<p><strong>ಬೆಂಗಳೂರು</strong>: ಎರಡನೇ ಶ್ರೇಯಾಂಕದ ಒಲಿವರ್ ಕ್ರಾಫರ್ಡ್ ಅವರು ಎಸ್.ಎಂ.ಕೃಷ್ಣ ಸ್ಮರಣಾರ್ಥ ಓಪನ್ ಐಟಿಎಫ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು.</p><p>ಕಬ್ಬನ್ ಪಾರ್ಕ್ನಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಐಟಿಎಫ್ ಎಂ25 ಟ್ರೋಫಿ ಟೂರ್ನಿಯ ಫೈನಲ್ನಲ್ಲಿ ಬ್ರಿಟನ್ನ 25 ವರ್ಷ ವಯಸ್ಸಿನ ಕ್ರಾಫರ್ಡ್ 5-2 ಗೇಮ್ಗಳ ಮುನ್ನಡೆಯಲ್ಲಿದ್ದಾಗ ಅಗ್ರಶ್ರೇಯಾಂಕದ ಜೇ ಕ್ಲಾರ್ಕ್ ಗಾಯಾಳಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. </p><p>ಒಟ್ಟು ₹25.67 ಲಕ್ಷ ಬಹುಮಾನ ಮೊತ್ತವನ್ನು ಒಳಗೊಂಡಿದ್ದ ಟೂರ್ನಿಯಲ್ಲಿ ಪ್ರಶಸ್ತಿ ವಿಜೇತ ಕ್ರಾಫರ್ಡ್ ₹3.94 ಲಕ್ಷ ಬಹುಮಾನದೊಂದಿಗೆ 25 ಎಟಿಪಿ ಪಾಯಿಂಟ್ಸ್<br>ಗಳನ್ನು ತನ್ನದಾಗಿಸಿಕೊಂಡರು. ಕ್ರಾಫರ್ಡ್ಗೆ ಇದು ಸತತ ಮೂರನೇ ಐಟಿಎಫ್ ಎಂ25 ಟ್ರೋಫಿ ಮತ್ತು ಋತುವಿನ ಒಟ್ಟಾರೆ ನಾಲ್ಕನೇ ಪ್ರಶಸ್ತಿಯಾಗಿದೆ.</p><p>26 ವರ್ಷ ವಯಸ್ಸಿನ ಕ್ಲಾರ್ಕ್ ಕಳೆದ ಎಂಟು ವಾರಗಳಿಂದ ಭಾರತ ಪ್ರವಾಸದಲ್ಲಿದ್ದು, ಈ ವೇಳೆ ಸತತ ನಾಲ್ಕು ಟೂರ್ನಿಗಳಲ್ಲಿ ಫೈನಲ್ ತಲುಪಿದ್ದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದ್ದಿದ್ದ ಅವರು, ಬಲಗಾಲಿನ ನೋವಿನೊಂದಿಗೆ ಪ್ರಶಸ್ತಿ ಸುತ್ತಿನಲ್ಲಿ ಕಣಕ್ಕೆ ಇಳಿದಿದ್ದರು.</p><p>ಇದು ಬ್ರಿಟನ್ ಆಟಗಾರರ ಸೆಣಸಾಟವಾಗಿತ್ತು. ವಿಶ್ವ ರ್ಯಾಂಕಿಂಗ್ನಲ್ಲಿ 277 ಸ್ಥಾನ ಹೊಂದಿದ್ದ ಕ್ಲಾರ್ಕ್ನ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದರು. ಆದರೆ, 293ನೇ ಕ್ರಮಾಂಕದ ಕ್ರಾಫರ್ಡ್ ಅವರ ಚುರುಕಿನ ಆಟದ ಎದುರು ಕ್ಲಾರ್ಕ್ ನಿರುತ್ತರರಾದರು. ಮೊದಲ ಸೆಟ್ನಲ್ಲಿ 2-5 <br>ಹಿನ್ನಡೆಯಲ್ಲಿದ್ದಾಗ ಕ್ಲಾರ್ಕ್ ನಿವೃತ್ತಿ ಪಡೆದರು.