಕಪ್ ತಂಡದ ಕೋಚ್ ಆಗಿದ್ದ ನಂದನ್ ಬಾಲ್ ಅವರನ್ನು ಧ್ಯಾನ್ಚಂದ್ ಪುರಸ್ಕಾರಕ್ಕೆ ಹೆಸರಿಸಲು ಚಿಂತನೆ ನಡೆಸಿದೆ.