</p><p>ವೃತ್ತಿಜೀವನದಲ್ಲಿ ಕ್ಲಾರ್ಕ್ ಮತ್ತು ಕ್ರಾಫರ್ಡ್ ಅವರಿಗೆ ಇದು ಎರಡನೇ ಮುಖಾಮುಖಿ. ಇದಕ್ಕೂ ಮೊದಲು 2023ರ ಮೇ ತಿಂಗಳಲ್ಲಿ ವರ್ನಮೊ ಐಟಿಎಫ್ ಎಂ25 ಟೂರ್ನಿಯ ಸೆಮಿಫೈನಲ್ನ ರೋಚಕ ಹಣಾಹಣಿಯಲ್ಲಿ ಕ್ರಾಫರ್ಡ್ 5-7, 7-6(2), 7-6(6)ರ ಮೂರು ಸೆಟ್ಗಳಿಂದ ಕ್ಲಾರ್ಕ್ ಅವರನ್ನು ಮಣಿಸಿದ್ದರು. ಹೀಗಾಗಿ, ಭಾನುವಾರದ ಪಂದ್ಯದಲ್ಲಿ ನಿಕಟ ಪೈಪೋಟಿ ನಿರೀಕ್ಷಿಸಲಾಗಿತ್ತು. </p><p>‘ಇದು ನಿರಾಶಾದಾಯಕ ಅಂತ್ಯ. ಆದರೆ, ಸ್ಪರ್ಧೆಯಿಂದ ಹಿಂದೆ ಸರಿಯುವ ಮೂಲಕ ಕ್ಲಾರ್ಕ್ ಅವರು ತಮ್ಮ ದೇಹಕ್ಕೆ ಆಗಬಹುದಾದ ಇನ್ನಷ್ಟು ಹಾನಿಯನ್ನು ತಪ್ಪಿಸಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು, ಈ ಋತುವಿನಲ್ಲಿ ಭಾರತದ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ’ ಎಂದು ಕ್ರಾಫರ್ಡ್ ಪ್ರತಿಕ್ರಿಯಿಸಿದರು.</p><p>‘ಸತತ ನಾಲ್ಕು ವಾರಗಳಲ್ಲಿ ಹಾರ್ಡ್ ಕೋರ್ಟ್ನಲ್ಲಿ 20 ಪಂದ್ಯಗಳನ್ನು ಆಡಿದ್ದೆ. ವಿಶೇಷವಾಗಿ ಸರ್ವ್ ಮಾಡುವಾಗ ತೀವ್ರವಾಗಿ ಕಾಲುನೋವು ಕಾಡಿತು. ಆಟ ಮುಂದುವರಿಸಿದರೆ ನೋವು ಇನ್ನಷ್ಟು ಜಾಸ್ತಿಯಾಗುವ ಅಪಾಯವಿತ್ತು’ ಎಂದು ರನ್ನರ್ ಅಪ್ ಕ್ಲಾರ್ಕ್ ಹೇಳಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಎರಡನೇ ಶ್ರೇಯಾಂಕದ ಒಲಿವರ್ ಕ್ರಾಫರ್ಡ್ ಅವರು ಎಸ್.ಎಂ.ಕೃಷ್ಣ ಸ್ಮರಣಾರ್ಥ ಓಪನ್ ಐಟಿಎಫ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡರು.</p><p>ಕಬ್ಬನ್ ಪಾರ್ಕ್ನಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಐಟಿಎಫ್ ಎಂ25 ಟ್ರೋಫಿ ಟೂರ್ನಿಯ ಫೈನಲ್ನಲ್ಲಿ ಬ್ರಿಟನ್ನ 25 ವರ್ಷ ವಯಸ್ಸಿನ ಕ್ರಾಫರ್ಡ್ 5-2 ಗೇಮ್ಗಳ ಮುನ್ನಡೆಯಲ್ಲಿದ್ದಾಗ ಅಗ್ರಶ್ರೇಯಾಂಕದ ಜೇ ಕ್ಲಾರ್ಕ್ ಗಾಯಾಳಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. </p><p>ಒಟ್ಟು ₹25.67 ಲಕ್ಷ ಬಹುಮಾನ ಮೊತ್ತವನ್ನು ಒಳಗೊಂಡಿದ್ದ ಟೂರ್ನಿಯಲ್ಲಿ ಪ್ರಶಸ್ತಿ ವಿಜೇತ ಕ್ರಾಫರ್ಡ್ ₹3.94 ಲಕ್ಷ ಬಹುಮಾನದೊಂದಿಗೆ 25 ಎಟಿಪಿ ಪಾಯಿಂಟ್ಸ್<br>ಗಳನ್ನು ತನ್ನದಾಗಿಸಿಕೊಂಡರು. ಕ್ರಾಫರ್ಡ್ಗೆ ಇದು ಸತತ ಮೂರನೇ ಐಟಿಎಫ್ ಎಂ25 ಟ್ರೋಫಿ ಮತ್ತು ಋತುವಿನ ಒಟ್ಟಾರೆ ನಾಲ್ಕನೇ ಪ್ರಶಸ್ತಿಯಾಗಿದೆ.</p><p>26 ವರ್ಷ ವಯಸ್ಸಿನ ಕ್ಲಾರ್ಕ್ ಕಳೆದ ಎಂಟು ವಾರಗಳಿಂದ ಭಾರತ ಪ್ರವಾಸದಲ್ಲಿದ್ದು, ಈ ವೇಳೆ ಸತತ ನಾಲ್ಕು ಟೂರ್ನಿಗಳಲ್ಲಿ ಫೈನಲ್ ತಲುಪಿದ್ದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದ್ದಿದ್ದ ಅವರು, ಬಲಗಾಲಿನ ನೋವಿನೊಂದಿಗೆ ಪ್ರಶಸ್ತಿ ಸುತ್ತಿನಲ್ಲಿ ಕಣಕ್ಕೆ ಇಳಿದಿದ್ದರು.</p><p>ಇದು ಬ್ರಿಟನ್ ಆಟಗಾರರ ಸೆಣಸಾಟವಾಗಿತ್ತು. ವಿಶ್ವ ರ್ಯಾಂಕಿಂಗ್ನಲ್ಲಿ 277 ಸ್ಥಾನ ಹೊಂದಿದ್ದ ಕ್ಲಾರ್ಕ್ನ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದರು. ಆದರೆ, 293ನೇ ಕ್ರಮಾಂಕದ ಕ್ರಾಫರ್ಡ್ ಅವರ ಚುರುಕಿನ ಆಟದ ಎದುರು ಕ್ಲಾರ್ಕ್ ನಿರುತ್ತರರಾದರು. ಮೊದಲ ಸೆಟ್ನಲ್ಲಿ 2-5 <br>ಹಿನ್ನಡೆಯಲ್ಲಿದ್ದಾಗ ಕ್ಲಾರ್ಕ್ ನಿವೃತ್ತಿ ಪಡೆದರು.</p><p>ವೃತ್ತಿಜೀವನದಲ್ಲಿ ಕ್ಲಾರ್ಕ್ ಮತ್ತು ಕ್ರಾಫರ್ಡ್ ಅವರಿಗೆ ಇದು ಎರಡನೇ ಮುಖಾಮುಖಿ. ಇದಕ್ಕೂ ಮೊದಲು 2023ರ ಮೇ ತಿಂಗಳಲ್ಲಿ ವರ್ನಮೊ ಐಟಿಎಫ್ ಎಂ25 ಟೂರ್ನಿಯ ಸೆಮಿಫೈನಲ್ನ ರೋಚಕ ಹಣಾಹಣಿಯಲ್ಲಿ ಕ್ರಾಫರ್ಡ್ 5-7, 7-6(2), 7-6(6)ರ ಮೂರು ಸೆಟ್ಗಳಿಂದ ಕ್ಲಾರ್ಕ್ ಅವರನ್ನು ಮಣಿಸಿದ್ದರು. ಹೀಗಾಗಿ, ಭಾನುವಾರದ ಪಂದ್ಯದಲ್ಲಿ ನಿಕಟ ಪೈಪೋಟಿ ನಿರೀಕ್ಷಿಸಲಾಗಿತ್ತು. </p><p>‘ಇದು ನಿರಾಶಾದಾಯಕ ಅಂತ್ಯ. ಆದರೆ, ಸ್ಪರ್ಧೆಯಿಂದ ಹಿಂದೆ ಸರಿಯುವ ಮೂಲಕ ಕ್ಲಾರ್ಕ್ ಅವರು ತಮ್ಮ ದೇಹಕ್ಕೆ ಆಗಬಹುದಾದ ಇನ್ನಷ್ಟು ಹಾನಿಯನ್ನು ತಪ್ಪಿಸಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು, ಈ ಋತುವಿನಲ್ಲಿ ಭಾರತದ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ’ ಎಂದು ಕ್ರಾಫರ್ಡ್ ಪ್ರತಿಕ್ರಿಯಿಸಿದರು.</p><p>‘ಸತತ ನಾಲ್ಕು ವಾರಗಳಲ್ಲಿ ಹಾರ್ಡ್ ಕೋರ್ಟ್ನಲ್ಲಿ 20 ಪಂದ್ಯಗಳನ್ನು ಆಡಿದ್ದೆ. ವಿಶೇಷವಾಗಿ ಸರ್ವ್ ಮಾಡುವಾಗ ತೀವ್ರವಾಗಿ ಕಾಲುನೋವು ಕಾಡಿತು. ಆಟ ಮುಂದುವರಿಸಿದರೆ ನೋವು ಇನ್ನಷ್ಟು ಜಾಸ್ತಿಯಾಗುವ ಅಪಾಯವಿತ್ತು’ ಎಂದು ರನ್ನರ್ ಅಪ್ ಕ್ಲಾರ್ಕ್ ಹೇಳಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>